ನೆಲ್ಯಾಡಿ: ಯುವ ಜನತೆಯು ಅಕ್ರಮ ಅನಾಚಾರ, ಗಾಂಜ ಮದ್ಯ ವ್ಯಸನಿಯಂತ ದುಷ್ಚಟಗಳಿಂದ ತುಂಬಿದ ಪ್ರಸಕ್ತ ಸನ್ನಿವೇಶದಲ್ಲಿ “ಯೌವ್ವನ ಮರೆಯಾಗುವ ಮುನ್ನ” ಎಂಬ ಧ್ಯೇಯ ವಾಕ್ಯವನ್ನು ಮುಂದಿಟ್ಟು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಪ್ರತೀ ಶಾಖಾ ಮಟ್ಟದಲ್ಲಿ ಹಮ್ಮಿಕೊಂಡಿರುವ ಯುನಿಟ್ ಸಮ್ಮೇಳನವು ಅಕ್ಟೋಬರ್ 23 ಮಂಗಳವಾರ ನೆಲ್ಯಾಡಿ ಸುನ್ನೀ ಸೆಂಟರ್ ಸಂಭಾಂಗಣದಲ್ಲಿ ನಡೆಯಿತು.
ಕೇಂದ್ರ ಜುಮಾ ಮಸೀದಿ ಖತೀಬರಾದ ಬಹು| ಅಲ್ಹಾಜ್ ಅಬೂಹನ್ನತ್ ಮುಹಮ್ಮದ್ ಸಖಾಫಿಯವರು ಕಾರ್ಯಕ್ರಮನನ್ನು ದುಆಃ ಮೂಲಕ ಉಧ್ಘಾಟಿಸಿ ಮಾತನಾಡಿದರು.
SSF ಉಪ್ಪಿನಂಗಡಿ ಡಿವಿಶನ್ ನಾಯಕರಾದ ಬಹು| ಎಫ್.ಹೆಚ್ ಮುಹಮ್ಮದ್ ಮಿಸ್ಬಾಹಿ ಯವರು “ಯೌವನ ಮರೆಯಾಗುವ ಮುನ್ನ” ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಸ್ಥಳೀಯ ಶಾಖಾ ಅಧ್ಯಕ್ಷ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಹು ಬಹು ಶರೀಫ್ ಸಖಾಫಿ, ಪ್ರಿನ್ಸಿಪಾಲ್ ಅಲ್ ಬದ್ರಿಯಾ ಶರೀಅತ್ ಕಾಲೇಜು ನೆಲ್ಯಾಡಿ. ರಫೀಕ್ ಸಖಾಫಿ ಆತೂರು, ಎನ್.ಎಸ್ ಸುಲೈಮಾನ್ ಅಧ್ಯಕ್ಷರು sys ನೆಲ್ಯಾಡಿ. ಉಮ್ಮರ್ ತಾಜ್
ಉಪಾಧ್ಯಕ್ಷರು sma ಉಪ್ಪಿನಂಗಡಿ ರೀಜನಲ್. ಮುಸ್ತಫಾ ಪಟ್ಟೆ, ಪ್ರ ಕಾರ್ಯದರ್ಶಿ ನೆಲ್ಯಾಡಿ ಸೆಕ್ಟರ್, ಕೆಸಿಎಫ್ ಸದಸ್ಯರುಗಳಾದ ಲತೀಫ್ ಪಡ್ಡಡ್ಕ, ಲತೀಫ್ ಮುದ್ದಿಗೆ, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು
ಇರ್ಶಾದ್ ಕೆ.ಇ ಸ್ವಾಗತಿಸಿ, ಮುಸ್ತಫ ಹಿದಾಯತ್ ನಗರ ವಂದಿಸಿದರು.
ವರದಿ:ರಿಯಾ ನೆಲ್ಯಾಡಿ















ಇನ್ನಷ್ಟು ಸುದ್ದಿಗಳು
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ