janadhvani

Kannada Online News Paper

SSF ಇಳಂತಿಲ ಮುರ ಯೂನಿಟ್ ಕಾನ್ಫರೆನ್ಸ್ ಆ 26ಕ್ಕೆ

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ SSF ‘ಯೌವನ ಮರೆಯಾಗುವ ಮುನ್ನ’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಾಂತ ಎಲ್ಲಾ ಘಟಕಗಳಲ್ಲಿ ನಡೆಸುತ್ತಿರುವ ಯೂನಿಟ್ ಸಮ್ಮೇಳನ ಅಕ್ಟೋಬರ್ 26 ರಂದು ಇಳಂತಿಲ ಮುರ SSF ಶಾಖೆ ವತಿಯಿಂದ ಖುವ್ವತ್ತುಲ್ ಇಸ್ಲಾಂ ಜುಮಾ ಮಸೀದಿಯ ವಠಾರದಲ್ಲಿ ಜರಗಲಿದೆ.

ಮಗ್ರಿಬ್ ನಮಾಜಿನ ಬಳಿಕ ಮಾಸಿಕ ಬದ್ರ್ ಮೌಲಿದ್ ಹಾಗೂ ಯೂನಿಟ್ ಕಾನ್ಫರೆನ್ಸ್
ಶಾಖೆ ಅಧ್ಯಕ್ಷರಾದ ಅಹ್ಮದ್ ಅಲಿ ಸಅದಿ ಅಧ್ಯಕ್ಷತೆಯಲ್ಲಿ, ‘ಯೌವ್ವನ ಮರೆಯಾಗುವ ಮುನ್ನ’ ಎಂಬ ವಿಷಯದ ಕುರಿತು ಜಿ ಎಂ ಶರೀಫ್ ಲತ್ವೀಫಿ ಕುದ್ರಡ್ಕ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ