ಬೀಟಿಗೆ:- ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಬೀಟಿಗೆ ಶಾಖೆ ವತಿಯಿಂದ ಯುನಿಟ್ ಕಾನ್ಫರೆನ್ಸ್ ಒ.18ರಂದು ಬೀಟಿಗೆ ಮದರಸದಲ್ಲಿ ನಡೆಯಿತು.
“ಯೌವ್ವನ ಮರೆಯಾಗುವ ಮುನ್ನ” ವೆಂಬ ವಿಷಯಧಾರಿತವಾಗಿ ಯುವ ಸಮೂಹಕ್ಕೆ ಅರ್ಥವತ್ತಾದ ಉಪನ್ಯಾಸವನ್ನು ಮೈದಾನಿಮೂಲೆ ಖತೀಬರಾದ ಅಬ್ದುಲ್ ರಝ್ಝಾಕ್ ಖಾಸಿಮಿರವರು ನೀಡಿದರು.
ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಬೀಟಿಗೆ ತಾಜುಲ್ ಉಲಾಮ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಕರಿಮಜಲು ವಹಿಸಿದ್ದರು.
ಈ ಸಂಧರ್ಭದಲ್ಲಿ ತೌಸೀಫ್ ಮುಸ್ಲಿಯಾರ್,ರಾಶೀದ್ ಸಖಾಫಿ, ಪುತ್ತೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ರಫೀಕ್ ಬೀಟಿಗೆ, ಎಸ್ವೈಎಸ್ ಪುತ್ತೂರು ಬ್ರಾಂಚ್ ಕಾರ್ಯದರ್ಶಿ ಸ್ವಾಲೀಹ್ ಮುರ, ಬೀಟಿಗೆ ಎಸ್ವೈಎಸ್ ಕಾರ್ಯದರ್ಶಿ ರಝಾಕ್ ಅನಡ್ಕ, ಎಸ್ಸೆಸ್ಸೆಫ್ ಬೀಟಿಗೆ ಶಾಖೆ ಉಸ್ತುವಾರಿ ಶಮೀರ್ ಬನ್ನೂರು, ಎಸ್ಸೆಸ್ಸೆಫ್ ಬನ್ನೂರು ಶಾಖೆ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಬನ್ನೂರು,ಕಾರ್ಯಕರ್ತರಾದ ಸಿರಾಜುದ್ದೀನ್, ಕರೀಂ, ಅಬ್ದುಲ್ಲ,ಜಾಬೀರ್ ಇನ್ನಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬೀಟಿಗೆ ಶಾಖೆ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಖಾಫಿ ಸ್ವಾಗತಿಸಿ , ಎಸ್ಸೆಸ್ಸೆಫ್ ಬೀಟಿಗೆ ಶಾಖೆಯ ಕಾರ್ಯದರ್ಶಿ ಮುನೀರ್ ಬೀಟಿಗೆ ವಂದಿಸಿದರು.
-ವರದಿ:-ಇಬ್ರಾಹಿಂ ಖಲೀಲ್ ಬನ್ನೂರು















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ