janadhvani

Kannada Online News Paper

ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ

ಎಟ್ಟಿಕ್ಕುಳಂ ; ಸಯ್ಯಿದ್ ಮದನಿ ಅರಬಿಕ್ ಕಾಲೇಜ್ ಉಳ್ಳಾಲದಲ್ಲಿ 65 ವರ್ಷಗಳ ಕಾಲ ದರ್ಸ್ ನಡೆಸಿದ ತಾಜುಲ್ ಉಲಮಾರ ಸವಿನೆನಪಿಗಾಗಿ ಅವರು ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂ ನಲ್ಲಿ ಸ್ಥಾಪಿಸಲಾದ ‘ತಾಜುಲ್ ಉಲಮಾ ದರ್ಸ್’ ಗಾಗಿ 10 ಲಕ್ಷ ರೂಪಾಯಿಯ ಧನಸಹಾಯ ನೀಡಲಾಯಿತು..

ತಾಜುಲ್ ಉಲಮಾ ಉರೂಸ್ ಸ್ವಾಗತ ಸಮಿತಿ ಕರ್ನಾಟಕ ಇದರ ಚೇರ್ಮೇನ್ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಮೊಹಲ್ಲಾಗಳಿಂದ ಸಂಗ್ರಹಿಸಲಾದ ಧನವನ್ನು ತಾಜುಲ್ ಉಲಮಾ ಉರೂಸ್ ಮುಬಾರಕ್ ವೇದಿಕೆಯಲ್ಲಿ ತಾಜುಲ್ ಉಲಮಾರ ಹಿರಿಯ ಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಜಳ್ ರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುರಝಾಖ್ ಸಖಾಫಿ ಮಡಂತ್ಯಾರು, ತಾಜುಲ್ ಉಲಮಾ ಉರೂಸ್ ಕರ್ನಾಟಕ ಸ್ವಾಗತ ಸಮಿತಿ ವರ್ಕಿಂಗ್ ಕನ್ವೀನರ್ ಸಲೀಂ ಕನ್ಯಾಡಿ, ಅಬ್ಬೋನು ಮದ್ದಡ್ಕ, ಉಮರ್ ಜಿ.ಕೆರೆ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿರಿ...