ಮಸ್ಕತ್: ವಿದೇಶಿ ಹೂಡಿಕೆದಾರರು ಮತ್ತು ಆಸ್ತಿ ಮಾಲೀಕರಿಗೆ ಭಾರಿ ರಿಯಾಯಿತಿಗಳನ್ನು ಘೋಷಿಸುವ ಮೂಲಕ ಒಮಾನ್ನಲ್ಲಿ ಹೊಸ ರೆಸಿಡೆನ್ಸಿ ಕಾನೂನು ತಿದ್ದುಪಡಿಯನ್ನು ಹೊರಡಿಸಲಾಗಿದೆ. ಹೊಸ ಕಾನೂನಿನ ಪ್ರಕಾರ, ಅರ್ಹ ವಿದೇಶಿ ನಾಗರಿಕರು ಒಮಾನಿ ಸ್ಪಾನ್ಸರ್ ನೆರವಿನ ಅಗತ್ಯವಿಲ್ಲದೆಯೇ ರೆಸಿಡೆನ್ಸಿ ಪರ್ಮಿಟ್ ಮತ್ತು ವೀಸಾಗಳನ್ನು ಪಡೆದುಕೊಳ್ಳಬಹುದು.
ರಾಯಲ್ ಒಮಾನ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಹಸನ್ ಬಿನ್ ಮೊಹ್ಸಿನ್ ಅಲ್ ಶುರೈಕಿ ಹೊರಡಿಸಿದ ಆದೇಶದ ಅನ್ವಯ ಈ ಸುಧಾರಣೆಯನ್ನು ಜಾರಿಗೆ ತರಲಾಗುತ್ತಿದೆ. ಒಮಾನ್ನಲ್ಲಿ ಹೆಚ್ಚು ಉದ್ಯಮ ಸ್ನೇಹಿ ವಾತಾವರಣವನ್ನು ಕಲ್ಪಿಸುವುದು ಮತ್ತು ವಿದೇಶಿಯರಿಗಾಗಿ ವೀಸಾ ಪ್ರಕ್ರಿಯೆಗಳನ್ನು ಸರಳಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಹೊಸ ನಿಯಮಾವಳಿಗಳ ಪ್ರಕಾರ, ನಿರ್ಮಾಣಕ್ಕಾಗಿ ಮಂಜೂರು ಮಾಡಲಾದ ಭೂಮಿ ಅಥವಾ ನೋಂದಣಿ ಪ್ರಕ್ರಿಯೆಯಲ್ಲಿರುವ ರಿಯಲ್ ಎಸ್ಟೇಟ್ ಯೂನಿಟ್ಗಳನ್ನು ಖರೀದಿಸುವ ವಿದೇಶಿಯರು, ಸಂಬಂಧಪಟ್ಟ ಅಧಿಕೃತ ಸಂಸ್ಥೆಯ ಧೃಢೀಕರಣದ ಆಧಾರದ ಮೇಲೆ ಸ್ಪಾನ್ಸರ್ ಇಲ್ಲದೆಯೇ ವೀಸಾ ಮತ್ತು ರೆಸಿಡೆನ್ಸಿಗಾಗಿ ಅರ್ಜಿ ಸಲ್ಲಿಸಬಹುದು. ಆಸ್ತಿ ಮಾಲೀಕರ ಸಂಗಾತಿಗಳು (ಪತಿ/ಪತ್ನಿ) ಮತ್ತು ಪ್ರಥಮ ದರ್ಜೆಯ ರಕ್ತಸಂಬಂಧಿಗಳಿಗೆ ಹಾಗೂ ಒಮಾನ್ನಲ್ಲಿ ಭೂಮಿ ಅಥವಾ ರಿಯಲ್ ಎಸ್ಟೇಟ್ ಯೂನಿಟ್ಗಳನ್ನು ಹೊಂದಿರುವ ಕಂಪನಿಗಳ ಕಾನೂನುಬದ್ಧ ಪ್ರತಿನಿಧಿಗಳಿಗೂ ಈ ಸೌಲಭ್ಯ ಲಭ್ಯವಿರಲಿದೆ.
ಆರು ತಿಂಗಳಿಂದ ಒಂದು ವರ್ಷದವರೆಗೆ ಅವಧಿಯನ್ನು ಹೊಂದಿರುವ ಇಂತಹ ವೀಸಾಗಳು, ಆಸ್ತಿಯನ್ನು ಮಾರಾಟ ಮಾಡಿದರೆ ಅಥವಾ ಕಾನೂನುಬದ್ಧ ವಹಿವಾಟಿನ ಮೂಲಕ ಬೇರೆಯವರಿಗೆ ವರ್ಗಾಯಿಸಿದರೆ, ವಿದೇಶಿ ಮಾಲೀಕರು ಮತ್ತು ಅವರ ಕುಟುಂಬದ ಸದಸ್ಯರ ರೆಸಿಡೆನ್ಸಿ ಅನುಮತಿಯೊಂದಿಗೆ ಸ್ವಯಂಚಾಲಿತವಾಗಿ ರದ್ದಾಗಲಿವೆ.















ಇನ್ನಷ್ಟು ಸುದ್ದಿಗಳು
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ