ದಾವಣಗೆರೆ ಕ್ಷೇತ್ರದ ಉಪ ಚುನಾವಣೆಯ ಮತಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮುಹಮ್ಮದ್ ನಲಪ್ಪಾಡ್ ರವರು ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯಾದ ಜಾಮಿಯಾ ಅರೇಬಿಯಾ ಕಂಜುಲ್ ಇಮಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
ನಲಪ್ಪಾಡ್ ರವರು ಮಾಧ್ಯಮದ ಎದುರು ಗಡ್ಡ ಟೋಪಿ ಹಾಕಿರುವವರು ಒಳ್ಳೆಯ ಮುಸಲ್ಮಾನರಲ್ಲ ಎಂಬುದಾಗಿ ನಾಲಗೆ ಹರಿಬಿಟ್ಟಿರುವುದು ದೇಶದ ಮುಸ್ಲಿಂ ಸಮುದಾಯಕ್ಕೆ ಮತ್ತು ಇಸ್ಲಾಂ ಧರ್ಮಕ್ಕೆ ಮಾಡಿರುವ ಅವಮಾನ ಹಾಗು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ಗಡ್ಡ ಟೋಪಿ ಧರಿಸಿದವರ ಪ್ರಮುಖ ಪಾತ್ರ ಎಂಬುದನ್ನು ಮರೆತು ವಿವಾದಾಸ್ಪದ ಹೇಳಿಕೆ ನೀಡಿ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಸಮುದಾಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ವಿಶ್ವಾಸವನ್ನು ಕಾಪಾಡಿಕೊಳ್ಳಲು ಪಕ್ಷದ ಉನ್ನತ ನಾಯಕರು ಸದರಿ ವಿವಾದಾಸ್ಪದ ಹೇಳಿಕೆ ಸಂಬಂಧಿಸಿ ಮಧ್ಯಸ್ಥಿಕೆ ವಹಿಸಿ ಇಂತಹ ಅಶಿಸ್ತಿನ ಮುಖಂಡರಿಗೆ ವಜಾ ಮಾಡಬೇಕು ನಲಪ್ಪಾಡ್ ರವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಲಾಗಿದೆ .
ಮುಂದಿನ ದಿನಗಳಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಮನ ನೊಂದು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದಲ್ಲಿ ಪಕ್ಷ ಸೋಲು ಅನುಭವಿಸುವ ಆತಂಕ ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿದೆ ಇದರ ಸಂಪೂರ್ಣ ಜವಾಬ್ದಾರಿ ನಲಪ್ಪಾಡ್ ಮತ್ತು ಉನ್ನತ ನಾಯಕರೇ ಹೊಣೆಯಾಗಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಂ ಜಮಾಅತ್. ಮಂಗಳೂರು ಝೋನ್ ಸದಸ್ಯತ್ವ ಫೋರಂ ವಿತರಣೆ ಜನವರಿ 1 ರಿಂದ ಸದಸ್ಯತನ ಪ್ರಾರಂಭ
ಹುಬ್ಬಳ್ಳಿಯಲ್ಲಿ ಝೈನ್ ಎಜ್ಯು & ಚಾರಿಟೇಬಲ್ ಟ್ರಸ್ಟ್ ಅಸ್ತಿತ್ವಕ್ಕೆ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಇಹ್ಸಾನ್ ಪ್ಯೂಚರ್ ಅಕಾಡೆಮಿ ಸೆಂಟರ್- ನೂತನ ಕಟ್ಟಡ ನಾಳೆ ಉದ್ಘಾಟನೆ
ಮುಸ್ಲಿಮರು ಚರಿತ್ರೆಯಿಂದ ಪಾಠ ಕಲಿಯಬೇಕು: ಎಂ ಕೆ ಎಂ ಶಾಫಿ ಸಅದಿ ಉಸ್ತಾದ್
ಕೊಪ್ಪಳ ಜಿಲ್ಲೆಯ ಕಾರಟಗಿ ಎಂಬಲ್ಲಿ ಇಹ್ಸಾನ್ ಸೆಂಟರ್ ನಿರ್ಮಾಣ ಆರಂಭ
ಗದಗ – ಅಂಜುಮನ್-ಎ-ಇಸ್ಲಾಮ್ ಸಂಸ್ಥೆಯಿಂದ ಕೊರೋನಾ ಪೀಡಿತರ ಅಂತ್ಯಸಂಸ್ಕಾರ
ಹಾವೇರಿ ಮುಈನುಸ್ಸುನ್ನಾ ಮಸೀದಿ ನಾಳೆ ಸಯ್ಯಿದ್ ಹಬೀಬ್ ಆದಿಲ್ ಅಲ್ ಜಿಫ್ರೀಯವರಿಂದ ಲೋಕಾರ್ಪಣೆ
ಅ.28:ಉತ್ತರ ಕನ್ನಡ ಜಿಲ್ಲಾ ಎಸ್.ವೈ.ಎಸ್ ಅಸೆಂಬ್ಲಿ ಹಾಗೂ ಎಸ್ಸೆಸ್ಸೆಫ್ ಚುನಾವಣಾ ಕಾರ್ಯಾಗಾರ