ಕುವೈತ್ ಸಿಟಿ: ವಿದೇಶೀಯರ ಹಣ ವ್ಯವಹಾರಕ್ಕೆ ತೆರಿಗೆ ಪಾವತಿಸಬೇಕೆಂಬ ಪ್ರಸ್ತಾಪವನ್ನು ಮಂತ್ರಿಮಂಡಲವು ತಿರಸ್ಕರಿಸಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಸರ್ಕಾರವು ಈ ಬಗ್ಗೆ ಸಂಸತ್ತಿನಲ್ಲಿ ಅಧಿಕೃತವಾಗಿ ತಿಳಿಸಿದೆ.
ಅದು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಆ ಮೂಲಕ ವಿದೇಶಿಯರು ದೇಶ ಬಿಟ್ಟು ವಿದೇಶಿ ಬಂಡವಾಳವನ್ನು ಮೊಟಕುಗೊಳಿಸುವ ಸಂಭವವಿದೆ ಎಂದು ಆರ್ಥಿಕ ಖಾತೆಯ ಸಮಿತಿ ಲೆಕ್ಕಾಚಾರ ಮಾಡಿರುವುದಾಗಿ ವರದಿಯಲ್ಲಿ ತಿಳಿಸಿದೆ.
ವಿದೇಶೀಯರ ಹಣ ವ್ಯವಹಾಕ್ಕೆ ತೆರಿಗೆ ಪಾವತಿಸುವ ಪ್ರಸ್ತಾಪದ ಬಗ್ಗೆ ಸಂಸತ್ತಿನ ಎರಡು ಸಮಿತಿಗಳು ಎರಡು ಅಭಿಪ್ರಾಯಗಳನ್ನು ಹೊಂದಿವೆ.
ತೆರಿಗೆ ವಿಧಿಸಬಹುದು ಎಂಬುದು ಹಣಕಾಸು ಮತ್ತು ಆರ್ಥಿಕ ಸಮಿತಿಯ ಅಭಿಪ್ರಾಯವಾಗಿದೆ. ಆದರೆ ಕಾನೂನು ಖಾತೆಯ ಅಭಿಪ್ರಾಯವು ತೆರಿಗೆ ವಿಧಿಸುವುದಕ್ಕೆ ವಿರುದ್ದವಾಗಿದೆ. ತೆರಿಗೆಯ ಬಗ್ಗೆ ನಿರ್ಧರಿಸಲು ಸಂಸತ್ತನ್ನು ಕಳೆದ ಏಪ್ರಿಲ್ 19 ರಂದು ಕರೆಯಲಾಯಿತಾದರೂ ಸಮಯದ ಕೊರತೆಯಿಂದಾಗಿ ಪರಿಗಣಿಸಲಾಗಲಿಲ್ಲ. ಅಕ್ಟೋಬರ್ ನಲ್ಲಿ ಸಂಸತ್ ಸಭೆ ನಡೆಯಲಿದ್ದು, ಬಿಲ್ ಪರಿಗಣನೆಗೆ ಬರಲಿದೆ ಎನ್ನಲಾಗಿದೆ. ಅದರ ಮುಂಚಿತವಾಗಿ ಸರಕಾರವು ತನ್ನ ನಿಲುವನ್ನು ಘೋಷಿಸಿದೆ.
ವ್ಯಾಟ್ ಬಿಲ್ ಮುಂದಿನ ಅಧಿವೇಶನ ದಲ್ಲಿ
ಮುಂದಿನ ಅಧಿವೇಶನದಲ್ಲಿ ವ್ಯಾಟ್ ಬಿಲ್ಲನ್ನು ಸಮರ್ಪಿಸಲು ಸಚಿವಾಲಯ ತೀರ್ಮಾನಿಸಿದ್ದು, ಸಂಸತ್ತಿನಲ್ಲಿನ ಆರ್ಥಿಕ ಸಮಿತಿ ಮುಂದೆ ಸೆಪ್ಟೆಂಬರ್ ನಲ್ಲಿ ಚರ್ಚೆಗೆ ಬರಲಿದೆ. ಈ ವರ್ಷದ ಕೊನೆಯಲ್ಲಿ ಸರಕಾರ ವ್ಯಾಟ್ ಬಗ್ಗೆ ಓಟಿಂಗ್ ನಡೆಸುವ ಸನ್ನಾಹದಲ್ಲಿದೆ.
ಈ ಮಸೋದೆ ಕುರಿತಾದ ಹಣಕಾಸು ಸಚಿವಾಲಯದ ಕ್ರಮವು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಹಣಕಾಸು ಮತ್ತು ಫತ್ವಾ- ಕಾನೂನು ಇಲಾಖೆಗೆ ಹೋಗಲಿದೆ. ಈ ಮಸೂದೆಯು ಸಂವಿಧಾನಕ್ಕೆ ಅನುಗುಣವಾಗಿರಬೇಕು ಎಂದು ಖಚಿತಪಡಿಸುವುದು ಇದರ ಉದ್ದೇಶವಾಗಿದೆ.
IMF ಮತ್ತು ಇತರರು ನಿರ್ದೇಶಿಸಿದಂತೆ ಸೌದಿ ಅರೇಬಿಯಾ ಮತ್ತು ಯುಎಇಗಳು ವ್ಯಾಟ್ ಕಾರ್ಯರೂಪಕ್ಕೆ ತಂದಂತೆ ಆರ್ಥಿಕ ಅಭಿವೃದ್ಧಿಯನ್ನು ಸುಲಭಗೊಳಿಸಲು ಈ ಕ್ರಮಗಳನ್ನು ಕೈಗೊಳ್ಳುವ ಉದ್ದೇಶವನ್ನು ಸರಕಾರ ಹೊಂದಿದೆ. ವ್ಯಾಟ್ ಅನುಷ್ಠಾನವು GCCಯ ನಿರ್ಧಾರವಾಗಿದೆ.
ಸೌದಿ ಅರೇಬಿಯಾ ಮತ್ತು ಯುಎಇ ಇದನ್ನು ಜಾರಿಗೊಳಿಸಿದ್ದರೂ, ಇದು ಕುವೈತ್ ನಲ್ಲಿ ಜಾರಿಗೆ ಬಂದಿರಲಿಲ್ಲ. GCC ನಿರ್ಧಾರಗಳನ್ನು ಆಯಾಯ ರಾಷ್ಟ್ರಗಳ ಸಂಸತ್ತಿನ ಒಪ್ಪಿಗೆಯೊಂದಿಗೆ ಅನುಷ್ಠಾನಗೊಳಿಸಬೇಕು. ಕುವೈಟಿನ ಸಾಂವಿಧಾನಿಕತೆಗೆ ವ್ಯಾಟ್ ಕಾನೂನು ವಿರೋಧಾತ್ಮಕವಾಗಿದೆ ಎಂಬ ವಾದವನ್ನು ಕೆಲವರು ಹೊಂದಿದ್ದಾರೆ. ಈ ಪರಿಸ್ಥಿತಿಯಲ್ಲಿ ಸೂಕ್ಷ್ಮತೆಯಿಂದ ಸರಕಾರ ಮುಂದಡಿ ಇಡುತ್ತಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ