ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಲಗೇಜ್ ಮಿತಿಗಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ. ವಿಮಾನ ಪ್ರಯಾಣದಂತೆ ಇದೀಗ ರೈಲು ಪ್ರಯಾಣಕ್ಕೂ ಲಗೇಜ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ಪ್ರಯಾಣಿಕರ ಪ್ರಯಾಣ ವರ್ಗದ ಆಧಾರದಲ್ಲಿ ಈಗಾಗಲೇ ಉಚಿತ ಲಗೇಜ್ ಭತ್ಯೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಆ ಮಿತಿಯನ್ನು ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದರು.
ಲಗೇಜ್ ಮಿತಿ ವಿವರ
ಎರಡನೇ ದರ್ಜೆ (Second Class):
35 ಕೆಜಿ ವರೆಗೆ ಉಚಿತ
70 ಕೆಜಿ ವರೆಗೆ ಶುಲ್ಕ ಪಾವತಿಸಿ ಸಾಗಿಸಬಹುದು
ಸ್ಟೀಪರ್ ಕ್ಲಾಸ್:
40 ಕೆಜಿ ವರೆಗೆ ಉಚಿತ
80 ಕೆಜಿ ವರೆಗೆ ಹೆಚ್ಚುವರಿ ಶುಲ್ಕದೊಂದಿಗೆ ಅನುಮತಿ
ಎಸಿ 3-ಟೈರ್ ಮತ್ತು ಚೇರ್ ಕಾರ್:
ಗರಿಷ್ಠ 40 ಕೆಜಿ ಮಾತ್ರ ಅನುಮತಿ
ಇದಕ್ಕಿಂತ ಹೆಚ್ಚು ತೂಕ ಸಾಗಿಸುವುದು ನಿಯಮ ಉಲ್ಲಂಘನೆಯಾಗಿದೆ.
ಪ್ರಥಮ ದರ್ಜೆ ಮತ್ತು ‘ಎಸಿ ಟೂ ಟೈರ್:
50 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅನುಮತಿಸಲಾಗಿದೆ, ಗರಿಷ್ಠ ಮಿತಿ 100 ಕೆಜಿ. ಯಾಗಿದೆ.
ಎಸಿ ಪ್ರಥಮ ದರ್ಜೆ:
70 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು, ಅದಾಗ್ಯೂ 150 ಕೆಜಿ ವರೆಗೆ ಲಗೇಜ್ ಅನ್ನು ಶುಲ್ಕ ಪಾವತಿಸುವ ಮೂಲಕ ಸಾಗಿಸಬಹುದು.
ಲಗೇಜ್ ಅಳತೆ:
100 ಸೆಂ.ಮೀ ಉದ್ದ, 60 ಸೆಂ.ಮೀ ಅಗಲ ಮತ್ತು 25 ಸೆಂ.ಮೀ ಎತ್ತರದವರೆಗಿನ ಬಾಹ್ಯ ಅಳತೆಗಳನ್ನು ಹೊಂದಿರುವ ಟ್ರಂಕ್ಗಳು, ಸೂಟ್ಕೇಸ್ಗಳು ಮತ್ತು ಪೆಟ್ಟಿಗೆಗಳನ್ನು ಪ್ರಯಾಣಿಕರ ಕೋಚ್ಗಳಲ್ಲಿ ವೈಯಕ್ತಿಕ ಸಾಮಾನುಗಳಾಗಿ ಸಾಗಿಸಲು ಅನುಮತಿಸಲಾಗಿದೆ.
ಬಾಹ್ಯ ಅಳತೆಗಳನ್ನು ಮೀರಿದ ಟ್ರಂಕ್ಗಳು, ಸೂಟ್ಕೇಸ್ಗಳು ಮತ್ತು ಪೆಟ್ಟಿಗೆಗಳಿದ್ದರೆ, ಅಂತಹ ವಸ್ತುಗಳನ್ನು ಪ್ರಯಾಣಿಕರ ಕೋಚ್ಗಳಲ್ಲಿ ಸಾಗಿಸದೆ ಅವನ್ನು ಬ್ರೇಕ್ ವ್ಯಾನ್ (SLR)/ಪಾರ್ಸೆಲ್ ವ್ಯಾನ್ನಲ್ಲಿ ಬುಕ್ ಮಾಡಿ ಸಾಗಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವೈಯಕ್ತಿಕ ಸಾಮಾನುಗಳಾಗಿ ಕೋಚ್ನಲ್ಲಿ ವಾಣಿಜ್ಯ ಸರಕುಗಳನ್ನು ಕಾಯ್ದಿರಿಸಲು ಮತ್ತು ಸಾಗಿಸಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ