ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಲಗೇಜ್ ಮಿತಿಗಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ. ವಿಮಾನ ಪ್ರಯಾಣದಂತೆ ಇದೀಗ ರೈಲು ಪ್ರಯಾಣಕ್ಕೂ ಲಗೇಜ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ಪ್ರಯಾಣಿಕರ ಪ್ರಯಾಣ ವರ್ಗದ ಆಧಾರದಲ್ಲಿ ಈಗಾಗಲೇ ಉಚಿತ ಲಗೇಜ್ ಭತ್ಯೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಆ ಮಿತಿಯನ್ನು ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದರು.
ಲಗೇಜ್ ಮಿತಿ ವಿವರ
ಎರಡನೇ ದರ್ಜೆ (Second Class):
35 ಕೆಜಿ ವರೆಗೆ ಉಚಿತ
70 ಕೆಜಿ ವರೆಗೆ ಶುಲ್ಕ ಪಾವತಿಸಿ ಸಾಗಿಸಬಹುದು
ಸ್ಟೀಪರ್ ಕ್ಲಾಸ್:
40 ಕೆಜಿ ವರೆಗೆ ಉಚಿತ
80 ಕೆಜಿ ವರೆಗೆ ಹೆಚ್ಚುವರಿ ಶುಲ್ಕದೊಂದಿಗೆ ಅನುಮತಿ
ಎಸಿ 3-ಟೈರ್ ಮತ್ತು ಚೇರ್ ಕಾರ್:
ಗರಿಷ್ಠ 40 ಕೆಜಿ ಮಾತ್ರ ಅನುಮತಿ
ಇದಕ್ಕಿಂತ ಹೆಚ್ಚು ತೂಕ ಸಾಗಿಸುವುದು ನಿಯಮ ಉಲ್ಲಂಘನೆಯಾಗಿದೆ.
ಪ್ರಥಮ ದರ್ಜೆ ಮತ್ತು ‘ಎಸಿ ಟೂ ಟೈರ್:
50 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅನುಮತಿಸಲಾಗಿದೆ, ಗರಿಷ್ಠ ಮಿತಿ 100 ಕೆಜಿ. ಯಾಗಿದೆ.
ಎಸಿ ಪ್ರಥಮ ದರ್ಜೆ:
70 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು, ಅದಾಗ್ಯೂ 150 ಕೆಜಿ ವರೆಗೆ ಲಗೇಜ್ ಅನ್ನು ಶುಲ್ಕ ಪಾವತಿಸುವ ಮೂಲಕ ಸಾಗಿಸಬಹುದು.
ಲಗೇಜ್ ಅಳತೆ:
100 ಸೆಂ.ಮೀ ಉದ್ದ, 60 ಸೆಂ.ಮೀ ಅಗಲ ಮತ್ತು 25 ಸೆಂ.ಮೀ ಎತ್ತರದವರೆಗಿನ ಬಾಹ್ಯ ಅಳತೆಗಳನ್ನು ಹೊಂದಿರುವ ಟ್ರಂಕ್ಗಳು, ಸೂಟ್ಕೇಸ್ಗಳು ಮತ್ತು ಪೆಟ್ಟಿಗೆಗಳನ್ನು ಪ್ರಯಾಣಿಕರ ಕೋಚ್ಗಳಲ್ಲಿ ವೈಯಕ್ತಿಕ ಸಾಮಾನುಗಳಾಗಿ ಸಾಗಿಸಲು ಅನುಮತಿಸಲಾಗಿದೆ.
ಬಾಹ್ಯ ಅಳತೆಗಳನ್ನು ಮೀರಿದ ಟ್ರಂಕ್ಗಳು, ಸೂಟ್ಕೇಸ್ಗಳು ಮತ್ತು ಪೆಟ್ಟಿಗೆಗಳಿದ್ದರೆ, ಅಂತಹ ವಸ್ತುಗಳನ್ನು ಪ್ರಯಾಣಿಕರ ಕೋಚ್ಗಳಲ್ಲಿ ಸಾಗಿಸದೆ ಅವನ್ನು ಬ್ರೇಕ್ ವ್ಯಾನ್ (SLR)/ಪಾರ್ಸೆಲ್ ವ್ಯಾನ್ನಲ್ಲಿ ಬುಕ್ ಮಾಡಿ ಸಾಗಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವೈಯಕ್ತಿಕ ಸಾಮಾನುಗಳಾಗಿ ಕೋಚ್ನಲ್ಲಿ ವಾಣಿಜ್ಯ ಸರಕುಗಳನ್ನು ಕಾಯ್ದಿರಿಸಲು ಮತ್ತು ಸಾಗಿಸಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ