ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿಗದಿತ ಲಗೇಜ್ ಮಿತಿಗಿಂತ ಹೆಚ್ಚಿನ ಸಾಮಾನುಗಳನ್ನು ಸಾಗಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರೈಲ್ವೆ ಸ್ಪಷ್ಟಪಡಿಸಿದೆ. ವಿಮಾನ ಪ್ರಯಾಣದಂತೆ ಇದೀಗ ರೈಲು ಪ್ರಯಾಣಕ್ಕೂ ಲಗೇಜ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್, ಪ್ರಯಾಣಿಕರ ಪ್ರಯಾಣ ವರ್ಗದ ಆಧಾರದಲ್ಲಿ ಈಗಾಗಲೇ ಉಚಿತ ಲಗೇಜ್ ಭತ್ಯೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಆ ಮಿತಿಯನ್ನು ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದರು.
ಲಗೇಜ್ ಮಿತಿ ವಿವರ
ಎರಡನೇ ದರ್ಜೆ (Second Class):
35 ಕೆಜಿ ವರೆಗೆ ಉಚಿತ
70 ಕೆಜಿ ವರೆಗೆ ಶುಲ್ಕ ಪಾವತಿಸಿ ಸಾಗಿಸಬಹುದು
ಸ್ಟೀಪರ್ ಕ್ಲಾಸ್:
40 ಕೆಜಿ ವರೆಗೆ ಉಚಿತ
80 ಕೆಜಿ ವರೆಗೆ ಹೆಚ್ಚುವರಿ ಶುಲ್ಕದೊಂದಿಗೆ ಅನುಮತಿ
ಎಸಿ 3-ಟೈರ್ ಮತ್ತು ಚೇರ್ ಕಾರ್:
ಗರಿಷ್ಠ 40 ಕೆಜಿ ಮಾತ್ರ ಅನುಮತಿ
ಇದಕ್ಕಿಂತ ಹೆಚ್ಚು ತೂಕ ಸಾಗಿಸುವುದು ನಿಯಮ ಉಲ್ಲಂಘನೆಯಾಗಿದೆ.
ಪ್ರಥಮ ದರ್ಜೆ ಮತ್ತು ‘ಎಸಿ ಟೂ ಟೈರ್:
50 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಲು ಅನುಮತಿಸಲಾಗಿದೆ, ಗರಿಷ್ಠ ಮಿತಿ 100 ಕೆಜಿ. ಯಾಗಿದೆ.
ಎಸಿ ಪ್ರಥಮ ದರ್ಜೆ:
70 ಕೆಜಿ ವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು, ಅದಾಗ್ಯೂ 150 ಕೆಜಿ ವರೆಗೆ ಲಗೇಜ್ ಅನ್ನು ಶುಲ್ಕ ಪಾವತಿಸುವ ಮೂಲಕ ಸಾಗಿಸಬಹುದು.
ಲಗೇಜ್ ಅಳತೆ:
100 ಸೆಂ.ಮೀ ಉದ್ದ, 60 ಸೆಂ.ಮೀ ಅಗಲ ಮತ್ತು 25 ಸೆಂ.ಮೀ ಎತ್ತರದವರೆಗಿನ ಬಾಹ್ಯ ಅಳತೆಗಳನ್ನು ಹೊಂದಿರುವ ಟ್ರಂಕ್ಗಳು, ಸೂಟ್ಕೇಸ್ಗಳು ಮತ್ತು ಪೆಟ್ಟಿಗೆಗಳನ್ನು ಪ್ರಯಾಣಿಕರ ಕೋಚ್ಗಳಲ್ಲಿ ವೈಯಕ್ತಿಕ ಸಾಮಾನುಗಳಾಗಿ ಸಾಗಿಸಲು ಅನುಮತಿಸಲಾಗಿದೆ.
ಬಾಹ್ಯ ಅಳತೆಗಳನ್ನು ಮೀರಿದ ಟ್ರಂಕ್ಗಳು, ಸೂಟ್ಕೇಸ್ಗಳು ಮತ್ತು ಪೆಟ್ಟಿಗೆಗಳಿದ್ದರೆ, ಅಂತಹ ವಸ್ತುಗಳನ್ನು ಪ್ರಯಾಣಿಕರ ಕೋಚ್ಗಳಲ್ಲಿ ಸಾಗಿಸದೆ ಅವನ್ನು ಬ್ರೇಕ್ ವ್ಯಾನ್ (SLR)/ಪಾರ್ಸೆಲ್ ವ್ಯಾನ್ನಲ್ಲಿ ಬುಕ್ ಮಾಡಿ ಸಾಗಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವೈಯಕ್ತಿಕ ಸಾಮಾನುಗಳಾಗಿ ಕೋಚ್ನಲ್ಲಿ ವಾಣಿಜ್ಯ ಸರಕುಗಳನ್ನು ಕಾಯ್ದಿರಿಸಲು ಮತ್ತು ಸಾಗಿಸಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)