ಉಳ್ಳಾಲ: ಕಿನ್ಯಾ ಕೇಂದ್ರ ಜುಮಾ ಮಸೀದಿಯ ಸನಿಹದಲ್ಲೇ ಯಶಸ್ವಿ ಕಾರ್ಯಾಚರಣೆಯೊಂದಿಗೆ ಮುನ್ನುಗ್ಗುತ್ತಿರುವ “ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ)”.(ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ) 2020 ನವೆಂಬರ್ ನಲ್ಲಿ ಅಸ್ತಿತ್ವಕ್ಕೆ ತರಲಾದ ಈ ಸಂಸ್ಥೆಯ ವತಿಯಿಂದ ಕಳೆದ ಐದು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಸಮಸ್ಯೆ ಸಂಬಂಧಿತ ಕಾರ್ಯಗಳಲ್ಲಿ ನೆರವನ್ನು ನೀಡುತ್ತಾ ಬಂದಿದೆ.
2025 ನೇ ಸಾಲಿನಲ್ಲಿ ಸಂಸ್ಥೆಯು ಆಯೋಜಿಸಿದ ಯಶಸ್ವಿ ಯೋಜನೆಗಳೆಂದರೆ,
ವಾರದ ತಪಾಸಣಾ ಕ್ಲಿನಿಕ್:
(ಊರಿನ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಔಷಧಿಗಳ ವಿತರಣೆ)
ಮಾಸಿಕ ಜೀವ ರಕ್ಷಕ ಔಷಧಿಗಳ ವಿತರಣೆ:
(ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ರೋಗಿಗಳ ಜೀವ ರಕ್ಷಣೆಗೆ ಅಗತ್ಯವಾದ ಮಾಸಿಕ ಜೀವ ರಕ್ಷಕ ಔಷಧಿಗಳ ವಿತರಣೆ)
ಡಯಾಲಿಸಿಸ್ ಗಾಗಿ ಮಾಸಿಕ ಆರ್ಥಿಕ ನೆರವು:
(ಆರ್ಥಿಕವಾಗಿ ತೀರಾ ಹಿಂದುಳಿದ ಬಡ ಕುಟುಂಬದ ರೋಗಿಯ ಜೀವ ರಕ್ಷಣೆಗೆ ಅತ್ಯಗತ್ಯವಾದ ಡಯಾಲಿಸಿಸ್ ನಡೆಸಲು ಆರ್ಥಿಕ ನೆರವು)
ತುರ್ತು ಉಪಯೋಗಕ್ಕಾಗಿ ವೈದ್ಯಕೀಯ ಸಲಕರಣೆಗಳ ನೆರವು:
(ರೋಗಿಗಳ ತುರ್ತು ಉಪಯೋಗಕ್ಕೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳಾದ ಹಾಸ್ಪಿಟಲ್ ಕಾಟ್, ವ್ಹೀಲ್ ಚೇರ್, ವಾಕರ್, ವಾಟರ್ ಬೆಡ್, ಏರ್ ಬೆಡ್, ನೆಬುಲೈಝರ್ ಇತ್ಯಾದಿಗಳ ನೆರವು)
ಬಡವರ ತುರ್ತು ಚಿಕಿತ್ಸೆಗೆ ನೆರವು:
(ಆರ್ಥಿಕವಾಗಿ ತೀರಾ ಹಿಂದುಳಿದ ಅತ್ಯಂತ ಬಡ ಕುಟುಂಬದ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ನೆರವು)
ವೈದ್ಯಕೀಯ ತಪಾಸಣಾ ಶಿಬಿರಗಳು:
(ವಿವಿಧ ವೈದ್ಯಕೀಯ ವಿಭಾಗದಲ್ಲಿ ನುರಿತ ವೈದ್ಯರಿಂದ ತಪಾಸಣಾ ಶಿಬಿರಗಳು)
ವೈದ್ಯಕೀಯ ಮಾಹಿತಿ ಹಾಗೂ ಪ್ರಾತ್ಯಕ್ಷಿಕಾ ಶಿಬಿರಗಳು:
(ದಿನನಿತ್ಯ ಜೀವನದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ತಿಳಿವಳಿಕೆ (councelling) ಹಾಗೂ ಪ್ರಾತ್ಯಕ್ಷಿಕೆಗಳ (demonstration) ಶಿಬಿರಗಳು)
ಮುಂತಾದವುಗಳನ್ನು ಊರಿನವರ ಸಹಾಯ, ಸಹಕಾರದಿಂದ ಸಂಸ್ಥೆಯು ಯಶಸ್ವಿಯಾಗಿ ಪೂರ್ತೀಕರಿಸಿದೆ.
ಸಂಸ್ಥೆಯ ವಿಳಾಸ:
ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ) ಕಿನ್ಯ.
(ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ)
ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಾಂಪ್ಲೆಕ್ಸ್, ಕೇಂದ್ರ ಜುಮಾ ಮಸೀದಿಯ ಹತ್ತಿರ, ಕಿನ್ಯ ಗ್ರಾಮ, ಉಳ್ಳಾಲ ತಾಲೂಕು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ