ದೇರಳಕಟ್ಟೆ: ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ 1500 ನೇ ಜನ್ಮ ವರ್ಷಕ್ಕೆ ಸ್ವಾಗತ ಕೋರಿ ಮಂಜನಾಡಿ ಅಲ್ ಮದೀನ ಸಂಸ್ಥೆಯ ವತಿಯಿಂದ ಇದೇ ಬರುವ ಆಗಸ್ಟ್ 22 ರಂದು ಶುಕ್ರವಾರ, ಅಪರಾಹ್ನ: 3:30ಕ್ಕೆ ದೇರಳಕಟ್ಟೆ ಸರ್ಕಲ್ ನಿಂದ- ನಾಟೆಕಲ್ ಸರ್ಕಲ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ.
ಸಾಮಾಜಿಕ, ಧಾರ್ಮಿಕ ಹಾಗೂ ಸ್ಥಳೀಯ ಮುಖಂಡರ ಸಹಭಾಗಿತ್ವದಲ್ಲಿ ಈ ರ್ಯಾಲಿ ನಡೆಯಲಿದೆ. ಜಾಥಾದ ಪೂರ್ವ ಸಿದ್ಧತೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿ ರಚನಾ ಸಭೆಯು ದೇರಳಕಟ್ಟೆ ತಾಜುಲ್ ಉಲಮಾ ಮಸ್ಜಿದ್ ನಲ್ಲಿ ಕಳೆದ ಆಗಸ್ಟ್ 14 ರಂದು ನಡೆಯಿತು. ಈ ಸಂದರ್ಭದಲ್ಲಿ ರಚಿಸಲಾದ ಸ್ವಾಗತ ಸಮಿತಿಯ ಚೆಯರ್ಮಾನ್ ಆಗಿ ಏಷಿಯನ್ ಬಾವ ಹಾಜಿ, ಕನ್ವೀನರ್ ಆಗಿ ಮಹಬೂಬ್ ಸಖಾಫಿ, ವೈಸ್ ಕನ್ವೀನರ್ ಆಗಿ ಸಿದ್ದೀಕ್ ಹಾಜಿ, ಫೈನಾನ್ಶಿಯಲ್ ಸೆಕ್ರೆಟರಿಯಾಗಿ ನಾಸಿರ್ ಹಾಜಿ, ಲಾ ಆಂಡ್ ಆರ್ಡರ್ ನ ಮುಖ್ಯಸ್ಥರಾಗಿ ಶೌಕತ್ ಹಾಜಿ, ಸಂಚಾಲಕರಾಗಿ ಶಮೀರ್ ದೇರಳಕಟ್ಟೆ ಆಯ್ಕೆಯಾದರು.
ಹಾಗೂ ಇದರ ಸದಸ್ಯರಾಗಿ ಅಮ್ಮಿ ಹಾಜಿ, ಬಶೀರ್ ಹಾಜಿ, ಸುಲೈಮಾನ್ ಹಾಜಿ, ಗುಡ್ ಲಕ್ ಕಬೀರ್ ಹಾಜಿ, ಅಶ್ರಫ್ ಹಾಜಿ, ರಝ್ವಿ ಉಸ್ತಾದ್, ಝಿರಾರ್ ಅಬ್ದುಲ್ಲ, ಹಬೀಬ್ ಸಖಾಫಿ, ಸ್ವಾದಿಕ್ ಗುಡ್ ಲಕ್ ಮುಂತಾದವರನ್ನು ಆರಿಸಲಾಯಿತು. ಅಲ್ ಮದೀನ ಆಡಳಿತ ಸಮಿತಿ ಸದಸ್ಯರಾದ ಎನ್ ಎಸ್ ಅಬ್ದುಲ್ಲ, ಮುಹಮ್ಮದ್ ಕುಂಞಿ ಅಮ್ಜದಿ, ಅಮ್ಜದಿ, ಅಬುಸಾಲಿಹ್ ಅಝ್ಹರಿ, ಅಧ್ಯಾಪಕರಾದ ಸಯ್ಯಿದ್ ಉವೈಸ್ ತಂಙಳ್, ಮನ್ಸೂರ್ ಹಿಮಮಿ, ಇಕ್ಬಾಲ್ ಮರ್ಝೂಕಿ, ಸಲಾಂ ಅಹ್ಸನಿ, ಹಾಫಿಲ್ ಮರ್ಸದ್, ಝೈನುಲ್ ಆಬಿದ್ ಸಖಾಫಿ ಉಪಸ್ಥಿತರಿದ್ದರು
ಪ್ರವಾದಿ ಸಂದೇಶವನ್ನು ಸಾರುವ ಮಹತ್ವಪೂರ್ಣವಾದ ಈ ಜಾಥಾದಲ್ಲಿ ಸರ್ವ ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಪ್ರವಾದಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ