janadhvani

Kannada Online News Paper

ದೇರಳಕಟ್ಟೆಯಲ್ಲಿ ಉದ್ಘಾಟನೆಗೊಂಡ ‘ಅಲ್ ಸಲಾಮ’ ಕೌನ್ಸಿಲಿಂಗ್ ಸೆಂಟರ್

ಮೊಬೈಲ್ ಗೇಮ್, ಡ್ರಗ್ಸ್, ಕುಟುಂಬ ಸಮಸ್ಯೆ, ಖಿನ್ನತೆಗೆ ಒಳಗಾದವರಿಗೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನುರಿತ ಮನಶಾಸ್ತ್ರ ತಜ್ಞರಿಂದ ಕೌನ್ಸಿಲಿಂಗ್ ನೀಡುವ ಆಧ್ಯಾತ್ಮಿಕ ಸಲಹೆಯ ಸಂಸ್ಥೆಯಾಗಿರುತ್ತದೆ ಅಲ್ ಸಲಾಮ.

ಮಂಗಳೂರು: ವ್ಯಸನ ಮುಕ್ತಿ ದಾರಿಗೆ ಅರಿವಿನ ಮೊಂಬತ್ತಿ ಎಂಬ ದ್ಯೇಯವಾಕ್ಯದೊಂದಿಗೆ ಅಲ್ ಸಲಾಮ ಖಿದ್ಮ ಫೌಂಡೇಶನ್ ವತಿಯಿಂದ ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್ ಆಗಸ್ಟ್ 9ರಂದು ಉದ್ಘಾಟನೆಗೊಳಿಸಲಾಯಿತು.
ಕಚೇರಿಯನ್ನು ಸಂಸ್ಥೆಯ ನಿರ್ದೇಶಕರಾದ ಎಸ್ ಎಂ ಆರ್ ರಶೀದ್ ಹಾಜಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ ಇದು ಕೇವಲ ವ್ಯಸನ ಮುಕ್ತಿ ಮಾತ್ರವಲ್ಲ, ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮವು ನಡೆಯುವ ಮೂಲಕ ಸಮಾಜಕ್ಕೆ ಮಾದರಿಯಗಲಿವೆ.
ಒಳ್ಳೆಯ ಟೀಮ್ ಕಟ್ಟಿಕೊಂಡು ಮುನ್ನಡೆಯುವ ಈ ತಂಡಕ್ಕೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ. ಮುಂದಕ್ಕೆ ಸರಕಾರದಿಂದ ಸ್ಥಳವನ್ನು ಖರೀದಿಸುವ ಬಗ್ಗೆ ಆಲೋಚಿಸಲಾಗುವುದೆಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಜಿ ಏ ಬಾವಾ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಾಧ್ಯಕ್ಷ ಶರೀಫ್ ಹಾಜಿ ವೖಟ್ ಸ್ಟೋನ್ 8 ತಿಂಗಳ ಯೋಜನೆಯನ್ನು ಮಂಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಭಾರತ್ ಮುಸ್ತಫಾ ಗ್ರಂಥಾಲಯ ಉದ್ಘಾಟಿಸಿ ಸಲಹೆ ಸೂಚನೆ ನೀಡಿದರು. ಉದ್ಯಮಿ ಆಸೀಫ್ ಹೋಂ ಪ್ಲಸ್ ಹೆಲ್ತ್ ಸೆಂಟರ್ ಉದ್ಘಾಟನೆ ನಡೆಸಿದರೆ ಡಾ.ಯು ಟಿ ಇಫ್ತಿಖಾರ್ ಅಲೀ ಕೌನ್ಸಿಲ್ ರೂಂ ಉದ್ಘಾಟಿಸಿದರು. ನಂತರ ಪ್ರಾರ್ಥನಾ ಕೊಠಡಿಯನ್ನು ಅಝ್ಗರಲೀ ಡೆಕ್ಕನ್ ನೆರವೇರಿಸಿದರು.

ತಾಜುದ್ದೀನ್ ರಹ್ಮಾನಿ,ಹೈದರ್ ಪೆರ್ತಿಪ್ಪಾಡಿ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಸ್ವಾಗತ್ ಹಾಜಿ, ಮುಹಮ್ಮದ್ ದೇರಳಕಟ್ಟೆ,ಇಕ್ಬಾಲ್ ಕೋಲ್ಪೆ, ಅಬೂಬಕರ್ ಬೆಳ್ಳಾರೆ ಅಬ್ದುಲ್ ಖಾದರ್ ಬೆಳ್ಳಾರೆ, ಝೖನುಲ್ ಆಭಿದ್, ಮುಝಫರ್ ಅಹ್ಮದ್, ಅಡ್ವಕೇಟ್ ಇಸಾಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇಕ್ಬಾಲ್ ಬಾಳಿಲ ಸ್ವಾಗತಿಸಿ ಶೖಖ್ ಮುಹಮ್ಮದ್ ಇರ್ಫಾನಿ ಫೖಝಿ ವಂದಿಸಿದರು.