janadhvani

Kannada Online News Paper

KCF ಸೊಹಾರ್ ರಬೀಅ್ 2025 ಬೃಹತ್ ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ರಚನೆ

ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ನಡೆಸಲುದ್ದೇಶಿಸಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮರ 1500ನೇ ಜನ್ಮ ದಿನಾಚರಣೆಯ ಅಂಗವಾಗಿ ರಬೀಅ್ 2025 ಬೃಹತ್ ಮೀಲಾದ್ ಸಮಾವೇಶ* 2025 ಸೆಪ್ಟೆಂಬರ್-12 ರಂದು Royal Garden Hotel ಫಲಜ್ ನಲ್ಲಿ ನಡೆಯಲಿದ್ದು .

ಇದರ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಫಾರೂಕ್ ಕುಕ್ಕಾಜೆ ರವರ ನಿವಾಸ ದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ ರವರ ಅಧ್ಯಕ್ಷತೆಯಲ್ಲಿ ಬಹು:ರಫೀಕ್ ಉಸ್ತಾದ್ ರವರ ದುಆದೊಂದಿಗೆ ಸಭೆ ನಡೆಯಿತು.

ಪ್ರಸ್ತುತ ಸಭೆಯಲ್ಲಿ ಝೋನ್ ಪ್ರ.ಕಾರ್ಯದರ್ಶಿ ಮುಬೀನ್ ಜೋಕಟ್ಟೆ ರವರು ಸ್ವಾಗತಿಸಿದರು.

ಸ್ವಾಗತ ಸಮಿತಿಯ ಚಯರ್ಮೆನ್ ಆಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ವೈಸ್ ಚಯರ್ಮಾನ್ ಆಗಿ ಮಜೀದ್ ಕರೋಪಾಡಿ, ಕನ್ವೀನರ್ ಆಗಿ ಅಶ್ರಫ್ ಕುತ್ತಾರ್, ವೈಸ್ ಕನ್ವೀನರಾಗಿ ಮುಬೀನ್ ಜೋಕಟ್ಟೆ, ಫೈನಾನ್ಸ್ ಕಂಟ್ರೋಲರಾಗಿ ಇಕ್ಬಾಲ್ ಎರ್ಮಾಲ್, ಗೆಸ್ಟ್ ಹಾಗೂ ಫೈನಾನ್ಸ್ ಇಂಚಾರ್ಜ್ ಆಗಿ ಉಮ್ಮರ್ ಫಾರೂಕ್ ಕುಕ್ಕಾಜೆ, DR: ಅಬ್ದುಲ್ ರಝ್ಝಾಖ್ ಹಾಜಿ, ಅಬ್ದಲ್ ಹಮೀದ್ ಬುರೈಮಿ, ಫುಡ್ ಸಂಚಾಲಕರಾಗಿ ಆಗಿ

ಅರ್ಷಾದ್ ಸಜಿಪ, ಅಝೀಝ್ ಉಪ್ಪಳ, ಅಝೀಜ್ ಬಜ್ಪೆ, ಅಶ್ರಫ್ ಕರೋಪಾಡಿ ಮತ್ತು ಅಬ್ಬಾಸ್ ಉಪ್ಪಿನಂಗಡಿ, ಮೀಡಿಯಾ ಹಾಗೂ ಪ್ರಚಾರ ಚಯರ್ಮಾನ್ ಆಗಿ

ರಫೀಕ್ ಅಹ್ಸನಿ ಕಲತ್ತೂರ್, ಶಫೀಕ್ ಎಲಿಮಲೆ ಸುಳ್ಯ, ಅಬು ತ್ವಾಹಿರ್, ಆಲಿ ಹಿಮಮಿ ಉಪ್ಪಳ, ಸ್ಟೇಜ್ ಸೌಂಡ್ಸ್ ಮತ್ತು ಬಹುಮಾನ ಉಸ್ತುವಾರಿ ಆಗಿ ಆರಿಫ್ ಮದಕ, ಫಾರ್ವಾಜ್ ಮಂಚಿ, ಅಕ್ಬರ್ ಕಾಪು, ಅಬ್ದುಲ್ ಮಜೀದ್ ಕುಕ್ಕಾಜೆ, ಸ್ವಯಂಸೇವಕ ಉಸ್ತುವಾರಿ ಆಗಿ ಮುನೀರ್ ಕುತ್ತಾರ್, ಕಾರ್ಯ ಕ್ರಮ ನಿರೂಪಣೆ ಉಸ್ತುವಾರಿ ಆಗಿ ಫೈಝಲ್ ಬಾಯರ್, ಬುರ್ದಾ, ಮೌಲೂದ್ ಮಜ್ಲಿಸ್, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತುವಾರಿ ಆಗಿ ಬಹು :ಇಕ್ಬಾಲ್ ಮದನಿ ಚೆನ್ನಾರ್ ರವರನ್ನು ಆಚರಿಸಲಾಯಿತು. ಸ್ವಾಗತ ಸಮಿತಿ ಸದಸ್ಯರುಗಳಾಗಿ ಝೋನ್ ಸಮಿತಿಯ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು,

ಸ್ವಾಗತ ಸಮಿತಿಯ ಕನ್ವೀನರ್ ಅಶ್ರಫ್ ಕುತ್ತಾರ್ ಧನ್ಯವಾದ ಸಲ್ಲಿಸಿದರು.