ದಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ, ಸೌದಿ ಅರೇಬಿಯದಲ್ಲಿ 20, ಜೂನ್ 2025 ಶುಕ್ರವಾರ ಮುಸ್ಸಂಜೆ 4 ರಿಂದ 9 ರ ತನಕ ಪ್ರಪ್ರಥಮ ಬಾರಿಗೆ ಈದ್ ಸಮ್ಮಿಲನ ಬಹಳ ವಿಜೃಂಭಣೆಯಿಂದ ನೆರವೇರಿತು.
ಕೆಎಂವೈಎ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಸಿದ ಈದ್ ಸಮ್ಮಿಲನದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕೆಎಂವೈಎ ದಮ್ಮಾಂ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಈದ್ ಮಿಲನದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ದುಆ ಗೈದರು. ಅಹ್ಮದ್ ಸ್ವಾದಿಖ್ ಖಿರಾಅತ್ ಪಠಿಸಿದರು ಹಾಗೂ ಇಸ್ಮಾಯೀಲ್ ಕಾಟಿಪಳ್ಳರವರು ಅದರ ಸಾರಾಂಶವನ್ನು ವಿವರಿಸಿದರು.
ಅಬ್ದುಲ್ ಗಫೂರ್ ಕಾಟಿಪಳ್ಳ ವಿರಚಿತ ಸ್ವಾಗತ ಹಾಡನ್ನು ಮಧುರ ಕಂಠದಲ್ಲಿ ಅಬ್ದುಲ್ ಖಾದಿರ್ ಮುಆಝ್ ಕಾಟಿಪಳ್ಳ ಹಾಡಿ ಸಭಿಕರ ಮನಗೆದ್ದರು.
ಕೆಎಂವೈಎ ದಮ್ಮಾಂ ಈಷ್ಟರ್ನ್ ಪ್ರೋವಿನ್ಸ್ ನ ಮಾಜಿ ಅಧ್ಯಕ್ಷರುಗಳಾದ ಪಿ.ಎ. ರಹ್ಮಾನ್, ಬಿ.ಎಂ.ರಫೀಖ್, ಪಿ.ಮುಹಮ್ಮದ್ ಬಶೀರ್, ಗುಲಾಂ ನಝೀರ್, ನೌಶಾದ್ ರಶೀದ್ ಹಾಗೂ ಪ್ರಸಕ್ತ ಸಾಲಿನ ಉಪಾಧ್ಯಕ್ಷರುಗಳಾದ ಮುಹಮ್ಮದ್ ಇಜಾಝ್, ಮುಹಮ್ಮದ್ ಸ್ವಾದಿಖ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೆಎಂವೈಎ ದಮ್ಮಾಂ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ಈದ್ ಮಿಲನ ಹಾಗೂ ನೂತನ ಹಿಜರಿ ವರ್ಷ ಮುಹರ್ರಂ ಸಂದೇಶವನ್ನು ನೀಡಿದರು.ಕೆಎಂವೈಎ ಮಾಜಿ ಉಪಾಧ್ಯಕ್ಷರುಗಳಾದ ಆರಿಫ್ ಪಿ.ಎಂ. ಮತ್ತು ಸೈಫುಲ್ಲಾ ಮುಹ್ಯಿದ್ದೀನ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಮನ್ಸೂರ್ ಅಲೀ ಯವರು ಆರಿಸಿ ತೆಗೆದ Raffle ಡ್ರಾದಲ್ಲಿ ಮಾಝಿನ್ ರಫೀಖ್ ರವರಿಗೆ ಬಹುಮಾನ ನೀಡಲಾಯಿತು.
ಈದ್ ಸಮ್ಮಿಲನದ ಪೋಷ್ಟರನ್ನು ಸ್ಟೇಟಸ್ ನಲ್ಲಿ ಪ್ರದರ್ಶಿಸಿ 374 ಮಂದಿ ವೀಕ್ಷಿಸಿದ ಪ್ರಯುಕ್ತ ತ್ವಾಹಿರ್ ಅಲೀ ಶರೀಫ್ ರವರು Status ಗಿಫ್ಟ್ ನ್ನು ತನ್ನದಾಗಿರಿಸಿಕೊಂಡರು. ಕೆಎಂವೈಎ 35 ವರ್ಷಗಳ ಡೋಕುಮೆಂಟರಿ ಯನ್ನು ಮೀಡಿಯ ವಿಂಗ್ ಉಸ್ತುವಾರಿ ಶಾಫಿ ಇಮ್ರಾನ್ ಪ್ರದರ್ಶಿಸುವ ಜವಾಬ್ದಾರಿ ವಹಿಸಿದ್ದರು.
ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನ ಹಾಗೂ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.ಕ್ವಿಝ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ