ದಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ, ಸೌದಿ ಅರೇಬಿಯದಲ್ಲಿ 20, ಜೂನ್ 2025 ಶುಕ್ರವಾರ ಮುಸ್ಸಂಜೆ 4 ರಿಂದ 9 ರ ತನಕ ಪ್ರಪ್ರಥಮ ಬಾರಿಗೆ ಈದ್ ಸಮ್ಮಿಲನ ಬಹಳ ವಿಜೃಂಭಣೆಯಿಂದ ನೆರವೇರಿತು.
ಕೆಎಂವೈಎ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಸಿದ ಈದ್ ಸಮ್ಮಿಲನದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕೆಎಂವೈಎ ದಮ್ಮಾಂ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಈದ್ ಮಿಲನದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ದುಆ ಗೈದರು. ಅಹ್ಮದ್ ಸ್ವಾದಿಖ್ ಖಿರಾಅತ್ ಪಠಿಸಿದರು ಹಾಗೂ ಇಸ್ಮಾಯೀಲ್ ಕಾಟಿಪಳ್ಳರವರು ಅದರ ಸಾರಾಂಶವನ್ನು ವಿವರಿಸಿದರು.
ಅಬ್ದುಲ್ ಗಫೂರ್ ಕಾಟಿಪಳ್ಳ ವಿರಚಿತ ಸ್ವಾಗತ ಹಾಡನ್ನು ಮಧುರ ಕಂಠದಲ್ಲಿ ಅಬ್ದುಲ್ ಖಾದಿರ್ ಮುಆಝ್ ಕಾಟಿಪಳ್ಳ ಹಾಡಿ ಸಭಿಕರ ಮನಗೆದ್ದರು.
ಕೆಎಂವೈಎ ದಮ್ಮಾಂ ಈಷ್ಟರ್ನ್ ಪ್ರೋವಿನ್ಸ್ ನ ಮಾಜಿ ಅಧ್ಯಕ್ಷರುಗಳಾದ ಪಿ.ಎ. ರಹ್ಮಾನ್, ಬಿ.ಎಂ.ರಫೀಖ್, ಪಿ.ಮುಹಮ್ಮದ್ ಬಶೀರ್, ಗುಲಾಂ ನಝೀರ್, ನೌಶಾದ್ ರಶೀದ್ ಹಾಗೂ ಪ್ರಸಕ್ತ ಸಾಲಿನ ಉಪಾಧ್ಯಕ್ಷರುಗಳಾದ ಮುಹಮ್ಮದ್ ಇಜಾಝ್, ಮುಹಮ್ಮದ್ ಸ್ವಾದಿಖ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೆಎಂವೈಎ ದಮ್ಮಾಂ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ಈದ್ ಮಿಲನ ಹಾಗೂ ನೂತನ ಹಿಜರಿ ವರ್ಷ ಮುಹರ್ರಂ ಸಂದೇಶವನ್ನು ನೀಡಿದರು.ಕೆಎಂವೈಎ ಮಾಜಿ ಉಪಾಧ್ಯಕ್ಷರುಗಳಾದ ಆರಿಫ್ ಪಿ.ಎಂ. ಮತ್ತು ಸೈಫುಲ್ಲಾ ಮುಹ್ಯಿದ್ದೀನ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಮನ್ಸೂರ್ ಅಲೀ ಯವರು ಆರಿಸಿ ತೆಗೆದ Raffle ಡ್ರಾದಲ್ಲಿ ಮಾಝಿನ್ ರಫೀಖ್ ರವರಿಗೆ ಬಹುಮಾನ ನೀಡಲಾಯಿತು.
ಈದ್ ಸಮ್ಮಿಲನದ ಪೋಷ್ಟರನ್ನು ಸ್ಟೇಟಸ್ ನಲ್ಲಿ ಪ್ರದರ್ಶಿಸಿ 374 ಮಂದಿ ವೀಕ್ಷಿಸಿದ ಪ್ರಯುಕ್ತ ತ್ವಾಹಿರ್ ಅಲೀ ಶರೀಫ್ ರವರು Status ಗಿಫ್ಟ್ ನ್ನು ತನ್ನದಾಗಿರಿಸಿಕೊಂಡರು. ಕೆಎಂವೈಎ 35 ವರ್ಷಗಳ ಡೋಕುಮೆಂಟರಿ ಯನ್ನು ಮೀಡಿಯ ವಿಂಗ್ ಉಸ್ತುವಾರಿ ಶಾಫಿ ಇಮ್ರಾನ್ ಪ್ರದರ್ಶಿಸುವ ಜವಾಬ್ದಾರಿ ವಹಿಸಿದ್ದರು.
ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನ ಹಾಗೂ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.ಕ್ವಿಝ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ