janadhvani

Kannada Online News Paper

ಎಸ್ ವೈ ಎಸ್ ಈಸ್ಟ್ ಜಿಲ್ಲಾ ‘ಇಸ್‌ಲ’ ಕ್ಯಾಂಪ್‌

ಪುತ್ತೂರು: ಕರ್ನಾಟಕ ಸುನ್ನೀ ಯುವ ಜನ ಸಂಘ( ಎಸ್ ವೈ ಎಸ್) ದ.ಕ ಈಸ್ಟ್ ಜಿಲ್ಲಾ ಸಮಿತಿಯ ಅಧೀನದ ಝೋನ್ ಹಾಗೂ ಸರ್ಕಲ್ ಸಮಿತಿಗಳ ಸಾಂತ್ವನ ಹಾಗೂ ಇಸಾಬ ವಿಭಾಗದ ಉಫಾದ್ಯಕ್ಷರುಗಳು,ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ ‘ಇಸ್‌ಲ’ ಎಂಬ ಹೆಸರಿನ ವಿಶೇಷ ತರಬೇತಿ ಶಿಬಿರ ಉಪ್ಪಿನಂಗಡಿ ಸುನ್ನೀ ಸೆಂಟರ್‌ನಲ್ಲಿ ಶನಿವಾರ ನಡೆಯಿತು.

ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ ರವರ ಸಭಾಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ಯಿಯಾಗಿ ಆಗಮಿಸಿ ದ ಖ್ಯಾತ ತರಬೇತುದಾರ ಉಮರ್ ಸಖಾಫಿ ಎಡಪ್ಪಾಲರವರು ತರಗತಿ ಮಂಡಿಸಿದರು.
ಜಿಲ್ಲಾ ವ್ಯಾಪ್ತಿಯ ಆರು ಝೋನ್ ಸಮಿತಿಗಳ ಸಾಂತ್ವನ ಹಾಗೂ ಇಸಾಬ ವಿಭಾಗದ ಉಫಾದ್ಯಕ್ಷರುಗಳು,ಮೂವತ್ತೈದು ಸರ್ಕಲ್‌‌ಗಳ ಕಾರ್ಯದರ್ಶಿಗಳು ಶಿಬಿರದಲ್ಲಿ ಪಾಲ್ಗೊಂಡು ಕ್ಯಾಂಪ್ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.

ಎಸ್ ವೈ ಎಸ್ ಕರ್ನಾಟಕ ರಾಜ್ಯ ಸದಸ್ಯರಾದ ಹಮೀದ್ ಕೊಯಿಲ.ರಾಜ್ಯ ಸದಸ್ಯರು,ಈಸ್ಟ್ ಜಿಲ್ಲಾ ಪ್ರಧಾನಕಾರ್ಯದರ್ಶಿಯೂ ಆದ ಸ್ವಾಲಿಹ್ ಮುರ,ಜಿಲ್ಲಾ ದ‌ಅವಾ ಉಪಾಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ, ಜಿಲ್ಲಾ ಸಾಂತ್ವನ ಇಸಾಬ ಉಪಾಧ್ಯಕ್ಷರಾದ ಉಸ್ಮಾನ್ ಸೋಕಿಲ,ಜಿಲ್ಲಾ ಸಾಂತ್ವನ ವಿಭಾಗದ ನಾಯಕರಾದ ಹಂಝ ಕಲಾರ,ಜಮಾಲುದ್ದೀನ್ ಲತೀಫಿ ಲಾಡಿ,ಯೂಸುಫ್ ಸಖಾಫಿ ಬೆಳಂದೂರು ಉಪಸ್ಥಿತರಿದ್ದರು.ಈಸ್ಟ್ ಜಿಲ್ಲಾ ಸಾಂತ್ವನ ಇಸಾಬ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿ,
ಧನ್ಯವಾದ ಅರ್ಪಿಸಿದರು.