ರಕ್ತದಾನ ಕಾರ್ಯಕ್ರಮವೊಂದರಲ್ಲಿ ರಕ್ತದಾನದ ಮಹತ್ವವವನ್ನು ವಿವರಿಸಿದ ಜಿ.ಎಂ.ಉಸ್ತಾದರ ಮಾತಿನಿಂದ ಪ್ರೇರಣೆಗೊಂಡು ರಕ್ತದಾನ ಮಾಡಲು ಪ್ರಾರಂಭಿಸಿದ ಕರೀಂ ಕದ್ಕಾರ್ ನಂತರ ನಿರಂತರವಾಗಿ ರಕ್ತದಾನ ಮಾಡುತ್ತಾ , ಇನ್ನೊಬ್ಬರನ್ನು ಮಾಡಿಸುತ್ತಾ, ನೂರಾರು ರಕ್ತದಾನ ಶಿಬಿರಗಳನ್ನು ಏರ್ಪಡಿಸುತ್ತಾ ಸಾವಿರಾರು ಜೀವಗಳ ಪಾಲಿಗೆ ಆಪತ್ಪಾಂಧವನಾಗಿ ಗುರುತಿಸಿಕೊಂಡಿದ್ದಾರೆ.
ನಡೆದಾಡುವ ಬ್ಲಡ್ ಬ್ಯಾಂಕ್ ಇಬ್ರಾಹೀಂ ಕರೀಂ ಕದ್ಕಾರ್ ಇವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಆಯ್ಕೆ
ಜೂನ್ 14- 2025 ರಂದು ವಿಶ್ವ ರಕ್ತದಾನಿಗಳ ದಿನದಂದು Jean Henry Dunant Auditorium 26th 1st Floor, Red Cross Bhavan Race Cours Road Bengalore -01 ನಲ್ಲಿ ನಡೆಯುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಇವರು ತನ್ನ ಜೀವನದಲ್ಲಿ 59 ಬಾರಿ ರಕ್ತದಾನ ಹಾಗೂ 6 ಬಾರಿ ಸಿಂಗಲ್ ಡೋನರ್ ಪ್ಲೇಟ್ ಲೈಟ್ (SDP) ಒಟ್ಟು 65 ಬಾರಿ ರಕ್ತದಾನವನ್ನು ಮಾಡಿರುತ್ತಾರೆ. ಇವರು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಎಂಬ ಚಾರಿಟಿಯನ್ನು ಪ್ರಾರಂಭಿಸಿ ಇದರ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿರುವುದಲ್ಲದೇ, ಇವರ ನೇತೃತ್ವದಲ್ಲಿ ಸುಮಾರು 300 ಕ್ಕಿಂತ ಹೆಚ್ಚು ರಕ್ತದಾನ ಶಿಬಿರವನ್ನು ನಡೆಸಿ 25000 ಕ್ಕಿಂತ ಹೆಚ್ಚು ಯುನಿಟ್ ರಕ್ತವನ್ನು ಶೇಖರಣೆ ಮಾಡಿ ಮಂಗಳೂರಿನ ವಿವಿಧ ರಕ್ತನಿಧಿ ಕೇಂದ್ರಗಳಿಗೆ ನೀಡಿರುತ್ತಾರೆ. ಅಲ್ಲದೇ ಹಲವಾರು ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳಿಗೆ ಜೀವದಾನಿಯಾಗಿರುತ್ತಾರೆ.







