ಮಸ್ಕತ್ :- DKSC ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆ ದಿನಾಂಕ 30/05/2025 ರ ಶುಕ್ರವಾರ ಜುಮ್ಅ ನಮಾಝಿನ ನಂತರ ಗೋಲ್ಡನ್ ಓಯಸಿಸ್ ಹೋಟೆಲ್ ಸಭಾಂಗಣದಲ್ಲಿ ಓಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರ ಅಧ್ಯಕ್ಷತೆಯಲ್ಲಿ ನಡೆದು, ನೂತನ ಅಧ್ಯಕ್ಷರಾಗಿ ಅಲ್ತಾಫ್ ಬೋಳಾರ್ ರವರನ್ನು ಆಯ್ಕೆ ಮಾಡಲಾಯಿತು.
ಒಮಾನ್ ರಾಷ್ಟ್ರೀಯ ಸಮಿತಿಯ ಆರ್ಗನೈಝರ್ ಬಹು॥ ಫಾರೂಖ್ ಸಖಾಫಿ ಕಾಟಿಪಳ್ಳರವರು ದುಆ ನೆರವೇರಿಸಿದರು ಹಾಗೂ ಸಭಾ ಉದ್ಘಾಟನೆಯನ್ನು ಉಬೈದ್ ಸಖಾಫಿ ಯವರು ನಡೆಸಿದರು. ಕೇಂದ್ರ ಸಮಿತಿಯ ನಾಯಕರಾದ ಹಾತಿಮ್ ಕೂಳೂರು, ಕೆ.ಎಚ್. ರಫೀಖ್ ಸೂರಿಂಜೆ ರವರು ಅತಿಥಿ ಭಾಷಣ ಮಾಡಿದರು. ಅಬ್ದುಲ್ ಮಜೀದ್ ಕಣ್ಣಂಗಾರ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
DKSC ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಲಾ ಕಾಲೇಜ್ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಜ॥ ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರನ್ನು ಅದರ ಕಟ್ಟಡ ನಿರ್ಮಣ ಸಮಿತಿಯ ಚೆಯರ್ಮಾನ್ ಆಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಮಿತಿಯ ನಾಯಕರನ್ನು ಸಭೆಯಲ್ಲಿ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು,ಒಮಾನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಪಡುಬಿದ್ರಿ ವರದಿ ಮಂಡಿಸಿದರು. ಕೋಶಾಧಿಕಾರಿ ಆರಿಫ್ ಕೋಡಿ ಲೆಕ್ಕಪತ್ರ ಮಂಡಿಸಿದರು. ಅನ್ಸಾರ್ ಕಾಟಿಪಳ್ಳ ಗ್ಲೋಬಲ್ ವರದಿ ವಾಚಿಸಿದರು. ಶಿಹಾಬ್ ಮೊಯ್ದಿನ್ ಖಿರಾಅತ್ ಪಠಿಸಿದರು ನೂರ್ ಮುಹಮ್ಮದ್ ಪಡುಬಿದ್ರಿ ಸ್ವಾಗತಿಸಿ ಮೊಯ್ದಿನ್ ಸಾಸ್ತಾನ ಧನ್ಯವಾದಗೈದರು,ಅನ್ಸಾರ್ ಕಾಟಿಪಳ್ಳ ನಿರೂಪಿಸಿದರು.

2025 ರ ಸಾಲಿನ ನೂತನ ಸಮಿತಿ
ಲಾ ಕಾಲೇಜು ಕಟ್ಟಡ ನಿರ್ಮಾಣದ ಚೇರ್ಮಾನ್
ಮೋನಬ್ಬ ಹಾಜಿ ಅಬ್ದುಲ್ ರಹಮಾನ್ ಎರ್ಮಾಲ್
ಅಧ್ಯಕ್ಷ: ಅಲ್ತಾಫ್ ಬೋಲಾರ್
ಪ್ರ. ಕಾರ್ಯದರ್ಶಿ: ಯೂಸುಫ್ ಹೈದರ್
ಹಣಕಾಸು ಕಾರ್ಯದರ್ಶಿ:ನಿಯಾಝ್ ಮಂಗಳೂರು
ಡೆವಲಪ್ಮೆಂಟ್ ಚೇರ್ಮನ್: ಮುಹಿಯುದ್ದೀನ್ ಪಡುಬಿದ್ರಿ
ಸಂವಹನ ಕಾರ್ಯದರ್ಶಿ: ನೂರ್ ಮುಹಮ್ಮದ್ ಪಡುಬಿದ್ರಿ
ಉಪಾಧ್ಯಕ್ಷ: ಅನ್ಸಾರ್ ಕಾಟಿಪಳ್ಳ
ಕಾರ್ಯದರ್ಶಿ: ಮುಹಿಯುದ್ದೀನ್ ಸಾಸ್ತಾನ
ಮುಖ್ಯ ಸಲಹೆಗಾರ: ಶುಕೂರ್ ಖಾಜಿ
ಲೆಕ್ಕ ಪರಿಶೋಧಕರು: ಶಬೀರ್ ಕಾಟಿಪಳ್ಳ
















ಇನ್ನಷ್ಟು ಸುದ್ದಿಗಳು
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ