ಮಸ್ಕತ್ :- DKSC ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆ ದಿನಾಂಕ 30/05/2025 ರ ಶುಕ್ರವಾರ ಜುಮ್ಅ ನಮಾಝಿನ ನಂತರ ಗೋಲ್ಡನ್ ಓಯಸಿಸ್ ಹೋಟೆಲ್ ಸಭಾಂಗಣದಲ್ಲಿ ಓಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರ ಅಧ್ಯಕ್ಷತೆಯಲ್ಲಿ ನಡೆದು, ನೂತನ ಅಧ್ಯಕ್ಷರಾಗಿ ಅಲ್ತಾಫ್ ಬೋಳಾರ್ ರವರನ್ನು ಆಯ್ಕೆ ಮಾಡಲಾಯಿತು.
ಒಮಾನ್ ರಾಷ್ಟ್ರೀಯ ಸಮಿತಿಯ ಆರ್ಗನೈಝರ್ ಬಹು॥ ಫಾರೂಖ್ ಸಖಾಫಿ ಕಾಟಿಪಳ್ಳರವರು ದುಆ ನೆರವೇರಿಸಿದರು ಹಾಗೂ ಸಭಾ ಉದ್ಘಾಟನೆಯನ್ನು ಉಬೈದ್ ಸಖಾಫಿ ಯವರು ನಡೆಸಿದರು. ಕೇಂದ್ರ ಸಮಿತಿಯ ನಾಯಕರಾದ ಹಾತಿಮ್ ಕೂಳೂರು, ಕೆ.ಎಚ್. ರಫೀಖ್ ಸೂರಿಂಜೆ ರವರು ಅತಿಥಿ ಭಾಷಣ ಮಾಡಿದರು. ಅಬ್ದುಲ್ ಮಜೀದ್ ಕಣ್ಣಂಗಾರ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
DKSC ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಲಾ ಕಾಲೇಜ್ ಕಟ್ಟಡ ನಿರ್ಮಿಸಲು ಮುಂದಾಗಿದ್ದು ಜ॥ ಹಾಜಿ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರನ್ನು ಅದರ ಕಟ್ಟಡ ನಿರ್ಮಣ ಸಮಿತಿಯ ಚೆಯರ್ಮಾನ್ ಆಗಿ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಮಿತಿಯ ನಾಯಕರನ್ನು ಸಭೆಯಲ್ಲಿ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು,ಒಮಾನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೊಯ್ದಿನ್ ಪಡುಬಿದ್ರಿ ವರದಿ ಮಂಡಿಸಿದರು. ಕೋಶಾಧಿಕಾರಿ ಆರಿಫ್ ಕೋಡಿ ಲೆಕ್ಕಪತ್ರ ಮಂಡಿಸಿದರು. ಅನ್ಸಾರ್ ಕಾಟಿಪಳ್ಳ ಗ್ಲೋಬಲ್ ವರದಿ ವಾಚಿಸಿದರು. ಶಿಹಾಬ್ ಮೊಯ್ದಿನ್ ಖಿರಾಅತ್ ಪಠಿಸಿದರು ನೂರ್ ಮುಹಮ್ಮದ್ ಪಡುಬಿದ್ರಿ ಸ್ವಾಗತಿಸಿ ಮೊಯ್ದಿನ್ ಸಾಸ್ತಾನ ಧನ್ಯವಾದಗೈದರು,ಅನ್ಸಾರ್ ಕಾಟಿಪಳ್ಳ ನಿರೂಪಿಸಿದರು.

2025 ರ ಸಾಲಿನ ನೂತನ ಸಮಿತಿ
ಲಾ ಕಾಲೇಜು ಕಟ್ಟಡ ನಿರ್ಮಾಣದ ಚೇರ್ಮಾನ್
ಮೋನಬ್ಬ ಹಾಜಿ ಅಬ್ದುಲ್ ರಹಮಾನ್ ಎರ್ಮಾಲ್
ಅಧ್ಯಕ್ಷ: ಅಲ್ತಾಫ್ ಬೋಲಾರ್
ಪ್ರ. ಕಾರ್ಯದರ್ಶಿ: ಯೂಸುಫ್ ಹೈದರ್
ಹಣಕಾಸು ಕಾರ್ಯದರ್ಶಿ:ನಿಯಾಝ್ ಮಂಗಳೂರು
ಡೆವಲಪ್ಮೆಂಟ್ ಚೇರ್ಮನ್: ಮುಹಿಯುದ್ದೀನ್ ಪಡುಬಿದ್ರಿ
ಸಂವಹನ ಕಾರ್ಯದರ್ಶಿ: ನೂರ್ ಮುಹಮ್ಮದ್ ಪಡುಬಿದ್ರಿ
ಉಪಾಧ್ಯಕ್ಷ: ಅನ್ಸಾರ್ ಕಾಟಿಪಳ್ಳ
ಕಾರ್ಯದರ್ಶಿ: ಮುಹಿಯುದ್ದೀನ್ ಸಾಸ್ತಾನ
ಮುಖ್ಯ ಸಲಹೆಗಾರ: ಶುಕೂರ್ ಖಾಜಿ
ಲೆಕ್ಕ ಪರಿಶೋಧಕರು: ಶಬೀರ್ ಕಾಟಿಪಳ್ಳ
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ