ರಿಯಾದ್: ಸೌದಿ ಅರೇಬಿಯಾಕ್ಕೆ ಬಿಸಿನೆಸ್, ಟೂರಿಸ್ಟ್ ಮತ್ತು ವಿಸಿಟ್ ವೀಸಾದ ಮೇಲೆ ಆಗಮಿಸಿದವರೆಲ್ಲರೂ ಏಪ್ರಿಲ್ 13ರ ಮುಂಚಿತವಾಗಿ ಸ್ವದೇಶಕ್ಕೆ ಹಿಂತಿರುಗಬೇಕು ಎಂಬ ಸುದ್ದಿ ಸತ್ಯಕ್ಕೆ ದೂರ ಎಂದು ಸೌದಿ ಪಾಸ್ಪೋರ್ಟ್ ಇಲಾಖೆ ಹೇಳಿದೆ.
ಭಾರತ ಸೇರಿ 14 ದೇಶಗಳಿಂದ ಸೌದಿಗೆ ಆಗಮಿಸಿದವರೆಲ್ಲರೂ ಏಪ್ರಿಲ್ 13 ರ ಮುಂಚಿತವಾಗಿ ವಾಪಸ್ ಹೋಗಬೇಕು, ಇಲ್ಲದಿದ್ದಲ್ಲಿ ಐದು ವರ್ಷಗಳ ಕಾಲ ಪ್ರವೇಶ ನಿಷೇಧ ಹೇರಲಾಗುವುದು ಎಂದು ಟ್ರಾವೆಲ್ ಕಂಪನಿಗಳ ಹೆಸರಿನಲ್ಲಿ ಸುತ್ತೋಲೆಯೊಂದು ಹರಿದಾಡುತ್ತಿತ್ತು. ಇದರ ಬಗ್ಗೆ ಸೌದಿ ವಿದೇಶಾಂಗ ಮತ್ತು ಆಂತರಿಕ ಸಚಿವಾಲಯದ ವೇದಿಕೆಯಲ್ಲಿ ವಿದೇಶಿಗರು ವಿಚಾರಿಸಿದಾಗ, ಇದು ಸುಳ್ಳು ಸುದ್ದಿ ಎಂದು ಜವಾಝಾತ್ ಅಥವಾ ಪಾಸ್ಪೋರ್ಟ್ ವಿಭಾಗ ಉತ್ತರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ನಂಬಬೇಡಿ ಎಂದು ಜವಾಝಾತ್ ನಿರ್ದೇಶನಾಲಯ ಸ್ಪಷ್ಟಪಡಿಸಿದೆ. ಯಾವುದೇ ಹೊಸ ಸೂಚನೆಗಳಿದ್ದಲ್ಲಿ, ಅದನ್ನು ಜವಾಝಾತ್ನ ಅಧಿಕೃತ ಚಾನೆಲ್ಗಳ ಮೂಲಕ ತಿಳಿಸಲಾಗುವುದು ಎಂದು ಜವಾಝಾತ್ ತಿಳಿಸಿದೆ. ಕಳೆದ ತಿಂಗಳಿನಿಂದ, ಭಾರತೀಯರು ಸೇರಿದಂತೆ ಹಲವು ದೇಶದವರಿಗೆ ಸೌದಿ ವೀಸಾ ನಿರ್ಬಂಧವಿದೆ. ಇದು ಹಜ್ ಗೆ ಮುನ್ನುಡಿ ಎಂದು ನಂಬಲಾಗಿದೆ. ಈ ಬಗ್ಗೆ ಇನ್ನೂ ಅಧಿಕೃತ ಅಧಿಸೂಚನೆ ಬಂದಿಲ್ಲ. ಪ್ರಸ್ತುತ ನೀಡಲಾದ ಕೆಲವು ವೀಸಾಗಳಲ್ಲಿ ಏಪ್ರಿಲ್ 13 ಅನ್ನು ಕೊನೆಯ ದಿನಾಂಕವೆಂದು ತೋರಿಸಲಾಗಿದ್ದು, ಹರಿದಾಡುತ್ತಿರುವ ಸುದ್ದಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಹೀಗೆ ವೀಸಾ ಪಡೆದವರು ಸೌದಿಗೆ ಕರೆತಂದವರ ಅಬ್ಶೀರ್ ಮುಖಾಂತರ ವೀಸಾ ಸಿಂಧುತ್ವವನ್ನು ಖಚಿತಪಡಿಸಿಕೊಂಡು ಆ ದಿನಾಂಕದೊಳಗೆ ಹಿಂತಿರುಗಬೇಕು. ವೀಸಾ ಅವಧಿ ಮುಗಿದಿರುವವರು ಅಬ್ಶೀರ್ ಮೂಲಕ ವೀಸಾಗಳನ್ನು ನವೀಕರಿಸಬಹುದಾದರೆ ಸೌದಿಯಲ್ಲಿ ಉಳಿಯಬಹುದು. ಇದು ವ್ಯಾಪಾರ ವೀಸಾಗಳಿಗೂ ಅನ್ವಯಿಸುತ್ತದೆ.
ಇವೆಲ್ಲವೂ ಮೊದಲೇ ಅಸ್ತಿತ್ವದಲ್ಲಿರುವ ಕಾನೂನುಗಳಾಗಿವೆ. ಬಹು ಪ್ರವೇಶ ಪ್ರವಾಸಿ ವೀಸಾ ಹೊಂದಿರುವವರು ಸೌದಿ ಅರೇಬಿಯಾದಲ್ಲಿ ವರ್ಷದಲ್ಲಿ ಒಟ್ಟು 90 ದಿನಗಳ ಕಾಲ ಮಾತ್ರ ಉಳಿಯಲು ಅನುಮತಿಸಲಾಗಿದೆ. ಭಾರತೀಯರು ಸೇರಿದಂತೆ ಈಗಿರುವ ಭೇಟಿ ವೀಸಾ ನಿರ್ಬಂಧಗಳು ಹಜ್ ನಂತರ ಕೊನೆಗೊಳ್ಳುವ ನಿರೀಕ್ಷೆಯಿದೆ. ಸಂಪೂರ್ಣ ನಿಷೇಧವಿದ್ದರೆ, ಸೌದಿ ವಿದೇಶಾಂಗ ಸಚಿವಾಲಯವು ಸಾಮಾನ್ಯ ಕಾರ್ಯವಿಧಾನದ ಪ್ರಕಾರ ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಅದರ ಬಗ್ಗೆ ಮಾಹಿತಿ ನೀಡಲಿದೆ. ರಾಯಭಾರ ಕಚೇರಿಯಾಗಲಿ ಅಥವಾ ಕಾನ್ಸುಲೇಟ್ ಆಗಲಿ ಅಂತಹ ಯಾವುದೇ ಸೂಚನೆಯನ್ನು ಸ್ವೀಕರಿಸಿರುವ ಬಗ್ಗೆ ವರದಿ ಮಾಡಿಲ್ಲ. ಹಾಗಾಗಿ ಹಜ್ ಯಾತ್ರೆಯ ನಂತರ ಎಂದಿನಂತೆ ವೀಸಾ ಲಭ್ಯವಾಗಲಿದೆ ಎಂದು ಆಶಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ