ಮದೀನತುಲ್ ಮುನವ್ವರಃ : ಮದೀನಾದಲ್ಲಿರುವ ಪ್ರವಾದಿ ಮಸೀದಿ(ಮಸ್ಜಿದುನ್ನಬವಿ)ಯಲ್ಲಿ ರೌಳಾ ಷರೀಫ್ ಸಂದರ್ಶನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ಮುಂದೆ ಪ್ರತಿ 20 ನಿಮಿಷಕ್ಕೊಮ್ಮೆ ಅಪಾಯಿಂಟ್ಮೆಂಟ್ ಮಾಡುವ ಮೂಲಕ ರೌಳಾವನ್ನು ಭೇಟಿ ಮಾಡಬಹುದು.
ಜನಸಂದಣಿ ನಿಯಂತ್ರಣದ ಭಾಗವಾಗಿ, ಓರ್ವ ವ್ಯಕ್ತಿಗೆ ವರ್ಷಕ್ಕೊಮ್ಮೆ ಮಾತ್ರ ರೌಳಾಗೆ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಸಲಾಗಿದೆ. ಇದಕ್ಕಾಗಿ ನುಸುಕ್ ಆ್ಯಪ್ ‘ಇಮ್ಮಿಡಿಯೇಟ್ ಪಾತ್’ ಎಂಬ ವಿಶೇಷ ಆಯ್ಕೆಯನ್ನು ಹೊಂದಿದೆ. ಇದರಿಂದಾಗಿ ಆಗಾಗ ಭೇಟಿ ನೀಡುವ ಅವಕಾಶ ಸಿಗಲಿದೆ. ಪ್ರವಾದಿ ಮಸೀದಿಯ ಸಮೀಪ ತಲುಪಿದ ನಂತರ ಈ ಆಯ್ಕೆಯ ಮೂಲಕ ಪರವಾನಗಿ ಪಡೆಯಲು ಸಾಧ್ಯವಿದೆ. ಇದನ್ನು ನುಸುಕ್ ಆ್ಯಪ್ ಮ್ಯಾನೇಜ್ಮೆಂಟ್ ವಿವರಿಸಿದೆ.
ಪ್ರತಿ ಗ್ರೂಪಿಗೆ ರೌಳಾದಲ್ಲಿ ಪ್ರಾರ್ಥನೆ ಮಾಡಲು ಹತ್ತು ನಿಮಿಷಗಳಿವೆ. ಭೇಟಿ ನೀಡುವವರು ಅರ್ಧ ಗಂಟೆ ಮುಂಚಿತವಾಗಿ ರೌಳಾ ಸಮೀಪ ತಲುಪಬೇಕು ಎಂಬ ಸಲಹೆಯೂ ಇದೆ. ಪ್ರವಾದಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಪ್ರವಾದಿ ಸನ್ನಿಧಿಯಲ್ಲಿ ಸಲಾಂ ಹೇಳುವುದು ಮುಂತಾದವುಗಳಿಗೆ ಪರವಾನಗಿ ಅಗತ್ಯವಿಲ್ಲ.
ಮದೀನಾದ ಮಸೀದಿಯಲ್ಲಿ ಪ್ರವಾದಿಯವರು ಬೋಧಿಸಿದ ಮಿಂಬರ್ ಮತ್ತು ಪ್ರವಾದಿಯವರ ಮನೆ ನಡುವಿನ ಸ್ಥಳವೇ ರೌಳಾ ಶರೀಫ್. ಇಲ್ಲಿ ಪ್ರಾರ್ಥನೆ ಸಲ್ಲಿಸಲು ಪರವಾನಗಿ ಅಗತ್ಯವಿದೆ.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ