ಮದೀನತುಲ್ ಮುನವ್ವರಃ : ಮದೀನಾದಲ್ಲಿರುವ ಪ್ರವಾದಿ ಮಸೀದಿ(ಮಸ್ಜಿದುನ್ನಬವಿ)ಯಲ್ಲಿ ರೌಳಾ ಷರೀಫ್ ಸಂದರ್ಶನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇನ್ಮುಂದೆ ಪ್ರತಿ 20 ನಿಮಿಷಕ್ಕೊಮ್ಮೆ ಅಪಾಯಿಂಟ್ಮೆಂಟ್ ಮಾಡುವ ಮೂಲಕ ರೌಳಾವನ್ನು ಭೇಟಿ ಮಾಡಬಹುದು.
ಜನಸಂದಣಿ ನಿಯಂತ್ರಣದ ಭಾಗವಾಗಿ, ಓರ್ವ ವ್ಯಕ್ತಿಗೆ ವರ್ಷಕ್ಕೊಮ್ಮೆ ಮಾತ್ರ ರೌಳಾಗೆ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಸಲಾಗಿದೆ. ಇದಕ್ಕಾಗಿ ನುಸುಕ್ ಆ್ಯಪ್ ‘ಇಮ್ಮಿಡಿಯೇಟ್ ಪಾತ್’ ಎಂಬ ವಿಶೇಷ ಆಯ್ಕೆಯನ್ನು ಹೊಂದಿದೆ. ಇದರಿಂದಾಗಿ ಆಗಾಗ ಭೇಟಿ ನೀಡುವ ಅವಕಾಶ ಸಿಗಲಿದೆ. ಪ್ರವಾದಿ ಮಸೀದಿಯ ಸಮೀಪ ತಲುಪಿದ ನಂತರ ಈ ಆಯ್ಕೆಯ ಮೂಲಕ ಪರವಾನಗಿ ಪಡೆಯಲು ಸಾಧ್ಯವಿದೆ. ಇದನ್ನು ನುಸುಕ್ ಆ್ಯಪ್ ಮ್ಯಾನೇಜ್ಮೆಂಟ್ ವಿವರಿಸಿದೆ.
ಪ್ರತಿ ಗ್ರೂಪಿಗೆ ರೌಳಾದಲ್ಲಿ ಪ್ರಾರ್ಥನೆ ಮಾಡಲು ಹತ್ತು ನಿಮಿಷಗಳಿವೆ. ಭೇಟಿ ನೀಡುವವರು ಅರ್ಧ ಗಂಟೆ ಮುಂಚಿತವಾಗಿ ರೌಳಾ ಸಮೀಪ ತಲುಪಬೇಕು ಎಂಬ ಸಲಹೆಯೂ ಇದೆ. ಪ್ರವಾದಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಪ್ರವಾದಿ ಸನ್ನಿಧಿಯಲ್ಲಿ ಸಲಾಂ ಹೇಳುವುದು ಮುಂತಾದವುಗಳಿಗೆ ಪರವಾನಗಿ ಅಗತ್ಯವಿಲ್ಲ.
ಮದೀನಾದ ಮಸೀದಿಯಲ್ಲಿ ಪ್ರವಾದಿಯವರು ಬೋಧಿಸಿದ ಮಿಂಬರ್ ಮತ್ತು ಪ್ರವಾದಿಯವರ ಮನೆ ನಡುವಿನ ಸ್ಥಳವೇ ರೌಳಾ ಶರೀಫ್. ಇಲ್ಲಿ ಪ್ರಾರ್ಥನೆ ಸಲ್ಲಿಸಲು ಪರವಾನಗಿ ಅಗತ್ಯವಿದೆ.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ