janadhvani

Kannada Online News Paper

ಸಾಣೂರೀನಲ್ಲಿ ಸಂಭ್ರಮದ ಮಿಲಾದುನ್ನಬಿ ಕಾರ್ಯಕ್ರಮ

ಕಾರ್ಕಳ: ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಹಾಗೂ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ( ಖ.ಸಿ) ಇದರ ಆಶ್ರಯದಲ್ಲಿ14/9/24 ರಂದು ಮೀಲಾದುನ್ನಬೀ ಕಾರ್ಯಕ್ರಮ ದರ್ಗಾ ವಠಾರದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ಜಮಾಅತ್ ಅಧ್ಯಕ್ಷರಾದ ಜನಾಬ್! ಅಬ್ದುರ್ರಹ್ಮಾನ್ ಐಡಿಯಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮದರಸ ಸದರ್ ಉಸ್ತಾದರಾದ ಅಶ್ರಫ್ ಮದನಿ ಸ್ವಾಗತಿಸಿ, ಖತೀಬರಾದ ಕಲಂದರ್ ಸ‍ಅದಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷರಾದ ಅಬ್ದುಲ್ಲತೀಫ್ ಮುರತ್ತಂಗಡಿ, ಪ್ರ.ಕಾರ್ಯದರ್ಶಿ ಅಬ್ದುಲ್ಲತೀಫ್, ಕೋಶಾಧಿಕಾರಿ ರಜಬ್ ಪುಲ್ಕೇರಿ, ಅಧ್ಯಾಪಕರಾದ ಮುಖ್ತಾರ್ ಅಹ್ಮದ್ ನಿಝಾಮಿ,ಸುಲೈಮಾನ್ ಹಿಶಾಮಿ, ಜಮಾಅತ್ ಹಿರಿಯ ಸದಸ್ಯರಾದ ಅಬೂಬಕ್ಕರ್ ಮಸೀದಿಬಳಿ, ಸುಲೈಮಾನ್ ಕೇಪುಲು ಉಪಸ್ಥಿತರಿದ್ದರು.ಕೊನೆಗೆ ಕಾರ್ಯದರ್ಶಿಯ ದನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

error: Content is protected !! Not allowed copy content from janadhvani.com