janadhvani

Kannada Online News Paper

ಬೆಂಗಳೂರು ಸಂಯುಕ್ತ ಜಮಾ‌ಅತ್ ಕಮಿಟಿ ನೂತನ ಅಧ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಆಯ್ಕೆ

ಬೆಂಗಳೂರು:ಟ್ಯಾನರಿಯ ರಸ್ತೆಯ ಕೆ.ಜಿ ಹಳ್ಳಿಯಲ್ಲಿ ನಡೆದ ಖಾಝಿ ಸ್ವೀಕಾರ ಮತ್ತು ಕೂರತ್ ತಂಗಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಎ.ಪಿ ಉಸ್ತಾದರು ಬೆಂಗಳೂರು ಸಂಯುಕ್ತ ಜಮಾಅತ್ ನೂತನ ಸಮಿತಿಯನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ಪ್ರ.ಕಾರ್ಯದರ್ಶಿ ಯಾಗಿ ನಿಕಟ ಪೂರ್ವ ವಕ್ಪ್ ಅಧ್ಯಕ್ಷ ಎನ್.ಕೆ.ಎಂ ಶಾಪಿ ಸ‌ಅದಿ,ಫೈನಾನ್ಸ್ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ಹಾಜಿ ಕಮ್ಮನಹಳ್ಳಿ,ಕಾರ್ಯಧ್ಯಕ್ಷರಾಗಿ ಜಲೀಲ್ ಹಾಜಿ,ವರ್ಕಿಂಗ್ ಕಾರ್ಯದರ್ಶಿ ಯಾಗಿ ಇಬ್ರಾಹಿಂ ಸಖಾಫಿ ನೆಲ್ಲೂರು,ಉಪಾಧ್ಯಕ್ಷರು ಗಳಾಗಿ ಸತ್ತಾರ್ ಮೌಲವಿ,ಸಿ.ಪಿ ಸಿರಾಜುದ್ದೀನ್ ಸಖಾಫಿ,ಕಾರ್ಯದರ್ಶಿಗಳಾಗಿ ಹಬೀಬ್ ನಾಳ,ಸ್ವಾಲಿಹ್ ಟಿ.ಸಿ,ಸ‌ಅಜಾನ್ ಹಲಸೂರು ರವರನ್ನು ಆರಿಸಲಾಯಿತು.