ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಮ್ಮ ಶಾಸಕ ಸ್ಥಾನ ತಮ್ಮ ಹಿರಿಯರಿಂದ ಬಂದದ್ದು ಎಂದು ಕೊಂಡಿರಬೇಕು!. ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಎಲ್ಲೆಂದರಲ್ಲಿ ತನ್ನ ನಾಲಗೆಯನ್ನು ಹರಿಬಿಟ್ಟು ಇತರರೊಡನೆ ರೇಗುವುದು ಒಂದು ಚಾಳಿ ಆಗಿ ಬಿಟ್ಟಿದೆ.
ಬೆಳ್ತಂಗಡಿ ಪೊಲೀಸರು ತಮ್ಮ ಕಾನೂನು ವ್ಯಾಪ್ತಿಯಲ್ಲಿ ಆರೋಪಿತರನ್ನು ಬಂಧಿಸಿರುವುದನ್ನು ತನ್ನ ಮೂಗಿನ ನೇರಕ್ಕೆ ವಿರೋಧಿಸಿ ಪೊಲೀಸರನ್ನು ಗುರಿಯಾಗಿಸಿ, ಕಾನೂನು ಬಾಹಿರ ಮಾತುಗಳನ್ನಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ವಿರೋಧಿಸಿದ ಪೂಂಜರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಕೆ.ಅಶ್ರಫ್ (ಮಾಜಿ ಮೇಯರ್) ಕಿಡಿಕಾರಿದ್ದಾರೆ.
ಶಾಸಕ ಪೂಂಜಾ ಹಿಂದೊಮ್ಮೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಇದೇ ರೀತಿ ಅವ್ಯಾಚ್ಯ ಶಬ್ದಗಳಿಂದ ಬೈದು ರಂಪಾಟ ಮಾಡಿದ್ದು , ನಿನ್ನೆ ಬೆಳ್ತಂಗಡಿ ಪಿಎಸ್ ಐ ಯನ್ನು ಬೈದಿದ್ದಾರೆ. ಬಹುಷಃ ಪೂಂಜಾ ಅವರು ತನ್ನಲ್ಲಿರುವ ಶಾಸಕ ಸ್ಥಾನ ತಮ್ಮ ಹಿರಿಯರಿಂದ ಬಳುವಳಿಯಾಗಿ ತನಗೆ ಬಂದದ್ದು ಎಂದು ಭಾವಿಸಿರಬೇಕು. ತಾನು ಈ ದೇಶದ ಸಂವಿಧಾನದ ಅಡಿಯಲ್ಲಿನ ಶಾಸಕಾಂಗದ ಅಡಿಯಲ್ಲಿನ ಓರ್ವ ಜವಾಬ್ದಾರಿಯುತ ಜನಪ್ರತಿನಿಧಿ ಎಂಬುದನ್ನು ಮರೆತು, ತನ್ನ ದುರ್ವರ್ತನೆಯ ಮೂಲಕ ತನ್ನ ಮಾತುಗಾರಿಕೆಯನ್ನು ಉಲ್ಲಂಘಿಸಿದ್ದಾರೆ.
ಅವರಿಗಿರುವ ಶಾಸಕ ಸ್ಥಾನ ನಾಡಿನ ಕಾನೂನು ವ್ಯವಸ್ಥೆಯನ್ನು ಪಾಲನೆಗೊಳಿಸಲು,ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು, ನಾಡನ್ನು ಅಭಿವೃದ್ಧಿ ಪಡಿಸಲು ಇರುವುದಾಗಿದೆ. ತನ್ನ ಶಾಸಕ ಸ್ಥಾನ ತನ್ನ ಹಿರಿಯರ ಪಾಳೆಗಾರಿಕೆಯನ್ನು ಮೆರೆಯಲು ಅಲ್ಲ ಎಂದು ಅವರು ತಿಳಿಯಬೇಕು. ಪೂಂಜರಿಗೆ ತಮ್ಮ ಬಾಯಲ್ಲಿ ಸೌಮ್ಯ ಸಂವಹನದ ಪದಗಳ ಕೊರತೆ ಇದ್ದಲ್ಲಿ ಈ ಬಗ್ಗೆ ತರಬೇತಿಯನ್ನಾದರೂ ಪಡೆದು ಕೊಳ್ಳಲಿ ಎಂದು ಕೆ.ಅಶ್ರಫ್( ಮಾಜಿ ಮೇಯರ್) ಪ್ರತಿಕ್ರಿಯಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ