ಜಿದ್ದಾ,ಏ.15- ವಿದೇಶದಿಂದ ಬರುವ ಉಮ್ರಾ ಯಾತ್ರಾರ್ಥಿಗಳ ವೀಸಾ ಅವಧಿಯು ಧುಲ್ ಖಅದ 15 (ಮೇ.23)ಕೊನೆಯ ದಿನವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿದೆ ಎಂದು ಸೌದಿ ಗಜೆಟ್ ವರದಿ ಮಾಡಿದೆ. ಆದರೆ, ಈ ಬಗ್ಗೆ ಸಚಿವಾಲಯದಿಂದ ಹೊಸ ಸ್ಪಷ್ಟೀಕರಣ ಬಂದಿದ್ದು, ಅದು ಸೌದಿಗೆ ಪ್ರವೇಶಿಸುವ ಕೊನೆಯ ದಿನಾಂಕವಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಾರ್ಷಿಕ ಹಜ್ ಯಾತ್ರೆಗಾಗಿ ಪ್ರಪಂಚದಾದ್ಯಂತದ ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನಾಗಳಿಗೆ ಯಾತ್ರಾರ್ಥಿಗಳ ಹರಿವನ್ನು ಸುಗಮಗೊಳಿಸುವ ಸಲುವಾಗಿ, ಉಮ್ರಾ ವೀಸಾ ಮುಕ್ತಾಯ ದಿನಾಂಕವನ್ನು ದುಲ್ ಖಅದ 29 ರಿಂದ ದುಲ್ ಖಅದ 15 ಕ್ಕೆ ಬದಲಾಯಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇನ್ಮುಂದೆ ಸೌದಿ ಅರೇಬಿಯಾಕ್ಕೆ ಪ್ರವೇಶಿಸಿದ ದಿನಾಂಕದಿಂದ ಹಿಂದೆ ಅನುಮೋದಿಸಲಾದ ಸಿಂಧುತ್ವದ ಬದಲಿಗೆ ಮೂರು ತಿಂಗಳ ಉಮ್ರಾ ವೀಸಾದ ಸಿಂಧುತ್ವವನ್ನು ಅದರ ವಿತರಣೆಯ ದಿನಾಂಕದಿಂದ ಪ್ರಾರಂಭಿಸಲಾಗುವುದು ಎಂದು ಸಚಿವಾಲಯ ವಿವರಿಸಿದೆ. ಸಚಿವಾಲಯವು ತನ್ನ ಎಕ್ಸ್ ಪ್ಲಾಟ್ಫಾರ್ಮ್ ಮೂಲಕ ಕೇಳಲಾದ ಹಲವಾರು ವಿಚಾರಣೆಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಸ್ಪಷ್ಟಪಡಿಸಿದೆ.
ಉಮ್ರಾ ವೀಸಾದ ಸಿಂಧುತ್ವವು ಅದರ ವಿತರಣೆಯ ದಿನಾಂಕದಿಂದ ಮೂರು ತಿಂಗಳುಗಳಾಗಿರುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ, ಪ್ರತೀ ವರ್ಷ ಅದು ದುಲ್ ಖಅದ 15 ರಂದು ಕಾಲವಧಿ ಕೊನೆಗೊಳ್ಳಲಿದೆ. ಈ ಹಿಂದೆ ದುಲ್ ಖಅದ 29 ಆಗಿತ್ತು ಕೊನೇ ದಿನಾಂಕ.
“ಈ ಹಿಂದೆ ಘೋಷಿಸಲಾದ ದುಲ್ ಖಅದ 29 ರ ಮುಕ್ತಾಯ ದಿನಾಂಕಕ್ಕಿಂತ ಎರಡು ವಾರಗಳ (14 ದಿನಗಳು) ಮುಂಚಿತವಾಗಿ,ಧುಲ್ ಖಅದ 15 ರ ದಿನಾಂಕವನ್ನು ಅನುಮೋದಿಸಲಾಗಿದೆ” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಉಮ್ರಾ ವೀಸಾ ಕಾಲಾವಧಿ: ಗೊಂದಲಕ್ಕೆ ತೆರೆ- ಜೂನ್ 6 ರೊಳಗೆ ಸೌದಿ ತೊರೆಯಬೇಕು
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ