ಮಂಗಳೂರು: ಕೃಷ್ಣಾಪುರ ಕ್ರಾಸ್ ಮತ್ತು ಚೊಕ್ಕಬೆಟ್ಟು ಮಧ್ಯಭಾಗದಲ್ಲಿರುವ ಕೆಲವು ಮನೆಗಳಿಂದ ಎಂ.ಆರ್.ಪಿ.ಎಲ್ ಕಾರ್ಖಾನೆಗೆ ನೀರನ್ನು ಮಧ್ಯರಾತ್ರಿಯಲ್ಲಿ ಸರಬರಾಜು ಮಾಡುತ್ತಿರುವ ಜಲ ಮಾಫಿಯಾ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ನಾಗರಿಕರಿಗೆ ಸಮೀಪದಲ್ಲಿನ ಕೊಳವೆ ಬಾವಿಯಿಂದ ಪ್ರತೀ ಮನೆಗಳಿಗೆ ಕುಡಿಯುವ ನೀರನ್ನು ವಿತರಿಸುತ್ತಿದ್ದು, ಸದ್ರಿ ಮೇಲೆ ತಿಳಿಸಲಾದ ಕೆಲವು ಮನೆಗಳು ಕಾರ್ಖಾನೆಗೆ ತಮ್ಮ ಬಾವಿಯ ನೀರನ್ನು ಸರಬರಾಜು ಮಾಡುತ್ತಿರುವ ಕಾರಣ ಪರಿಸರದ ನೀರು ಬರಿದಾಗುತ್ತಿದ್ದು ಸ್ಥಳೀಯ ನಿವಾಸಿಗಳಿಗೆ. ಜನಸಾಮಾನ್ಯರಿಗೆ ಕುಡಿಯುವ ನೀರಿನ ಅಭಾವವಾಗಿ ಬಹಳ ತೊಂದರೆ ಉಂಟಾಗಿದೆ.
ಇದಕ್ಕೆ ಪರಿಹಾರ ಒದಗಿಸುವಂತೆ ಸಾರ್ವಜನಿಕರು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ.



“ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೃಷ್ಣಾಪುರ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಸ್ಥಳೀಯ ನಾಗರಿಕರು ಬಳಲುತ್ತಿರುವ ಈ ಸಂದರ್ಭದಲ್ಲಿ ಕೃಷ್ಣಾಪುರ ಕ್ರಾಸ್ ಮತ್ತು ಚೊಕ್ಕಬೆಟ್ಟು ಮಧ್ಯಭಾಗದಲ್ಲಿರುವ ಕೆಲವು ಮನೆಗಳವರು ತಮ್ಮ ಬಾವಿಯಿಂದ ಎಂ.ಆರ್.ಪಿ.ಎಲ್ ಕಾರ್ಖಾನೆಗೆ ನೀರನ್ನು ಮಧ್ಯರಾತ್ರಿಯಲ್ಲಿ ಸರಬರಾಜು (ವಿಕ್ರಯಿಸುತ್ತಿರುವುದು) ಮಾಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಆದುದರಿಂದ ಗೌರವಾನ್ವಿತ ಅಧಿಕಾರಿಗಳು ತಕ್ಷಣವೇ ವಿಷಯದ ಕೂಲಂಕುಷ ಅಧ್ಯಯನ ನಡೆಸಿ, ನಮ್ಮ ಸಮಸ್ಯೆಯನ್ನು ಬಗೆಹರಿಸುವಲ್ಲಿ ಎಂ.ಆರ್.ಪಿ.ಎಲ್ ಕಾರ್ಖಾನೆಗೆ ನೀರು ಸರಬರಾಜು ಮಾಡುತ್ತಿರುವುದನ್ನು ಶಾಶ್ವತ ತಡೆಹಿಡಿದು ಪರಿಸರದವರಿಗೆ ನ್ಯಾಯ ಒದಗಿಸಿಕೊಡಬೇಕಾಗಿ ಈ ಮೂಲಕ ವಿನಂತಿಸುತ್ತೇವೆ”
















ಇನ್ನಷ್ಟು ಸುದ್ದಿಗಳು
ತಪ್ಪು ಮುನ್ನೆಚ್ಚರಿಕೆ ಸಂದೇಶ- ತಾಂತ್ರಿಕ ದೋಷಕ್ಕೆ ವಿಷಾದ ವ್ಯಕ್ತಪಡಿಸಿದ ಯುಎಇ
ಆರೋಪ-ಅಪಹಾಸ್ಯಗಳ ನಡುವೆ ಧೀಮಂತ ನಾಯಕತ್ವ: ಶಾಫಿ ಸಅದಿ ಉಸ್ತಾದರ ಮುಕ್ತ ಅನಿಸಿಕೆ
‘ಸಮಸ್ತ’: ಇತಿಹಾಸ ಮತ್ತು ವರ್ತಮಾನದ ನೆನಪುಗಳನ್ನು ಮೆಲುಕು ಹಾಕಿದ ನಾಯಕರು
ಅನಿವಾಸಿಗಳಿಗೆ ಭಾರಿ ಹೊಡೆತ; ಪಾಸ್ಪೋರ್ಟ್ ದರಗಳಲ್ಲಿ ಗಣನೀಯ ಹೆಚ್ಚಳ- ಪರಿಷ್ಕೃತ ಶುಲ್ಕ ಜುಲೈ 1 ರಿಂದ ಜಾರಿ
ಗಲ್ಫ್ ಸೇರಿದಂತೆ ವಿದೇಶದಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ‘ಏರ್ ಸುವಿಧಾ’ ಡಿಕ್ಲರೇಷನ್ ಕಡ್ಡಾಯ
ಪಾಸ್ಪೋರ್ಟ್ ಮತ್ತು ಪೌರತ್ವದ ವಿರೋಧಾಭಾಸ – ಜಗತ್ತಿಗೆ ಭಾರತೀಯ, ಸ್ವದೇಶದಲ್ಲೇ ಪ್ರಶ್ನಾರ್ಹ?
ಆಧಾರ್ ಮತ್ತು ಪಾಸ್ಪೋರ್ಟ್ ಪೌರತ್ವ ದಾಖಲೆಯಲ್ಲ: ಹಾಗಾದ್ರೆ ನಿಜವಾದ ದಾಖಲೆ ಯಾವುದು?
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ