ಶಿರಿಯ: ಹಲವಾರು ಮೊಹಲ್ಲಾಗಳ ಖಾಝಿಯೂ ಸಮಸ್ತ ಉಪಾಧ್ಯಕ್ಷರೂ ಆಗಿದ್ದ ತಾಜುಶ್ಶರೀಅಃ ಅಲೀಕುಂಞಿ ಉಸ್ತಾದರ ಎರಡನೇ ಉರೂಸ್ ಸಮಾರಂಭವು ಇಂದು (ಮಾರ್ಚ್ 16) ನಡೆಯಲಿದೆ.
ಬೆಳಿಗ್ಗೆ 9ಗಂಟೆಗೆ ನಡೆಯುವ ಮಖಾಂ ಝಿಯಾರತಿಗೆ ಸಯ್ಯಿದ್ ಎಂಎಸ್ ತಂಙಳ್ ಮದನಿ ಮಾಸ್ತಿಕುಂಡ್ ನೇತೃತ್ವ ವಹಿಸುವರು. ಬೆಳಿಗ್ಗೆ 9.15ಕ್ಕೆ ಮುಟ್ಟಂ ಕುಂಞಿಕೋಯ ತಂಙಳ್ ಧ್ವಜಾರೋಹಣಕ್ಕೆ ನೇತೃತ್ವ ನೀಡುವರು. ಸಯ್ಯಿದ್ ಹಾಮಿದ್ ತಂಙಳ್ ಮಂಜೇಶ್ವರಂ ಖತ್ಮುಲ್ ಖುರ್ಆನ್ ಪ್ರಾರಂಭ ನಡೆಸುವರು. ಸಂಜೆ 4 ಗಂಟೆಗೆ ನಡೆಯುವ ದ್ಸಿಕ್ರ್ ಮೌಲಿದ್ ಮಜ್ಲಿಸಿಗೆ ಸಯ್ಯಿದ್ ಕೆಎಸ್ ಅಲಿ ತಂಙಳ್ ಕುಂಬೋಲ್, ಸಯ್ಯಿದ್ ಕೆಎಸ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಲ್, ಸಯ್ಯಿದ್ ಅಬ್ದುಲ್ ರಹ್ಮಾನ್ ಶಹೀರ್ ಅಲ್ ಬುಖಾರಿ ಮಳ್ಹರ್ ಮುಂತಾದವರು ನೇತೃತ್ವ ವಹಿಸುವರು.
ರಾತ್ರಿ 7 ಗಂಟೆಗೆ ನಡೆಯುವ ಜಲ್ಸತುಲ್ ಉರೂಸ್ ಕಾರ್ಯಕ್ರಮದಲ್ಲಿ ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ದುಃಆ ನಡೆಸುವರು. ಅಬ್ದುಲ್ ರಹ್ಮಾನ್ ನಿಝಾಮಿ ಶಿರಿಯರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ ಕೆಎಸ್ ಆಟ್ಟಕ್ಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಶೈಖುನಾ ಮಾಣಿ ಉಸ್ತಾದ್, ಅತಾಉಲ್ಲಾ ತಂಙಳ್ ಉದ್ಯಾವರ, ಮಾಣಿಕ್ಕೋತ್ ಅಬ್ದುಲ್ಲ ಮುಸ್ಲಿಯಾರ್, ಹುಸೈನ್ ಸಅದಿ ಕೆಸಿ ರೋಡ್, ಎಕೆಎಂ ಅಶ್ರಫ್ ಎಂಎಲ್ಎ ಮುಂತಾದವರು ಪ್ರಭಾಷಣೆ ನಡೆಸುವರು. ಡಾ.ಫಾರೂಕ್ ನಈಮಿ ಕೊಲ್ಲಂ ಅನುಸ್ಮರಣ ಭಾಷಣ ನಡೆಸುವರು.
ರಾತ್ರಿ 9 ಗಂಟೆಗೆ ನಡೆಯುವ ಬುರ್ದಾ ಮಜ್ಲಿಸಿಗೆ ತ್ವಾಹ ತಂಙಳ್ ಪೂಕೋಟೂರ್, ಅಬ್ದುಸ್ಸಮದ್ ಅಮಾನಿ ಪಟ್ಟುವಂ, ಹಾಫಿಳ್ ಸ್ವಾದಿಕ್ ಫಾಳಿಲಿ ಮುಂತಾದವರು ನೇತೃತ್ವ ನೀಡುವರು.
ಸಮಾರೋಪ ಸಮಾರಂಭಕ್ಕೆ ಸಯ್ಯಿದ್ ಸುಹೈಲ್ ಅಸ್ಸಖಾಫ್ ಮಡಕ್ಕರ ನೇತೃತ್ವ ವಹಿಸುವರು. 9.30ಕ್ಕೆ ಅನ್ನದಾನದೊಂದಿಗೆ ಸಮಾಪ್ತಿಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:
ಉರೂಸ್ ಸಮಿತಿ ಪದಾಧಿಕಾರಿಗಳಾದ ಶಾಫಿ ಸಅದಿ ಶಿರಿಯ, ಮುಹಮ್ಮದ್ ಸಖಾಫಿ ಕುಳೂರ್, ಡಿಕೆ ಉಮರ್ ಸಖಾಫಿ, ಅನ್ವರ್ ಸಖಾಫಿ ಶಿರಿಯ, ಸಹಲ್ ಸಖಾಫಿ, ನಸೀರ್ ಶಿರಿಯ ಯೂಸುಫ್ ತರವಾಡ್
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ