ರಿಯಾದ್: ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ “ಸೌದಿಯಾ”(Saudia Airlines) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ವಿಮಾನ ಟಿಕೆಟ್ ಖರೀದಿಸುವ ಮೂಲಕ ದೇಶವನ್ನು ಪ್ರವೇಶಿಸಲು ಉಚಿತ ಪ್ರವಾಸಿ ವೀಸಾ(Free Tourist Visa) ವನ್ನು ಒದಗಿಸುವುದಾಗಿ ಬಹಿರಂಗಪಡಿಸಿದೆ.
ವಿಮಾನಯಾನದ ಟಿಕೆಟ್ ಖರೀದಿಸುವಾಗ,ಪ್ರವಾಸೋದ್ಯಮಕ್ಕಾಗಿ ದೇಶವನ್ನು ಪ್ರವೇಶಿಸಲು ಟೂರಿಸ್ಟ್ ವೀಸಾವನ್ನು ಉಚಿತವಾಗಿ ನೀಡುವ ಸೇವೆಯೊಂದನ್ನು ಸೌದಿ ಏರ್ಲೈನ್ಸ್ ಮುಂದಿನ ಕೆಲವೇ ದಿನಗಳಲ್ಲಿ ಪ್ರಾರಂಭಿಸಲಿದೆ ಎಂದು ಏರ್ಲೈನ್ನ ವಕ್ತಾರ ಅಬ್ದುಲ್ಲಾ ಅಲ್ ಶಹರಾನಿ ತಿಳಿಸಿದ್ದಾರೆ.
‘ನಿಮ್ಮ ಟಿಕೆಟ್ ವೀಸಾ ಆಗಿರುತ್ತದೆ’ಎಂಬ ಶೀರ್ಷಿಕೆಯ ಈ ಯೋಜನೆಯಡಿ ಸೌದಿ ಆರೇಬಿಯಾಕ್ಕೆ ಪ್ರಯಾಣಿಸುವವರಿಗೆ 96 ತಾಸುಗಳ ಕಾಲ (ನಾಲ್ಕು ದಿನಗಳು) ಸೌದಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಪ್ರವಾಸೋದ್ಯಮ ಹಾಗೂ ಉಮ್ರಾದ ಉದ್ದೇಶಗಳಿಗಾಗಿ ದೇಶಕ್ಕೆ ಆಗಮಿಸುವವರಿಗೆ ನೂತನ ಸೇವೆ ಲಭ್ಯವಾಗಲಿದೆ.
ಸೌದಿ ಏರ್ಲೈನ್ಸ್ ನ ನೂತನ ಪ್ರವಾಸಿ ವೀಸಾ ವ್ಯವಸ್ಥೆಯಡಿ ಪ್ರಯಾಣಿಕರು ಟಿಕೆಟ್ ಬುಕಿಂಗ್ ಜೊತೆಗೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಟಿಕೆಟನ್ನು ಖರೀದಿಸುವಾಗ ವೀಸಾ ಅಗತ್ಯವಿದೆಯೇ ಎಂದು ವಿಚಾರಿಸಲಾಗುತ್ತದೆ. ಅಗತ್ಯವಿದೆಯೆಂದು ಉತ್ತರಿಸಿದರೆ ಮೂರು ನಿಮಿಷಗಳೊಳಗೆ ಪ್ರವಾಸಿ ವೀಸಾ ಲಭಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲದೆ ವೀಸಾವನ್ನು ಪಡೆಯಲು ಸೌದಿ ಆರೇಬಿಯಾದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ ಅನ್ನು ಸಂದರ್ಶಿಸುವ ಅಗತ್ಯವೂ ಇರುವುದಿಲ್ಲ.
ಉಮ್ರಾ ನಿರ್ವಹಣೆಗೆ ಮುಸ್ಲಿಮರ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂತನ ಪ್ರವಾಸಿ ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಲು ತನಗೆ ಪ್ರೇರೇಪಣೆ ದೊರೆತಿದೆ ಎಂದು ಅಬ್ದುಲ್ಲಾ ಅಲ್ ಶಹರಾನಿ ಹೇಳಿದರು.
ಸೌದಿ ವಿಷನ್ 2030 ಗೆ ಅನುಗುಣವಾಗಿ ತಮ್ಮ ಟಿಕೆಟ್ಗಳನ್ನು ಖರೀದಿಸಲು ಸೌದಿಯಾ ಪ್ರಯಾಣಿಕರಿಗೆ ಪ್ರವಾಸಿ ವೀಸಾವನ್ನು ಪಡೆಯಲು ಅನುವು ಮಾಡಿಕೊಡಲು ಕ್ಯಾರಿಯರ್ನ ಡಿಜಿಟಲ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸಲು ಅವರು ಒತ್ತು ನೀಡಿದರು.
ಈ ಪ್ರವಾಸಿ ವೀಸಾದಲ್ಲಿ ದೇಶಕ್ಕೆ ಆಗಮಿಸುವವರಿಗೆ ದೇಶದ ಯಾವುದೇ ಕಡೆಗಳಿಗೆ ತೆರಳಬಹುದು, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು ಪ್ರತ್ಯೇಕವಾಗಿ, ಉಮ್ರಾ ಮತ್ತು ಮದೀನಾ ಝಿಯಾರತ್ ಕೈಗೊಳ್ಳಲು ಈ ವೀಸಾ ಅನುವು ಮಾಡಿಕೊಡುತ್ತದೆ ಎಂದು ಅಲ್ ಶಹರಾನಿ ಹೇಳಿದರು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ