ರಿಯಾದ್: ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ “ಸೌದಿಯಾ”(Saudia Airlines) ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ವಿಮಾನ ಟಿಕೆಟ್ ಖರೀದಿಸುವ ಮೂಲಕ ದೇಶವನ್ನು ಪ್ರವೇಶಿಸಲು ಉಚಿತ ಪ್ರವಾಸಿ ವೀಸಾ(Free Tourist Visa) ವನ್ನು ಒದಗಿಸುವುದಾಗಿ ಬಹಿರಂಗಪಡಿಸಿದೆ.
ವಿಮಾನಯಾನದ ಟಿಕೆಟ್ ಖರೀದಿಸುವಾಗ,ಪ್ರವಾಸೋದ್ಯಮಕ್ಕಾಗಿ ದೇಶವನ್ನು ಪ್ರವೇಶಿಸಲು ಟೂರಿಸ್ಟ್ ವೀಸಾವನ್ನು ಉಚಿತವಾಗಿ ನೀಡುವ ಸೇವೆಯೊಂದನ್ನು ಸೌದಿ ಏರ್ಲೈನ್ಸ್ ಮುಂದಿನ ಕೆಲವೇ ದಿನಗಳಲ್ಲಿ ಪ್ರಾರಂಭಿಸಲಿದೆ ಎಂದು ಏರ್ಲೈನ್ನ ವಕ್ತಾರ ಅಬ್ದುಲ್ಲಾ ಅಲ್ ಶಹರಾನಿ ತಿಳಿಸಿದ್ದಾರೆ.
‘ನಿಮ್ಮ ಟಿಕೆಟ್ ವೀಸಾ ಆಗಿರುತ್ತದೆ’ಎಂಬ ಶೀರ್ಷಿಕೆಯ ಈ ಯೋಜನೆಯಡಿ ಸೌದಿ ಆರೇಬಿಯಾಕ್ಕೆ ಪ್ರಯಾಣಿಸುವವರಿಗೆ 96 ತಾಸುಗಳ ಕಾಲ (ನಾಲ್ಕು ದಿನಗಳು) ಸೌದಿಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ಪ್ರವಾಸೋದ್ಯಮ ಹಾಗೂ ಉಮ್ರಾದ ಉದ್ದೇಶಗಳಿಗಾಗಿ ದೇಶಕ್ಕೆ ಆಗಮಿಸುವವರಿಗೆ ನೂತನ ಸೇವೆ ಲಭ್ಯವಾಗಲಿದೆ.
ಸೌದಿ ಏರ್ಲೈನ್ಸ್ ನ ನೂತನ ಪ್ರವಾಸಿ ವೀಸಾ ವ್ಯವಸ್ಥೆಯಡಿ ಪ್ರಯಾಣಿಕರು ಟಿಕೆಟ್ ಬುಕಿಂಗ್ ಜೊತೆಗೆ ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಟಿಕೆಟನ್ನು ಖರೀದಿಸುವಾಗ ವೀಸಾ ಅಗತ್ಯವಿದೆಯೇ ಎಂದು ವಿಚಾರಿಸಲಾಗುತ್ತದೆ. ಅಗತ್ಯವಿದೆಯೆಂದು ಉತ್ತರಿಸಿದರೆ ಮೂರು ನಿಮಿಷಗಳೊಳಗೆ ಪ್ರವಾಸಿ ವೀಸಾ ಲಭಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅಲ್ಲದೆ ವೀಸಾವನ್ನು ಪಡೆಯಲು ಸೌದಿ ಆರೇಬಿಯಾದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ ಅನ್ನು ಸಂದರ್ಶಿಸುವ ಅಗತ್ಯವೂ ಇರುವುದಿಲ್ಲ.
ಉಮ್ರಾ ನಿರ್ವಹಣೆಗೆ ಮುಸ್ಲಿಮರ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೂತನ ಪ್ರವಾಸಿ ವೀಸಾ ವ್ಯವಸ್ಥೆಯನ್ನು ಜಾರಿಗೊಳಿಸಲು ತನಗೆ ಪ್ರೇರೇಪಣೆ ದೊರೆತಿದೆ ಎಂದು ಅಬ್ದುಲ್ಲಾ ಅಲ್ ಶಹರಾನಿ ಹೇಳಿದರು.
ಸೌದಿ ವಿಷನ್ 2030 ಗೆ ಅನುಗುಣವಾಗಿ ತಮ್ಮ ಟಿಕೆಟ್ಗಳನ್ನು ಖರೀದಿಸಲು ಸೌದಿಯಾ ಪ್ರಯಾಣಿಕರಿಗೆ ಪ್ರವಾಸಿ ವೀಸಾವನ್ನು ಪಡೆಯಲು ಅನುವು ಮಾಡಿಕೊಡಲು ಕ್ಯಾರಿಯರ್ನ ಡಿಜಿಟಲ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸಲು ಅವರು ಒತ್ತು ನೀಡಿದರು.
ಈ ಪ್ರವಾಸಿ ವೀಸಾದಲ್ಲಿ ದೇಶಕ್ಕೆ ಆಗಮಿಸುವವರಿಗೆ ದೇಶದ ಯಾವುದೇ ಕಡೆಗಳಿಗೆ ತೆರಳಬಹುದು, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು ಪ್ರತ್ಯೇಕವಾಗಿ, ಉಮ್ರಾ ಮತ್ತು ಮದೀನಾ ಝಿಯಾರತ್ ಕೈಗೊಳ್ಳಲು ಈ ವೀಸಾ ಅನುವು ಮಾಡಿಕೊಡುತ್ತದೆ ಎಂದು ಅಲ್ ಶಹರಾನಿ ಹೇಳಿದರು.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ