ಮಂಗಳೂರು: “ಈ ದೇಶದ ಮುಸ್ಲಿಮರು ವಾಕ್ಚಾತುರ್ಯ ಮಾಡ ಕೂಡದು, ಅವರಿಗೆ ಭಾರತದಲ್ಲಿ ಭಯ ಬೇಡ, ಇಲ್ಲಿನ ನಿರ್ಧಿಷ್ಟ ಸಮುದಾಯವೊಂದು ಸಾವಿರಾರು ವರ್ಷದಿಂದ ಕಲಹದಿಂದ ಬದುಕುತ್ತಿದೆ” ಎಂಬಿತ್ಯಾದಿ ಮೋಹನ್ ಭಾಗವತ್(Mohan Bhagwat) ರ ಅಸಂಬದ್ಧ ಹೇಳಿಕೆಗೆ ಮುಸ್ಲಿಮ್ ಒಕ್ಕೂಟದ ಅಧ್ಯಕರಾದ ಕೆ.ಅಶ್ರಫ್(K.Ashraf) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂತಹಾ ಹೇಳಿಕೆ ನೀಡಿ ಇಲ್ಲಿನ ಮುಸ್ಲಿಮೇತರನ್ನು ಖುಷಿ ಪಡಿಸಲು, ಮುಸ್ಲಿಮರ ಬಗ್ಗೆ ಕಾಳಜಿ ವಹಿಸುವುದರಲ್ಲಿ ಅರ್ಥವಿಲ್ಲ. ಭಾಗವತರ ಹೇಳಿಕೆ ಒಂದರ್ಥದಲ್ಲಿ ಖಂಡನೀಯ, ಮುಸ್ಲಿಮರ ಪ್ರತಿಕ್ರಿಯೆ ಅಪೇಕ್ಷಿಸಿಯೇ ಹೇಳಿಕೆ ನೀಡುವ ಭಾಗವತರ ಸಮುದಾಯ ಈ ದೇಶಕ್ಕಾಗಿ ಮಾಡಿದ್ದಾದರೂ ಏನು ಎಂಬುದನ್ನಾದರೂ ಬಹಿರಂಗ ಪಡಿಸಬೇಕಿತ್ತು ಎಂದು ಅಶ್ರಫ್ ಆಗ್ರಹಿಸಿದರು.
ಮುಸ್ಲಿಮರು ಈ ದೇಶಕ್ಕಾಗಿ ಮಾಡಿದ ತ್ಯಾಗ, ಸೇವೆ ಮತ್ತು ಕೊಡುಗೆಗಳ ಪಟ್ಟಿಯು ಈ ಮಣ್ಣಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದನ್ನು ವಿವರಿಸುವ ಅಗತ್ಯ ಈ ಸಂಧರ್ಭದಲ್ಲಿ ಬರಲಾರದು.ಆದರೆ, ಭಾಗವತರು ಈ ದೇಶದ ಮುಸ್ಲಿಮರ ಬಗ್ಗೆ ಕಾಳಜಿ ವಹಿಸುವ ಬದಲು ವೈದಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಮತ್ತು ತಮ್ಮ ಕಾಳಜಿಯಲ್ಲಿ ಮುಸ್ಲಿಮರನ್ನು ಸೇರ್ಪಡೆ ಗೊಳಿಸುವ ಅಗತ್ಯವೂ ಇಲ್ಲ.
ಈ ದೇಶದ ಮುಸ್ಲಿಮರು ಯಾರದೊ ಹಂಗಿನಲ್ಲಿ ಈ ದೇಶದಲ್ಲಿ ಬದುಕುತ್ತಿಲ್ಲ, ಬದಲಾಗಿ ಮುಸ್ಲಿಮರು ಈ ದೇಶದಲ್ಲಿ ಅವರದ್ದೇ ಆದ ಸಂಸ್ಕೃತಿ, ಸುಶಿಕ್ಷಣ ಮತ್ತು ಸಂಪ್ರದಾಯದಂತೆ ಬದುಕಿ ಈ ಮಣ್ಣಿನೊಂದಿಗೆ ಲೀನವಾಗುವ ಸರ್ವ ಹಕ್ಕನ್ನು ಹೊಂದಿದ್ದಾರೆ. ಅದಕ್ಕೆ ಯಾರದೋ ಶಿಫಾರಸಿನ ಅಗತ್ಯವೂ ಇಲ್ಲ. ಇವೆಲ್ಲದರ ಕೊರತೆ ಬಹುಷಃ ಒಂದು ನಿರ್ಧಿಷ್ಟ ಸಮುದಾಯಕ್ಕೆ ಇರಲೂ ಬಹುದು, ಆ ಬಗ್ಗೆ ಭಾಗವತರು ಕಾಳಜಿ ವಹಿಸುವುದು ಈ ಸಂದರ್ಭದ ಅನಿವಾರ್ಯತೆ ಕೂಡಾ ಹೌದು ಎಂಬುದನ್ನು ಅರಿಯಲಿ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ