ಬೆಳ್ಳಾರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಮರಹೂಂ ಮಾಸ್ತಿಕಟ್ಟೆ ಇಸ್ಮಾಯಿಲ್ ಹಾಜಿ ಅವರ ಹೆಸರಿನಲ್ಲಿ ಮಕ್ಕಳು ದಾನವಾಗಿ ನೀಡಿದ ಸ್ಥಳದಲ್ಲಿ ಕಾರ್ಯಾಚರಿಸುತ್ತಿರುವ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.
ಇದೊಂದು ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಕೇಂದ್ರವಾಗಿದೆ . ಇಲ್ಲಿ ಹಿಫ್ಝುಲ್ ಕುರಾನ್ ಕಾಲೇಜು , ದರ್ಸ್, ಅಖಿಲ ಭಾರತದ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಮದರಸ , ಇಂಗ್ಲಿಷ್ ಮೀಡಿಯಂ ಸ್ಕೂಲ್ ಸೇರಿದಂತೆ ಸಂಸ್ಥೆಯಲ್ಲಿ ಸುಮಾರು 200 ಕ್ಕಿಂತ ಅಧಿಕ ಮಕ್ಕಳು ವಿದ್ಯಾರ್ಜನೆ ಪಡೆಯುತ್ತಿದ್ದರೆ. ಸಂಸ್ಥೆಯು ಜಮಾಲುಲೈಲಿ ಸಯ್ಯದ್ ಕುಟುಂಬದ ಆದ್ಯಾತ್ಮಿಕ ನೇತಾರರಾದ ಅಸ್ಸಯ್ಯದ್ ಕಾಜೂರ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಬೆಳ್ಳಾರೆ ಮತ್ತು ಪರಿಸರದ ಉಲಮಾ ಉಮರಾ ಹಾಗು ಪ್ರವಾಸಿ ಸಹೋದರರ ಕಠಿಣ ಪರಿಶ್ರಮದಿಂದ ಅಭಿವೃದ್ಧಿಯತ್ತ ಹೆಜ್ಜೆಯಿಡುತ್ತಿದೆ.ಇದೀಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಟ್ಟಡ ಕೊರತೆಯು ಪ್ರಮುಖ ಅಂಶವಾಗಿದೆ ಇದನ್ನು ಪರಿಹರಿಸಲು ದಾರುಲ್ ಹಿಕ್ಮ ಇದರ ಅನಿವಾಸಿ ಘಟಕವಾದ ದಾರುಲ್ ಹಿಕ್ಮ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಇದರ ನೇತೃತ್ವದಲ್ಲಿ ವಿಶಾಲವಾದ ಸೌಕರ್ಯವುಳ್ಳ ಕಟ್ಟಡ ಕಾಮಗಾರಿಗೆ ಪದ್ದತಿಯನ್ನು ರೂಪಿಸಿದ್ದು ಇದರ 3D ಇಮೇಜ್ ( BLUE PRINT ) ಅನ್ನು ಸಂಸ್ಥೆಯಲ್ಲಿ ನಡೆದ ನೂರೇ ರಸೂಲ್ ಮೀಲಾದ್ ಕಾರ್ಯಕ್ರಮದಲ್ಲಿ ಅನಾವರಣ ಗೊಳಿಸಲಾಯಿತು.ಅಸ್ಸಯ್ಯದ್ ಕಾಜೂರ್ ತಂಗಳ್ ರವರ ನೇತೃತ್ವದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ , ಉಪಾಧ್ಯಕ್ಷರಾದ BA ಮಹಮೂದ್ ಬೆಳ್ಳಾರೆ, ಹಮೀದ್ ಆಲ್ಫಾ, ಮುಸ್ತಫಾ ಮಾಸ್ತಿಕಟ್ಟೆ , ಸತ್ತಾರ್ ಸಖಾಫಿ ,ಹಸ್ಸನ್ ಹಾಜಿ ಇಂದ್ರಾಜೆ, YK ಸುಲೈಮಾನ್ ಹಾಜಿ ಇಂದ್ರಾಜೆ, ಆರೀಫ್ ಬೆಳ್ಳಾರೆ, ಝಕಾರಿಯಾ ಗೋವಾ, ಇಬ್ರಾಹಿಂ ಮದನಿ,ಉಬೈದ್ ಇಂದ್ರಾಜೆ ಮುಂತಾದ ಗಣ್ಯರು , ಸಂಸ್ಥೆಯ ಹಿತೈಷಿಗಳು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ