ಮಂಗಳೂರು: ಕಾರವಾರ ಜಿಲ್ಲೆಯಲ್ಲಿ ಅಂದು ಸಂಭವಿಸಿದ ಪರೇಶ್ ಮೇಸ್ತ ಎಂಬ ಹಿಂದುಳಿದ ವರ್ಗದ ಯುವಕನ ಸಾವನ್ನು, ತಕ್ಷಣ ಕೊಲೆ ಎಂದು ಪರಿವರ್ತಿಸಿ, ನಂತರ ಕೊಲೆಯ ಆರೋಪವನ್ನು ಒಂದು ನಿರ್ಧಿಷ್ಟ ಸಮುದಾಯದ ಮೇಲೆ ಹೊರಿಸಲಾಯಿತು.
ಆಗಾಗಲೇ ಅಭಿವೃದ್ಧಿ ವಿಷಯಗಳ ಬದಲಿಗೆ, ಧರ್ಮ, ನಂಬಿಕೆ, ಅತಿ ದೇಶ ಪ್ರೇಮ ಎಂಬಿತ್ಯಾದಿ ವಿಷಯಗಳ ಅಘೋಷಿತ ಪ್ರಣಾಳಿಕೆ ಹೊಂದಿದ್ದ ಬಿ.ಜೆ.ಪಿ ಪಕ್ಷಕ್ಕೆ ಸಾವುಗಳು ಪ್ರಣಾಳಿಕೆಯಾದವು, ಹಿಂದುಳಿದ ವರ್ಗ,ದಲಿತರು,ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಸಾವುಗಳನ್ನು ಈ ಪಕ್ಷವು ತನ್ನ ಫಸಲುಗಳಾಗಿ ಪರಿವರ್ತಿಸಿ, ಜನರಿಗೆ ತನ್ನ ಪ್ರಣಾಳಿಕಾ ಪ್ರಯೋಜನವನ್ನು ನೀಡಿತು.
ಅದೇ ಸಂದರ್ಭದಲ್ಲಿ ತಾನು ತನ್ನ ಪಕ್ಷದ ಜನತೆಗೆ ನೀಡಿದ ಭರವಸೆಯ ಅನುಪಾತದಲ್ಲಿ ಆರೋಪಿತ ಸಮುದಾಯದ ಜನತೆಯ, ಆಸ್ತಿ,ಪಾಸ್ತಿ ಗಳನ್ನು ನಷ್ಟ ಪಡಿಸಿತು. ಆರೋಪಿತ ಸಮುದಾಯದ ಜನತೆಗೆ ಅಸುರಕ್ಷಿತತೆ , ಭಯ, ಆತಂಕದ ಕೊಡುಗೆಯನ್ನು ನೀಡಿದೆ.ಪರೇಶ್ ಮೇಸ್ತ ಎಂಬ ಹಿಂದುಳಿದ ವರ್ಗದ ಜೀವವು ಪ್ರಕೃತಿಯಲ್ಲಿ ಲೀನವಾಯಿತು.
ಪ್ರಣಾಳಿಕಾ ಪ್ರಯೋಜನಾರ್ಥಿಗಳು ಇಂದು ನಿರಾಳರಾಗಿರುತ್ತಾರೆ. ಪರೇಶ್ ಮೇಸ್ತ ಸಾವಿನ ತನಿಖೆಯೂ ಅಂತ್ಯಗೊಂಡು ತನಿಖಾ ತಂಡ ಸಿ.ಬಿ.ಐ ಸಾವು ಆಕಸ್ಮಿಕ ಎಂದು ಘೋಷಿಸಿದೆ. ಪರೇಶ್ ಮೇಸ್ತ ಹೆಸರಿನಲ್ಲಿ ಚುನಾವಣೆ ಗೆದ್ದ ಬಿ.ಜೆ.ಪಿ ಜನತೆಯ ‘ ಕ್ಷಮೆ ‘ ಕೇಳಬೇಕಿದೆ. ಬಿ.ಜೆ.ಪಿ ತನ್ನ ಮುಂದಿನ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ವಿಷಯವನ್ನು ಪ್ರಮುಖವಾಗಿಸಿ ಚುನಾವಣೆ ಎದುರಿಸಲಿ ಎಂದು ಕೆ.ಅಶ್ರಫ್.
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಹೇಳಿಕೆ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ