ಮನಾಮ: ಬಹ್ರೇನ್ಗೆ ಸಂದರ್ಶಕರ ವೀಸಾದಲ್ಲಿ(Visit Visa) ಆಗಮಿಸುವವರು, ಪ್ರಯಾಣದ ಮುಂಚಿತವಾಗಿ ಮಾರ್ಗಸೂಚಿಗಳ ಪ್ರಕಾರವಿರುವ ಅಗತ್ಯ ದಾಖಲೆಗಳನ್ನ ಹೊಂದಿರುವುದಾಗಿ ಖಚಿತಪಡಿಸಿಕೊಳ್ಳುವಂತೆ ಭಾರತದ ರಾಯಭಾರ ಕಚೇರಿಯು ಸಲಹೆ ನೀಡಿದೆ.
ಬಹ್ರೇನ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ನಿಯಮಗಳ ಕುರಿತು ಅಧಿಕಾರಿಗಳು ಮಾರ್ಗದರ್ಶನ ನೀಡಿರುವ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯಿಂದ ಪ್ರಕಟಣೆ ಬಂದಿದೆ.
ಸಂದರ್ಶಕ ವೀಸಾದಲ್ಲಿ ಆಗಮಿಸಿ, ವಿಮಾನ ನಿಲ್ದಾಣದಿಂದ ಸ್ವದೇಶಕ್ಕೆ ಮರಳುವಂತಹಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಬಹ್ರೇನ್ ವಿಮಾನ ನಿಲ್ದಾಣ ಕಂಪನಿಯು ನಿಯಮವನ್ನು ಬಿಗಿಗೊಳಿಸಿದ ಕಾರಣ ಭಾರತೀಯ ರಾಯಭಾರ ಕಚೇರಿಯು ಸೂಚನೆಯನ್ನು ನೀಡಿದೆ.
ವಿಸಿಟ್ ವೀಸಾದಲ್ಲಿ ಆಗಮಿಸುವವರು ಪಾಲಿಸಬೇಕಾದ ನಿಯಮಗಳ ಬಗ್ಗೆ ಗಲ್ಫ್ ಏರ್(Gulf Air) ನಿನ್ನೆ ಟ್ರಾವಲ್ ಏಜೆನ್ಸಿಗಳಿಗೆ ಸುತ್ತೋಲೆಯನ್ನು ನೀಡಿದೆ.
ಷರತ್ತುಗಳನ್ನು ಪಾಲಿಸದೆ ವಿವಿಧ ದೇಶಗಳಿಂದ ಬಂದ 100 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕಳೆದ ದಿನ ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿತ್ತು. ಇತ್ತೀಚೆಗೆ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ಬಹ್ರೇನ್ನಲ್ಲಿ ಬಳಸಬಹುದಾದ ಅನುಮೋದಿತ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವುದು ಅಥವಾ ದಿನಕ್ಕೆ ಕನಿಷ್ಠ 50 ದಿನಾರ್ಗಳನ್ನು ಹೊಂದಿರುವುದು ಮುಖ್ಯ ಅವಶ್ಯಕತೆಯಾಗಿದೆ. ಇದರ ಹೊರತಾಗಿ, ಹೋಟೆಲ್ ಬುಕಿಂಗ್ ದೃಢೀಕರಣ ಅಥವಾ ಬಹ್ರೇನ್ನಲ್ಲಿರುವ ಪ್ರಾಯೋಜಕರ ನಿವಾಸದ ವಿದ್ಯುತ್ ಬಿಲ್, ಕವರಿಂಗ್ ಲೆಟರ್ ಮತ್ತು ಸಿಪಿಆರ್ ರೀಡರ್ ಪ್ರತಿಯೊಂದಿಗೆ ಬಾಡಿಗೆ ಒಪ್ಪಂದದ ದಾಖಲೆ ಹಾಗೂ ರಿಟರ್ನ್ ಟಿಕೆಟ್ ಹೊಂದಿರಬೇಕು ಎಂಬುದಾಗಿದೆ ಸಂದರ್ಶಕರ ವೀಸಾ ಹೊಂದಿರುವವರು ಅನುಸರಿಸಬೇಕಾದ ಇನ್ನೊಂದು ಷರತ್ತು.
ಗಲ್ಫ್ ಏರ್ನ ರಿಟರ್ನ್ ಟಿಕೆಟ್ ಅಲ್ಲದಿದ್ದರೆ, ಬಹ್ರೇನ್ನಲ್ಲಿ ಎಮಿಗ್ರೇಷನ್ ತಪಾಸಣೆಯ ಸಮಯದಲ್ಲಿ ಮಾನ್ಯತೆ ಇರುವ ಟಿಕೆಟ್ ಸಂಖ್ಯೆಯನ್ನು ಹೊಂದಿರಬೇಕು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ