janadhvani

Kannada Online News Paper

ಉದಯಪುರ ಘಟನೆ ಅಮಾನವೀಯ, ಅರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ಎಸ್ಸೆಸ್ಸೆಫ್

ಪೈಗಂಬರ್ ರವರ ಬಗ್ಗೆ ಅವಹೇಳನಕರವಾಗಿ ಬರೆದಿದ್ದು ಅಕ್ಷಮ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಕ್ಷಮೆ ನೀಡಿದ ಪರಂಪರೆಯಾಗಿದೆ ನಮಗಿರುವುದು.

ಜಗತ್ತಿಗೆ ಶಾಂತಿ ಸೌಹಾರ್ದತೆಯ ಪಾಠ ಕಲಿಸಿದ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಂ ರವರ ಬಗ್ಗೆ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯನ್ನು ಕೊಂದು ಹಾಕಿದ ಪ್ರಕರಣ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು ಇದನ್ನು ಎಸ್ಸೆಸ್ಸೆಫ್ ತೀವ್ರವಾಗಿ ಖಂಡಿಸಿದೆ.

ಪೈಗಂಬರ್ ರವರ ಬಗ್ಗೆ ಅವಹೇಳನಕರವಾಗಿ ಬರೆದಿದ್ದು ಅಕ್ಷಮ್ಯ. ಆದರೆ ಇಂತಹ ಸಂದರ್ಭಗಳಲ್ಲಿ ಕ್ಷಮೆ ನೀಡಿದ ಪರಂಪರೆಯಾಗಿದೆ ನಮಗಿರುವುದು. ಅಂಥವರನ್ನು ಕೊಂದು ಹಾಕಿ ಸಾಮರಸ್ಯ ಕದಡುವ ಕ್ಷುದ್ರ ಶಕ್ತಿಗಳು ಇಸ್ಲಾಮಿನ ಬಾಲಪಾಠವೂ ಕಲಿತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಹೇಳಿದರು.