janadhvani

Kannada Online News Paper

ಎಸ್.ಬಿ.ಎಸ್ ಕುಲಾಲು ಶಾಖೆಗೆ ನೂತನ ಸಾರಥ್ಯ

SBS ಕುಲಾಲು ಶಾಖೆಯ ವಾರ್ಷಿಕ ಮಹಾ ಸಭೆಯು ಜೂ.5 ಭಾನುವಾರ ಇಲ್ಲಿನ ಬದ್ರಿಯ ಮದ್ರಸಾದಲ್ಲಿ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ
ತ್ವಾಹಿರ್,ಪ್ರಧಾನ ಕಾರ್ಯದರ್ಶಿ ಶಕೀಲ್ ಹಾಗೂ ಕೋಶಾದಿಕಾರಿಯಾಗಿ ಅಫ್ನಾನ್ ಆಯ್ಕೆಯಾದರು.

ಸ್ಥಳೀಯ ಖತೀಬ್ ಹಾಗೂ ಸದರ್ ಮುಅಲ್ಲಿಂ ಮಸ್ಊದ್ ಸಅದಿ ದುಆ ನೆರವೇರಿಸಿ ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಅಹ್ಮದ್ ,ಕಾರ್ಯದರ್ಶಿ ಕರೀಂ ,ಕೋಶಾಧಿಕಾರಿ ಸಾದು ಮೋನು ,ಸದಸ್ಯರಾದ ಇಬ್ರಾಹೀಂ ,ಅಬ್ದುಲ್ಲಾ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

ಮದ್ರಸ ಮುಅಲ್ಲಿಂ ಶಿಹಾಬುದ್ದೀನ್ ಸಅದಿ‌ ಉಧ್ಘಾಟಿಸಿದರು. ಶಕೀಲ್ ಸ್ವಾಗತಿಸಿ‌ ವಂದಿಸಿದರು.