ಮಂಗಳೂರು: ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ( ಮಾರ್ಕ್ ಸಮ್ ) , ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮೇ 31 ಮತ್ತು ಜೂನ್ 1ರಂದು ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಮುಸ್ಲಿಮ್ ಸಮಾವೇಶ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕದ ಮುಸ್ಲಿಮರ ನೋವು ನಲಿವಿನ ಅನಾವರಣದ ಉದ್ದೇಶ ಎಂಬ ಪ್ರಸ್ತಾಪದೊಂದಿಗೆ, ಈ ಸಮಾವೇಶದ ಉದ್ದೇಶ ಜಾತ್ಯಾತೀತತೆ, ಸಬಲೀಕರಣ ಮುನ್ನಡೆ ಎಂಬ ಗುರಿಯಾಗಿದೆ ಎಂದು ಸಂಘಟನೆಯ ಉದ್ದೇಶ ಎಂದು ತಿಳಿಸಲಾಗಿದೆ.
ಸಮಾವೇಶದ ಪೂರ್ವಾಹ್ನ ದ ಗೋಷ್ಠಿಯಲ್ಲಿ,ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಕೆ.ಟಿ.ಜಲೀಲ್ ಉದ್ಘಾಟಕರಾಗಿ, ಮುಖ್ಯ ಅತಿಥಿಗಳಾಗಿ ದಲಿತ ಸಂಘಟನೆಯ ಮಾವಳ್ಳಿ ಶಂಕರ್, ಸಾಹಿತಿ ಶ್ರೀಮತಿ ಶರೀಫ, ಕರ್ನಾಟಕ ಸಿ. ಪಿ. ಐ. ಎಂ ನ ಯು.ಬಸವರಾಜು,ದ.ಕ.ಸಿ. ಪೀ. ಐ.ಎಂ ನ ಕೆ. ಯಾದವ ಶೆಟ್ಟಿ.ಹಾಗೂ ಸಭಾಧ್ಯಕ್ಷ ರಾಗಿ ಕರ್ನಾಟಕ ಸಿ. ಪೀ. ಐ.ಎಂ ನ ಸೈಯದ್ ಮುಜೀಬ್,ಮತ್ತು ಪ್ರಾಸ್ತಾವಿಕ ಭಾಷಣ ಕಾರರಾಗಿ ಕರ್ನಾಟಕ ಸಿ.ಪೀ.ಐ.ಎಂ ನ ಮುನೀರ್ ಕಾಟಿಪಳ್ಳ ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ಗೋಷ್ಠಿಯಲ್ಲಿ,ಕೋಮುವಾದದ ಪ್ರಯೋಗ ಶಾಲೆಯಾಗಿ ಕರ್ನಾಟಕ ಎಂಬ ವಿಷಯದಲ್ಲಿ ಹಂಪಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಚಂದ್ರಪೂಜಾರಿ,ಬೆಂಗಳೂರು ರಾಜಕೀಯ ವಿಶ್ಲೇಷಕರಾದ ಡಾ. ಕೆ. ಸತೀಶ್, ಅಧ್ಯಕ್ಷತೆಯಾಗಿ ಮುನೀರ್ ಕಾಟಿಪಳ್ಳ, ನಿರ್ವಹಣೆ ಆಗಿ ಸುನಿಲ್ ಕುಮಾರ್ ಬಜಾಲ್ ಭಾಗವಹಿಸಲಿದ್ದಾರೆ.
ಸಂಜೆ ಗೋಷ್ಠಿಯಲ್ಲಿ ಕರ್ನಾಟಕದ ಮುಸ್ಲಿಮರ ಸ್ಥಿತಿಗತಿ ಎಂಬ ವಿಷಯದಲ್ಲಿ, ಹಿರಿಯ ಪತ್ರಕರ್ತರಾದ ಶ್ರೀ. ಬೀ.ಎಂ . ಹನೀಫ್, ಹೊಸಪೇಟೆ, ಚಿಂತಕರು ಸಾಹಿತಿ ಬರಹಗಾರರು ಆದ ಬೀ.ಪೀರ್ ಪಾಷಾ, ಅಧ್ಯಕ್ಷತೆಯಾಗಿ ಗುಲ್ಬರ್ಗಾ ಹೋರಾಟಗಾರರಾದ ಶ್ರೀಮತಿ ಕೆ.ನೀಲಾ, ನಿರ್ವಹಣೆ ಯಾಗಿ ಡಾ. ಜೀವನ್ ಕುತ್ತಾರ್ ಬಾಗವಹಿಸಲಿದ್ದಾರೆ.
ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ದಫ್, ಮಾಪಿಳ್ಳೆ ಪಾಟ್, ಕವ್ವಾಲಿ ಜರುಗಲಿದೆ. ಮತ್ತು ಜೂನ್ 01 ರಂದು ಆಂತರಿಕ ಕಲಾಪ ಜರುಗಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಮತ್ತು ರಾಜ್ಯ ಸಮಿತಿಯ ಮುನೀರ್ ಕಾಟಿಪಳ್ಳ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ವ್ಯತ್ಯಸ್ಥ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಮುಸ್ಲಿಮ್ ಸಮಾವೇಶ ಆಯೋಜನೆಯು ವಿಶಿಷ್ಟತೆ ಪಡೆಯಲಿದೆ ಎಂದು ಸಂಘಟಕರು ಅಭಿಪ್ರಾಯ ಪಟ್ಟಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ