ಮಂಗಳೂರು: ಮುಸ್ಲಿಮರು ಕಲ್ಲು ತೂರುವ ಸಂಸ್ಕೃತಿಯ ವರು,ಅವರ ಮನಸ್ಥಿತಿ ಬದಲಾಗೇಕಿದೆ,ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಆದದ್ದು, ದುಷ್ಕರ್ಮಿ ಯುವಕನ, ಮುಸ್ಲಿಮ್ ಧರ್ಮದ ಆರಾಧನಾ ಕೇಂದ್ರದ ಮೇಲಿನ ದ್ವಜ ಸ್ಥಾಪನೆ ಎಂಬ ನಿಂದನಾತ್ಮಕ ಸಾಮಾಜಿಕ ಜಾಲ ತಾಣ ಪೋಸ್ಟ್ ಚಿತ್ರವಾಗಿದೆ. ಪೊಲೀಸರು ಕ್ಲಪ್ತ ಸಮಯಕ್ಕೆ ಕ್ರಮ ಕೈಗೊಂಡಿದ್ದರೆ, ಹುಬ್ಬಳಿ ಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ.ಆದರೆ,ಹುಬ್ಬಳಿಯ ಕೇಶವ ಕುಂಜ ಅಣತಿಯಂತೆ, ಯೋಜನೆ ಬೇರೆಯೇ ತಯಾರಾಗಿದ್ದು, ಅಲ್ಲಿನ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಏನು ಗೊತ್ತು.
ಅಂದು ಗುಂಪಿನಲ್ಲಿ ಸೇರಿಕೊಂಡ ಸಂಘ ಪ್ರೇರಿತ ಹಿಂದುಳಿದ ವರ್ಗದ ಪುಂಡ ಹುಡುಗರು ಘಟನಾ ಸ್ಥಳದಲ್ಲಿ ಪೂರ್ವ ಯೋಜಿತ ರೀತಿಯಲ್ಲಿಯೇ ಕಲ್ಲು ಬಿಸಾಡಿದ್ದನ್ನು, ಇಂದು ತನಿಖೆ ನಡೆಯುತ್ತಿದೆ. ನೈಜ ಕೃತ್ಯ ಬಹಿರಂಗವಾಗಲಿ. ಪ್ರತಾಪ್ ಸಿಂಹ ಏನೋ ತುರ್ತು ಸ್ಥಿಯಲ್ಲಿದ್ದಾರೆ. ಬಹುಷ ಮೈಸೂರಿನ ಮಾಧವ ಕೃಪಾ ಅಣತಿ ಬಂದಿರಬೇಕು. ಪ್ರತಾಪ್ ಸಿಂಹ ಕೃಪಾ ಪ್ರೇರಿತ ಹೇಳಿಕೆ ನೀಡಿ ಮುಸ್ಲಿಮರ ಚಿಂತನೆಯನ್ನು ಬದಲಿಸಲು ಹೊರಟಿದ್ದಾರೆ.
ಸಿಂಹ ತಿಳಿಯಲಿ, ಈ ದೇಶದ ಮುಸ್ಲಿಮರು ಚಿಂತಿಸಿಯೇ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವವನ್ನು ಬಲಿ ನೀಡಿದ್ದಾರೆ. ಅಗತ್ಯ ಬಿದ್ದರೆ ಈ ದೇಶದ ಸಂವಿಧಾನದ ಉಳಿವಿಗೆ ಕೂಡಾ ಜೀವ ಬಲಿ ನೀಡಲು ಸಿದ್ಧರಿದ್ದಾರೆ. ಡಾ. ಬೀ.ಆರ್.ಅಂಬೇಡ್ಕರ್,ಮಹಾತ್ಮಾ ಗಾಂಧಿ, ಮೌಲಾನ ಅಬುಲ್ ಕಲಾಂ ಅಜಾದ್, ಬಸವಣ್ಣ, ಕೆಂಪೇಗೌಡ, ಹಜ್ರತ್ ಟಿಪ್ಪು ಸುಲ್ತಾನ್, ಕುವೆಂಪು, ದೊರೆಸ್ವಾಮಿ, ದೇವರಾಜ ಅರಸ್, ಸ್ವಾಮಿ ವಿವೇಕಾನಂದರು, ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮುಂತಾದ ಸಾಮಾಜಿಕ ಸುಧಾರಕರು ಹಾಕಿ ಕೊಟ್ಟ ನೈತಿಕ ಪ್ರತಿಪಾದನೆ ಯಿಂದ ಈ ದೇಶದ ಮುಸ್ಲಿಮರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನರು ಅನಾದಿ ಕಾಲದಿಂದ ತಮ್ಮ ಮನಸ್ಥಿತಿಯನ್ನು ಪಾಲನೆ ಮಾಡಿ ಸೌಹಾರ್ದ ಪರಂಪರೆ ಮೆರೆದಿದ್ದಾರೆ. ಮುಸ್ಲೀಮರ ಚಿಂತನಾ ಲಹರಿ ಸಮರ್ಪಕವಾಗಿ ಯೇ ಇದೆ. ಬದಲಾಗ ಬೇಕಾದುದು ಪ್ರತಾಪ್ ಸಿಂಹ ರಂತಹ, ಮಾಧವಾ ಕೃಪಾ ಲಿಖಿತ ಹೇಳಿಕೆ ನೀಡುವ ವ್ಯಕ್ತಿಗಳದ್ದು ಎಂದು ಆರಿಯಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ