ಶಿರಿಯ, ಮಾ. 24: ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರೂ ಖಾಝಿಯೂ ಹಾಗೂ ಹಲವಾರು ಘಟಾನುಘಟಿ ವಿದ್ವಾಂಸರ ಗುರು ಶ್ರೇಷ್ಠರು ಮತ್ತು ಸೂಫಿವರ್ಯರೂ ಆಗಿದ್ದ ತಾಜುಶ್ಶರೀಅ ಅಲಿಕುಂಞಿ ಉಸ್ತಾದ್ ಮಖಾಂ ಉರೂಸಿಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಒಳಯಂ,ಮುಟ್ಟಂ, ಶಿರಿಯ, ತಾಜುಶ್ಶರೀಅ ಮಖಾಮುಗಳ ಝಿಯಾರತಿಗೆ ಸಯ್ಯಿದ್ ಅಬ್ದುಸ್ಸಲಾಂ ಅಮಾನಿ ಆದೂರು, ಸಯ್ಯಿದ್ ನುಅಮಾನ್ ಅಸ್ಸಖಾಫಿ, ಸಯ್ಯಿದ್ ಶರಫುದ್ದೀನ್ ಅಹ್ಸನಿ, ಸಾದಾತ್ ತಂಞಳ್ ಗುರುವಾಯನಕೆರೆ ನೇತೃತ್ವ ನೀಡಿದರು.ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಧ್ವಜಾರೋಹಣ ನೆರವೇರಿಸಿದರು. ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆಯವರ ಅಧ್ಯಕ್ಷತೆಯಲ್ಲಿ, ಸಮಸ್ತ ಉಪಾಧ್ಯಕ್ಷರು ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ, ಸಯ್ಯಿದ್ ಸೀದಿಕೋಯ ತಂಙಳ್ ಎರ್ನಾಕುಲಂ, ಕಾಟ್ಟಿಪ್ಪಾರ ಅಬ್ದುಲ್ ಖಾದಿರ್ ಸಅದಿ, ಸ್ವಾಲಿಹ್ ಸಅದಿ ತಳಿಪ್ಪರಂಬ್, ಬಿ.ಎಸ್ ಅಬ್ದುಲ್ಲಾ ಕುಂಞಿ ಫೈಝಿ, ಸಯ್ಯಿದ್ ಅಬ್ದುಸ್ಸಲಾಂ ಅಮಾನಿ ಆದೂರು, ಹುಸೈನ್ ಸಅದಿ ಕೆ ಸಿ ರೋಡ್, ಸಯ್ಯಿದ್ ಅಲವಿ ತಂಙಳ್ ಕರ್ಕಿ, ಅಬ್ದುಲ್ ಮಜೀದ್ ಫೈಝಿ ಚೆರ್ಕಳ, ಝಕರಿಯಾ ಫೈಝಿ ಮಜೀರ್ಪಳ್ಳ, ರಫೀಖ್ ಸಅದಿ ದೇಲಂಪಾಡಿ, ಇಬ್ರಾಹಿಂ ಫೈಝಿ ಉದ್ಯಾವರ, ಸಯ್ಯಿದ್ ಜಅಫರ್ ನುಅಮಾನ್ ಅಸ್ಸಖಾಫಿ, ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು, ಅಬ್ದುಲ್ ಖಾದಿರ್ ಸಖಾಫಿ ಅಲ್-ಮದೀನ, ಮುಹಮ್ಮದ್ ಕುಂಞಿ ಅಮ್ಜದಿ ಅಲ್-ಮದೀನ, ಅಬ್ಬಾಸ್ ಓಣಂದ, ಅಬ್ದುರ್ರಹ್ಮಾನ್ ನಿಝಾಮಿ, ಮಹ್ಮೂದ್ ಹಾಜಿ, ಕರೀಂ ಪೊಯ್ಯತ್ತಬೈಲ್ ಉಪಸ್ಥಿತರಿದ್ದರು.ಡಾ: ಫಾರೂಖ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಿದರು. ನಂತರ ಬೃಹತ್ ಬುರ್ದಾ ಮಜ್ಲಿಸ್ ನಡೆಯಿತು.

ನಂತರದ ದಿನಗಳಲ್ಲಿ, ಕೀಚೇರಿ ಅಬ್ದುಲ್ ಗಫೂರ್ ಮೌಲವಿ, ಅನಸ್ ಅಮಾನಿ ಪುಷ್ಪಗಿರಿ ಪ್ರಭಾಷಣಗೈಯ್ಯಲಿದ್ದಾರೆ.
26 ರಂದು ಸಂಜೆ 7 ಗಂಟೆಗೆ ಸಮಾರೋಪ ಮಹಾ ಸಮ್ಮೇಳನವನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ಸಹಸ್ರ ಮಂದಿಗೆ ಅನ್ನದಾನ ನೀಡುವುದರೊಂದಿಗೆ 27ಕ್ಕೆ ಉರೂಸ್ ಮುಕ್ತಾಯವಾಗಲಿರುವುದು.







