janadhvani

Kannada Online News Paper

ಅಬ್ದುಲ್ ರಹ್ಮಾನ್ ರ ಮೃತ ದೇಹ ತಾಯ್ನಾಡಿಗೆ ತಲುಪಿಸಲು ಅನಿವಾಸಿ ಕನ್ನಡಿಗರ ಒಕ್ಕೂಟ ನೆರವು

ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿಯಾದ ಅಬ್ದುಲ್ ರಹ್ಮಾನ್ ರವರು ಬ್ರೈನ್ ಸ್ಟ್ರೋಕ್ ನಿಂದ ಅಕ್ಟೋಬರ್ ಏಳರಂದು ದುಬೈ ಜಬಲ್ಅಲಿಯ ಎನ್. ಎಮ್. ಸಿ. ರೋಯಲ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ಅನಿವಾಸಿ ಕನ್ನಡಿಗರ ಒಕ್ಕೂಟ ಯು.ಎ.ಇ ಇದರ ಶಫಿ ಬಜ್ಪೆ,ಹಮೀದ್ ಸತ್ತಿಕಲ್, ರಿಯಾಜ್ ಜೋಕಟ್ಟೆ, ಹಾಗೂ ಇಕ್ಬಾಲ್ ಬೆಳ್ತಂಗಡಿಯವರು ಅಬ್ದುಲ್ ರಹ್ಮಾನ್ ರವರ ಮೃತದೇಹಕ್ಕೆ ಸಂಬಂಧಪಟ್ಟ ಎಲ್ಲ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ತಾಯ್ನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾದರು.