ಕೋಝಿಕ್ಕೋಡ್ | ಇಸ್ಲಾಂನಲ್ಲಿ ಲವ್ ಜಿಹಾದ್ ಅಥವಾ ಇನ್ನಾವುದೇ ಜಿಹಾದ್ ಇಲ್ಲ ಎಂದು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಮುಸ್ಲಿಂ ಸಮುದಾಯವು ಇದಕ್ಕೆ ಕರೆ ನೀಡಿಲ್ಲ ಮತ್ತು ಇನ್ನು ಮುಂದಕ್ಕೂ ನೀಡುವುದಿಲ್ಲ. ಆದ್ದರಿಂದ ಪಾಲಾ ಬಿಷಪ್ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು.
ಅದನ್ನು ಚರ್ಚಿಸಲು ಯಾರೂ ಮುಂದೆ ಬರಬಾರದು. ನಾವು ಇಲ್ಲಿ ಶಾಂತಿಯನ್ನು ಬಯಸುವವರಾಗಿದ್ದೇವೆ. ವಿಭಜಿಸಲು ಮತ್ತು ಜಗಳವಾಡಲು ಬಯಸುವುದಿಲ್ಲ. ಬಿಷಪ್ ಹೇಳಿದ್ದು ತಪ್ಪು.ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳು ವಾದ ಮಾಡಿದವರು ಅದನ್ನು ಹಿಂಪಡೆಯಬೇಕೇ ಹೊರತು ಮಧ್ಯಸ್ಥಿಕೆ ಅಗತ್ಯವಿಲ್ಲ.ಇದಕ್ಕಾಗಿ ಯಾರು ಪ್ರಯತ್ನಿಸದರೂ ಸಂತೋಷ ಎಂದರು.
ಬಲವಂತದ ಮತಾಂತರವನ್ನು ಇಸ್ಲಾಂ ಅನುಮತಿಸುವುದಿಲ್ಲ. ಲೌ ಜಿಹಾದ್ ಇಲ್ಲ ಎಂದು ಸ್ಪಷ್ಟವಾದಾಗ, ನಾರ್ಕೋಟಿಕ್ ಜಿಹಾದ್ ಎಂದು ಮರುನಾಮಕರಣ ಮಾಡಲಾಯಿತು. ಈ ಹೆಸರನ್ನು ಬಳಸುವುದರಲ್ಲಿ ಅರ್ಥವಿಲ್ಲ. ಮುಸ್ಲಿಂ ಸಮುದಾಯ ಯಾವತ್ತೂ ಭಯೋತ್ಪಾದನೆ ಅಥವಾ ಉಗ್ರವಾದವನ್ನು ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ. ನಾವು ಎಂದೆಂದಿಗೂ ಅದರ ವಿರುದ್ಧ ಧ್ವನಿ ಎತ್ತುವವರಾಗಿದ್ದೇವೆ. ತಪ್ಪು ಕೃತ್ಯಗಳಲ್ಲಿ ತೊಡಗಿಕೊಂಡವರು ಎಲ್ಲಾ ಧರ್ಮಗಳಲ್ಲೂ ಇದ್ದಾರೆ ಎಂದು ಕಾಂತಪುರಂ ಹೇಳಿದರು.
ಬಲದಿಂದ ಅಥವಾ ವಂಚನೆಯಿಂದ ಕೂಡಿದ ಮತಾಂತರವನ್ನು ಇಸ್ಲಾಂ ಕಲ್ಪಿಸಿಲ್ಲ. ಇಸ್ಲಾಂ ಧರ್ಮವನ್ನು ಬಯಸುವವರು ಸ್ವೀಕರಿಸುವರು. ಇಲ್ಲದವರು ತೊರೆಯುವರು, ಇದಾಗಿದೆ ನೀತಿ. ಒಬ್ಬನು ಇಸ್ಲಾಂಗೆ ಮತಾಂತರಗೊಳ್ಳಲು ಹೇಳುವ ಮೊದಲ ಪದಗಳನ್ನು ‘ಮನಸ್ಸಿನಲ್ಲಿ ದೃಢಪಡಿಸಿ,ನಾಲಿಗೆಯಲ್ಲಿ ಉಚ್ಚರಿಸಬೇಕು’ ಬಲತ್ಕಾರದಿಂದ ಮನಸ್ಸಿನಲ್ಲಿ ದೃಢಪಡಿಸಲು ಸಾಧ್ಯವಿಲ್ಲ ಎಂದು ಕಾಂತಪುರಂ ಹೇಳಿದರು.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ