ಕೋಝಿಕ್ಕೋಡ್ | ಇಸ್ಲಾಂನಲ್ಲಿ ಲವ್ ಜಿಹಾದ್ ಅಥವಾ ಇನ್ನಾವುದೇ ಜಿಹಾದ್ ಇಲ್ಲ ಎಂದು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಮುಸ್ಲಿಂ ಸಮುದಾಯವು ಇದಕ್ಕೆ ಕರೆ ನೀಡಿಲ್ಲ ಮತ್ತು ಇನ್ನು ಮುಂದಕ್ಕೂ ನೀಡುವುದಿಲ್ಲ. ಆದ್ದರಿಂದ ಪಾಲಾ ಬಿಷಪ್ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು.
ಅದನ್ನು ಚರ್ಚಿಸಲು ಯಾರೂ ಮುಂದೆ ಬರಬಾರದು. ನಾವು ಇಲ್ಲಿ ಶಾಂತಿಯನ್ನು ಬಯಸುವವರಾಗಿದ್ದೇವೆ. ವಿಭಜಿಸಲು ಮತ್ತು ಜಗಳವಾಡಲು ಬಯಸುವುದಿಲ್ಲ. ಬಿಷಪ್ ಹೇಳಿದ್ದು ತಪ್ಪು.ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳು ವಾದ ಮಾಡಿದವರು ಅದನ್ನು ಹಿಂಪಡೆಯಬೇಕೇ ಹೊರತು ಮಧ್ಯಸ್ಥಿಕೆ ಅಗತ್ಯವಿಲ್ಲ.ಇದಕ್ಕಾಗಿ ಯಾರು ಪ್ರಯತ್ನಿಸದರೂ ಸಂತೋಷ ಎಂದರು.
ಬಲವಂತದ ಮತಾಂತರವನ್ನು ಇಸ್ಲಾಂ ಅನುಮತಿಸುವುದಿಲ್ಲ. ಲೌ ಜಿಹಾದ್ ಇಲ್ಲ ಎಂದು ಸ್ಪಷ್ಟವಾದಾಗ, ನಾರ್ಕೋಟಿಕ್ ಜಿಹಾದ್ ಎಂದು ಮರುನಾಮಕರಣ ಮಾಡಲಾಯಿತು. ಈ ಹೆಸರನ್ನು ಬಳಸುವುದರಲ್ಲಿ ಅರ್ಥವಿಲ್ಲ. ಮುಸ್ಲಿಂ ಸಮುದಾಯ ಯಾವತ್ತೂ ಭಯೋತ್ಪಾದನೆ ಅಥವಾ ಉಗ್ರವಾದವನ್ನು ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ. ನಾವು ಎಂದೆಂದಿಗೂ ಅದರ ವಿರುದ್ಧ ಧ್ವನಿ ಎತ್ತುವವರಾಗಿದ್ದೇವೆ. ತಪ್ಪು ಕೃತ್ಯಗಳಲ್ಲಿ ತೊಡಗಿಕೊಂಡವರು ಎಲ್ಲಾ ಧರ್ಮಗಳಲ್ಲೂ ಇದ್ದಾರೆ ಎಂದು ಕಾಂತಪುರಂ ಹೇಳಿದರು.
ಬಲದಿಂದ ಅಥವಾ ವಂಚನೆಯಿಂದ ಕೂಡಿದ ಮತಾಂತರವನ್ನು ಇಸ್ಲಾಂ ಕಲ್ಪಿಸಿಲ್ಲ. ಇಸ್ಲಾಂ ಧರ್ಮವನ್ನು ಬಯಸುವವರು ಸ್ವೀಕರಿಸುವರು. ಇಲ್ಲದವರು ತೊರೆಯುವರು, ಇದಾಗಿದೆ ನೀತಿ. ಒಬ್ಬನು ಇಸ್ಲಾಂಗೆ ಮತಾಂತರಗೊಳ್ಳಲು ಹೇಳುವ ಮೊದಲ ಪದಗಳನ್ನು ‘ಮನಸ್ಸಿನಲ್ಲಿ ದೃಢಪಡಿಸಿ,ನಾಲಿಗೆಯಲ್ಲಿ ಉಚ್ಚರಿಸಬೇಕು’ ಬಲತ್ಕಾರದಿಂದ ಮನಸ್ಸಿನಲ್ಲಿ ದೃಢಪಡಿಸಲು ಸಾಧ್ಯವಿಲ್ಲ ಎಂದು ಕಾಂತಪುರಂ ಹೇಳಿದರು.
















ಇನ್ನಷ್ಟು ಸುದ್ದಿಗಳು
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ
ದೆಹಲಿಯಲ್ಲಿ ನವಜಾತ ಶಿಶುಗಳನ್ನು ಮಾರುವ ‘ಮಕ್ಕಳ’ ಮಾರುಕಟ್ಟೆ: ಬೃಹತ್ ಮಾಫಿಯಾ ಪತ್ತೆ
ಸಚಿವ ಸಂಪುಟ ವಿಸ್ತರಣೆ: ಅಹಿಂದ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯ- ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ತೀವ್ರ ಆಕ್ಷೇಪ
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್