janadhvani

Kannada Online News Paper

ಸ್ವಚ್ಛತಾ ಕಾರ್ಯಕ್ಕೆ ಬೀದಿಗಿಳಿದ ತಲಪಾಡಿ ಎಸ್ಡಿಪಿಐ

ತಲಪಾಡಿ ಗ್ರಾಮದ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಇಲ್ಲಿಯ ಎಸ್ಡಿಪಿಐ ಮಾದರಿಯಾಗಿದೆ. ಸ್ವಚ್ಛ ಗ್ರಾಮ ಅಭಿಯಾನಕ್ಕೆ ಕೈ ಜೋಡಿಸಿದ ಎಸ್ಡಿಪಿಐ ಕಾರ್ಯಪಡೆ ಬೀದಿಗಿಳಿದು ಪ್ಲಾಸ್ಟಿಕ್, ಕಸ, ತ್ಯಾಜ್ಯಗಳನ್ನು ಹೆಕ್ಕಿ ಈ ಮೂಲಕ ಗ್ರಾಮಸ್ಥರ ಗಮನ ಸೆಳೆದರು.

ಆಂತರಿಕ ಸ್ವಚ್ಛತೆ ನಮಗೆ ಎಷ್ಟು ಮುಖ್ಯವೋ
ಅಷ್ಟೇ ಸ್ವಚ್ಛತೆಯನ್ನು ನಮ್ಮ ಹೊರಗಿನ ಪರಿಸರಕ್ಕೆ ನೀಡಿದರೆ ಬಹು ಪಾಲು ರೋಗಗಳಿಂದ ನಾವು ಮುಕ್ತರಾಗಬಹುದು. ಕಸ, ತ್ಯಾಜ್ಯ ನಮ್ಮ ಸುತ್ತ ಮುತ್ತ ಕಂಡಾಗ ಅದನ್ನು ತೆರವುಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.

ಗ್ರಾಮದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದ ಎಸ್ಡಿಪಿಐಗೆ ತಲಪಾಡಿ ಗ್ರಾಮವನ್ನು ಸುಂದರ ಗ್ರಾಮವನ್ನಾಗಿ ಕಟ್ಟಲು ಗ್ರಾಮಸ್ಥರು ಕೈ ಜೋಡಿಸುವಂತೆ ವಿನಂತಿಸಲಾಯಿತು.

✍️ಮುಹಮ್ಮದ್ ಉಳ್ಳಾಲ್

error: Content is protected !! Not allowed copy content from janadhvani.com