janadhvani

Kannada Online News Paper

ಮಲ್ಲೂರು: ಮುಹಮ್ಮದ್ ಶಫೀಲ್ ಗೆ ಸನ್ಮಾನ

SSF ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಜರುಗಿದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಮಲ್ಲೂರು ಬದ್ರಿಯಾನಗರದ ಮಜ್ಲಿಸ್ ಗಾಣೆಮಾರ್ ವಿದ್ಯಾರ್ಥಿ *ಮುಹಮ್ಮದ್ ಶಫೀಲ್* ರನ್ನು ಸ್ಪಾಟ್ ನ್ಯೂಸ್ ಗ್ರೂಫ್ ಮಲ್ಲೂರು ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬದ್ರಿಯಾ ನಗರ ಜುಮ್ಮಾ ಮಸ್ಜಿದ್ ಉಪಾಧ್ಯಕ್ಷ ಮುಹಮ್ಮದ್ ಉದ್ದಬೆಟ್ಟು, ಪ್ರಧಾನ ಕಾರ್ಯದರ್ಶಿ ಎಂ ಕೆ ಲತೀಫ್ ಬದ್ರಿಯಾನಗರ, ಉದ್ದಬೆಟ್ಟು ಜುಮ್ಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಉಮ್ಮರುಲ್ ಫಾರೂಕ್ ಬೊಲ್ಲಂಕಿಣಿ, ಅಶ್ರಫ್ ಬದ್ರಿಯಾನಗರ, ಎಂ ಟಿ ಕರೀಂ ಮಲ್ಲೂರು, ಶಾಹೀದ್ ಉದ್ದಬೆಟ್ಟು, ಜಬ್ಬಾರ್ ಮಲ್ಲೂರು, ಅಲ್ತಾಫ್ ದೆಮ್ಮಲೆ, ಮಜೀದ್ ಬದ್ರಿಯಾನಗರ ಉಪಸ್ಥಿತರಿದ್ದರು.