ಸುಳ್ಯ : ಎಸ್.ಎಸ್.ಎಫ್ ಮಂಡೆಕೋಲು ಶಾಖಾ ವತಿಯಿಂದ ಆ.14ರಂದು ಶ್ರಮದಾನ ನಡೆಸಲಾಯಿತು.
ಮಳೆಯಿಂದಾಗಿ ರಸ್ತೆ ಮಧ್ಯೆಯಲ್ಲುಂಟಾದ ಹೊಂಡಗಳನ್ನು ಮುಚ್ಚಿ, ರಸ್ತೆಯಲ್ಲಿ ನೀರು ನಿಲ್ಲದಂತೆ ಪರ್ಯಾಯ ವ್ಯವಸ್ಥೆಯನ್ನು ನಿರ್ಮಿಸಿದರು. ರಸ್ತೆ ಬದಿಯಿರುವ ಕಾಡುಗಳನ್ನು ಕಡಿದು, ನಿರ್ಭೀತಿಯಿಂದ ನಡೆದಾಡಲು ಅನುವು ಮಾಡಿಕೊಟ್ಟರು.
ಎಸ್.ಎಸ್.ಎಫ್ ಕಾರ್ಯಕರ್ತರು ಹಾಗೂ ಊರಿನವರು ಶ್ರಮದಾನಕ್ಕೆ ಕೈ ಜೋಡಿಸಿದರು.
ಈ ವೇಳೆ ಎಸ್.ಎಸ್.ಎಫ್ ಯುನಿಟ್ ಅಧ್ಯಕ್ಷರು ಹಾಗು ಸದಸ್ಯರುಗಳು ಹಾಜರಿದ್ದರು.






