ಮಂಗಳೂರು: ಲಾಕ್ಡೌನ್ನಿಂದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದಲ್ಲಿರುವ ಕಠಿಣ ಸನ್ನಿವೇಶದಲ್ಲಿ ಸರ್ಕಾರ ಜನರ ನೆರವಿಗೆ ಧಾವಿಸಿದರೂ ಗ್ರಾಹಕಸ್ನೇಹಿ ಆಗಬೇಕಿದ್ದ ಮೆಸ್ಕಾಂ ಜನರಿಗೆ ವಿದ್ಯುತ್ ಬಿಲ್ ನೆಪದಲ್ಲಿ ಬರೆ ಹಾಕುತ್ತಿದೆ’ ಎಂದು ಹಲವಾರು ಗ್ರಾಹಕರು ದೂರಿದ್ದಾರೆ.
ವಿದ್ಯುತ್ ಬಿಲ್ ಅನ್ನು ಒಂದು ತಿಂಗಳು ಪಾವತಿಸದಿದ್ದರೂ ದಂಡ ವಿಧಿಸದಂತೆ ಸೂಚಿಸಿ, ವಿನಾಯಿತಿ ನೀಡಿದೆ. ಆದರೆ, ಗ್ರಾಹಕರಿಗೆ ಈಗ ಎರಡು ತಿಂಗಳ ಬಿಲ್ ನೀಡುವ ಜತೆಗೆ ವಿಪರೀತ ಬಳಕೆಯ ಲೆಕ್ಕಹಾಕಿ, ಮಾಮೂಲಿಗಿಂತ ಮೂರ್ನಾಲ್ಕು ಪಟ್ಟು ಬಿಲ್ ನೀಡುತ್ತಿರುವುದು ತಲೆನೋವು ತಂದಿದೆ.

‘ಮೆಸ್ಕಾಂ ಎಲ್ಲೆಡೆ ಡಿಜಿಟಲ್ ಮೀಟರ್ ಅಳವಡಿಸಿದ್ದು, ಇದರಲ್ಲಿ ಲೆಕ್ಕಾಚಾರ ತಪ್ಪುವಂತೆ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಯಾರು ಎಷ್ಟು ವಿದ್ಯುತ್ ಬಳಸಬೇಕು ಎಂದು ಕಂಪನಿ ನಿಗದಿ ಮಾಡಲು ಅವಕಾಶವಿಲ್ಲ. ಹಾಗಿದ್ದರೂ ಹೆಚ್ಚುವರಿ ಬಿಲ್ ನೀಡಿದರೆ ಜನಸಾಮಾನ್ಯರು ಯಾರನ್ನು ಕೇಳಬೇಕು? ಈ ಪ್ರಶ್ನೆಗಳಿಗೆ ಮೆಸ್ಕಾಂ ಕಚೇರಿಯಲ್ಲೇ ಉತ್ತರವಿಲ್ಲ’ ಎನ್ನುವುದು ಗ್ರಾಹಕರ ದೂರು.
‘ಹಲವರು ಈಗಾಗಲೇ ಬಿಲ್ನಷ್ಟೇ ಹಣ ಪಾವತಿಸಿದ್ದಾರೆ. ಈ ಬಗ್ಗೆ ಅವರು ಯಾರನ್ನೂ ವಿಚಾರಿಸಲು ಇಲ್ಲ. ತಿಂಗಳ ಬಿಲ್ 200 ರಿಂದ 300 ಬರುತ್ತಿದ್ದವರಿಗೆ ಸಾವಿರಾರು ರೂಪಾಯಿ ಬಂದರೆ ಹೇಗೆ? ಇದು ಕಂಪನಿಗೆ ಲಾಭ ಮಾಡಿಕೊಳ್ಳುವ ಸಮಯವೇ? ಬಳಕೆದಾರರ ಸಂಕಷ್ಟಕ್ಕೆ ಸ್ಪಂದಿಸಿ ನೆರವು ನೀಡಬೇಕಾದ ಸಂಸ್ಥೆ ಗ್ರಾಹಕರ ಅರಿವಿಗೆ ಬಾರದೆ ಹೆಚ್ಚುವರಿ ಮೊತ್ತ ವಸೂಲು ಮಾಡಲು ಮುಂದಾದರೆ ಇದು ಮೋಸವಲ್ಲದೆ ಮತ್ತೇನು?’ ಎನ್ನುವುದು ಗ್ರಾಹಕರ ಅಭಿಪ್ರಾಯ.
‘ನಮ್ಮ ಮನೆಯಲ್ಲಿ ಮೀಟರ್ ಬೋರ್ಡ್ ಹೊರಭಾಗದಲ್ಲಿಯೇ ಇದೆ. ಹೆಚ್ಚುವರಿ ಬಿಲ್ ಬಂದ ಸಂದರ್ಭದಲ್ಲಿ ಕಚೇರಿಗೆ ಹೋಗಿ ಪಟ್ಟಿ ತೆಗೆಸಿದರೆ ಹಲವು ಬಾರಿ ಮನೆಬಾಗಿಲು ಹಾಕಿದೆ ಎಂದು ತೋರಿಸಲಾಗಿದೆ. ತಿಂಗಳುಗಟ್ಟಲೆ ಮನೆ ಬಿಟ್ಟು ಎಲ್ಲಿ ಹೋಗುವುದು? ನಾವು ಪ್ರತಿ ತಿಂಗಳೂ ಬಿಲ್ ಪಾವತಿಸಿದ್ದೇವೆ. ಆದರೆ ₹ 3ಸಾವಿರ ಬಾಕಿ ಇರುವಂತೆ ಬಿಲ್ನಲ್ಲಿ ಕಾಣಿಸಲಾಗಿದೆ. ಹೀಗಾದರೆ ಜನಸಾಮಾನ್ಯರು ಬದುಕುವುದು ಹೇಗೆ?’ ಎನ್ನುವುದು ಇನ್ನೋರ್ವ ಗ್ರಾಹಕರ ಪ್ರಶ್ನೆ.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್