ಕುವೈತ್ ಸಿಟಿ: ವಿಮಾನ ಸೇವೆಗಳನ್ನು ರದ್ದುಗೊಳಿಸಿದ ಕಾರಣಕ್ಕಾಗಿ ಊರಲ್ಲೇ ಉಳಿದುಕೊಂಡ ವಿದೇಶಿ ಪ್ರಜೆಗಳಿಗೆ ಇಖಾಮಾ, ವರ್ಕ್ ಪರ್ಮಿಟ್ ನವೀಕರಣಕ್ಕಾಗಿ ಸೌಕರ್ಯವನ್ನು ಕುವೈತ್ ಆಂತರಿಕ ಸಚಿವಾಲಯ ಏರ್ಪಡಿಸಿದೆ.
ವಸತಿ ಇಲಾಖೆಯ ಉಪಕಾರ್ಯದರ್ಶಿ ತಲಾಲ್ ಅಲ್ ಮಅ್ರಫಿ ಈ ಬಗ್ಗೆ ಮಾತನಾಡಿ, ಖಾಸಗಿ ವಲಯದ ಕಾರ್ಮಿಕರು ಮತ್ತು ಗೃಹ ಕಾರ್ಮಿಕರ ಇಖಾಮಾವನ್ನು ಅವರು ದೇಶದಲ್ಲಿಲ್ಲದ ಹೊರತಾಗಿಯೂ ನವೀಕರಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಭಾರತ ಸೇರಿದಂತೆ ವೈಮಾನಿಕ ಯಾತ್ರಾ ನಿರ್ಬಂಧ ಹೇರಲಾದ ದೇಶಗಳ ನಾಗರಿಕರಿಗೆ ಗೃಹ ಇಲಾಖೆ ವಿನಾಯಿತಿ ನೀಡಿದೆ. ಪ್ರಯಾಣದ ತೊಂದರೆಯಿಂದಾಗಿ ಕುವೈತ್ ತಲುಪಲು ಸಾಧ್ಯವಾಗದ ಕಾರ್ಮಿಕರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಪ್ರಾಯೋಜಕರು ಅಥವಾ ಪ್ರತಿನಿಧಿ ನಿವಾಸ ಇಲಾಖೆಗೆ ತೆರಳಿ ಅವರ ಇಖಾಮಾ ನವೀಕರಿಬಹುದಾಗಿದೆ. ಮಾನವಶಕ್ತಿ ಪ್ರಾಧಿಕಾರದಿಂದ ಕೆಲಸದ ಪರವಾನಗಿಯನ್ನು ನವೀಕರಿಸಿದ ನಂತರ ಇಖಾಮಾ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು.
ಪ್ರಾಯೋಜಕರು ಗೃಹ ಕಾರ್ಮಿಕರ ಇಖಾಮಾ ಮತ್ತು ಅವಲಂಬಿತ ವೀಸಾಗಳಲ್ಲಿರುವವರ ಇಖಾಮಾವನ್ನು ನವೀಕರಿಸಬಹುದು. ಅವಲಂಬಿತ ವೀಸಾದ ಪ್ರಾಯೋಜಕರು ವಿದೇಶದಲ್ಲಿದ್ದರೆ ಕುಟುಂಬ ಸದಸ್ಯರಿಗೆ ತಾತ್ಕಾಲಿಕ ವೀಸಾ ನೀಡಲಾಗುವುದು. ಇದಲ್ಲದೆ, ವೀಸಾ ಅವಧಿ ಮುಗಿದ ನಂತರ ದೇಶಕ್ಕೆ ಬಂದವರಿಗೆ ವೀಸಾವನ್ನು 2 ತಿಂಗಳವರೆಗೆ ವಿಸ್ತರಿಸಲಾಗುವುದು.
ಆರು ತಿಂಗಳಿಗಿಂತ ಹೆಚ್ಚು ಕಾಲ ಊರಲ್ಲಿ ಉಳಿದುಕೊಂಡ ಕಾರಣಕ್ಕಾಗಿ ಇಖಾಮಾ ಅಮಾನ್ಯವಾಗುವ ಪರಿಸ್ಥಿತಿಯನ್ನು ತಪ್ಪಿಸಲು ಕಂಪನಿಯ ಪ್ರತಿನಿಧಿಯ ಮೂಲಕ ಮೂರು ತಿಂಗಳ ವಿನಾಯಿತಿಗಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಗೃಹ ವ್ಯವಹಾರ ಇಲಾಖೆ ಕಾರ್ಮಿಕರಿಗೆ ಒದಗಿಸಿದೆ.















ಇನ್ನಷ್ಟು ಸುದ್ದಿಗಳು
ಅಬ್ದುಲ್ ರಹೀಮ್ ಬಿಡುಗಡೆ ಆದೇಶಕ್ಕೆ ಸಹಿ – 20 ವರ್ಷಗಳ ಸೆರೆಮನೆ ವಾಸಕ್ಕೆ ಕೊನೆಗೂ ಮುಕ್ತಿ
ಬಕ್ರೀದ್ ‘ಈದ್ ಅಲ್-ಅದ್ಹಾ’ ; 382 ಕೈದಿಗಳ ಬಿಡುಗಡೆ- ಒಮಾನ್ ದೊರೆ ಆದೇಶ
ಈದುಲ್ ಅದ್’ಹಾ ಮುಬಾರಕ್ – ಯುಎಇ ಯಲ್ಲಿ 2700 ಕ್ಕೂ ಹೆಚ್ಚು ಖೈದಿಗಳಿಗೆ ಬಿಡುಗಡೆ ಭಾಗ್ಯ
‘ಲಬ್ಬೈಕ್ ಅಲ್ಲಾಹುಮ್ಮ ಲಬ್ಬೈಕ್’ ಪುಣ್ಯ ಭೂಮಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಯಾತ್ರಿಕರ ಸಮಾಗಮ- ಇಂದು ‘ಅರಫಾತ್ ಸಂಗಮ’
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು : ಎಸ್ಸೆಸ್ಸೆಫ್ ಬೆಂಗಳೂರು
ಕಾನೂನುಬದ್ಧ ಬಲಿದಾನಕ್ಕೆ ಪೊಲೀಸ್ ಸಂರಕ್ಷಣೆ ನೀಡಿ- ಗೃಹ ಸಚಿವರಿಗೆ ಮೌಲಾನಾ ಶಾಫಿ ಸಅದಿ ಮನವಿ
‘ನನ್ನನ್ನು ತಿಹಾರ್ ಜೈಲಿಗೆ ಹಾಕಬಹುದು’; ಆತಂಕ ಹಂಚಿಕೊಂಡ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಶಾಫಿ ಸಅದಿ ಅವರಿಂದ ಸಚಿವರಿಗೆ ಮನವಿ
ಉಪ್ಪಿನಂಗಡಿ: ಕಂಪ್ಯೂಟರ್ ಕ್ಲಾಸ್ಗೆ ತೆರಳಿದ್ದ 13 ವರ್ಷದ ಬಾಲಕ ನಾಪತ್ತೆ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್