ರುಯಾದ್: ಕೊವಿಡ್-19 (ಕರೋನಾ) ರೋಗ ಭೀತಿಯ ಹಿನ್ನೆಲೆಯಲ್ಲಿ ಉಮ್ರಾ ಮತ್ತು ಮದೀನಾ ಝಿಯಾರತ್ ಅನ್ನು ತಾತ್ಕಾಲಿಕವಾಗಿ ತಡೆಯುವ ವಿಧಾನವು ಷರಿಯತ್ ಕಾನೂನಿನ ಅನುಸಾರವಾಗಿದೆ ಎಂದು ಮಕ್ಕಾದ ಹರಮ್ನಲ್ಲಿ ಕುತುಬಾ ಪ್ರವಚನ ಮತ್ತು ಜುಮುಅ ನಮಾಝಿಗೆ ನೇತೃತ್ವ ವಹಿಸಿದ್ದ ಇಮಾಮ್ ಶೈಖ್ ಅಬ್ದುಲ್ಲಾ ಅಲ್-ಜುಹಾನಿ ಹೇಳಿದ್ದಾರೆ.
ಜನರ ಪ್ರಾಣ ಉಳಿಸುವುದು ಶರಿಯತ್ ಕಾನೂನಿನ ಭಾಗವಾಗಿದೆ. ಆ ಆಧಾರದ ಮೇಲೆ, ನಿರ್ಬಂಧಗಳನ್ನು ಒಳಗೊಂಡಂತೆ ಕೆಲವು ಕಾರ್ಯವಿಧಾನಗಳನ್ನು ಹರಮ್ಗಳ ಮೇಲೆ ವಿಧಿಸಲಾಗಿದೆ. ಕೋವಿಡ್ 19 ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ, ಆರೋಗ್ಯ ನಿರ್ವಹಣೆಯೊಂದಿಗೆ ಸೃಷ್ಟಿಕರ್ತನಾದ ಅಲ್ಲಾಹನೊಡನೆ ಪ್ರಾರ್ಥಿಸಬೇಕು ಎಂದು ಇಮಾಮ್ ತನ್ನ ಪ್ರವಚನದಲ್ಲಿ ಹೇಳಿದರು.
ಮದೀನಾದ ಇಮಾಮ್ ಶೈಖ್ ಡಾ. ಸಲಾಹುಲ್ ಬುದೈರ್ ತಮ್ಮ ಖುತ್ಬಾ ಭಾಷಣದಲ್ಲಿ, ಅಲ್ಲಾಹನ ಪರೀಕ್ಷಣೆಯ ಭಾಗವಾಗಿದೆ ಕೋವಿಡ್ -19 ಎನ್ನುವ ವೈರಸ್. ಇಂತಹ ಕೆಲವು ತೀರ್ಮಾನಗಳನ್ನು ಅಲ್ಲಾಹನು ಕೈಗೊಳ್ಳುತ್ತಾನೆ. ಎಲ್ಲಾ ಮನುಷ್ಯರು ಅಲ್ಲಾಹನ ಕಡೆಗೆ ಹಿಂದಿರುಗಿ ಅಲ್ಲಾಹನ ಭಯದಿಂದ ಬದುಕಬೇಕು. ವೈರಸ್ ವಿರುದ್ಧ ಪ್ರತಿರೋಧ ಒಡ್ಡುವ ಸಲುವಾಗಿ, ಉಮ್ರಾ ಮತ್ತು ಮದೀನಾ ಭೇಟಿಗಳನ್ನು ಸರಕಾರವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದರು.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ