ರಿಯಾದ್: ವಿದೇಶಿ ಕಾರ್ಮಿಕರ ಪ್ರಾಯೋಜಕತ್ವ ಬದಲಾವಣೆ ಮತ್ತು ರೀ ಎಂಟ್ರೀ- ಎಕ್ಸಿಟ್ ವೀಸಾ ಕಾರ್ಯವಿಧಾನಗಳನ್ನು ಪ್ರಾಯೋಜಕರ ಅನುಮತಿಯಿಲ್ಲದೆ ನೀಡುವ ಬಗ್ಗೆ ಸೌದಿ ಕಾರ್ಮಿಕ ಸಚಿವಾಲಯ ಚರ್ಚಿಸಿದೆ.
ಖಾಸಗಿ ವಲಯದ ಪ್ರತಿನಿಧಿಗಳು ಮತ್ತು ಉದ್ಯಮ ವಲಯದ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚಿಸಿದ ವಿಷಯಗಳ ಅನುಷ್ಠಾನದ ಕುರಿತು ಕಾರ್ಮಿಕ ಸಚಿವಾಲಯವು ವರದಿಯನ್ನು ಸಿದ್ಧಪಡಿಸಲಿದೆ.
ಕಿಂಗ್ ಅಬ್ದುಲ್ ಅಝೀಝ್ ರಾಷ್ಟ್ರೀಯ ಸಂವಾದ ಕೇಂದ್ರದಲ್ಲಿ ಮಾತುಕತೆ ನಡೆಯಿತು. ದೇಶದ ಉದ್ಯೋಗವನ್ನು ಸುಧಾರಿಸುವುದು ಚರ್ಚೆಯ ಮುಖ್ಯ ಉದ್ದೇಶವಾಗಿತ್ತು. ಅದೇ ಸಮಯದಲ್ಲಿ, ವಿದೇಶದಲ್ಲಿ ಸೌದಿಯ ಖ್ಯಾತಿಯನ್ನು ಉಳಿಸಲು ಸಹಾಯ ಮಾಡಬಲ್ಲ ಅನೇಕ ಪ್ರಸ್ತಾಪಗಳು ಚರ್ಚಿಸಲ್ಪಟ್ಟಿದೆ.
ಉದ್ಯೋಗದಾತನ ಅನುಮತಿಯಿಲ್ಲದೆ ಪ್ರಾಯೋಜಕತ್ವ ಬದಲಾವಣೆ ಎಕ್ಸಿಟ್- ರೀ ಎಂಟ್ರಿ ವೀಸಾ ಕಾರ್ಯವಿಧಾನಗಳು ಚರ್ಚಿಸಿದ ಮುಖ್ಯ ವಿಷಯಗಳಾಗಿದ್ದವು. ಉದ್ಯೋಗಿಯು ಸೌದಿಗೆ ಬಂದು ಒಂದು ವರ್ಷದ ನಂತರ ಅಥವಾ ಉದ್ಯೋಗದ ಪೂರ್ವನಿರ್ಧರಿತ ಅವಧಿಯ ನಂತರ ಹೊಸ ಉದ್ಯೋಗದಾತನ ವಿಸಾಗೆ ವರ್ಗಾವಣೆಗೊಳ್ಳಲು ಅನುಮತಿ ನೀಡುವ ಪ್ರಸ್ತಾಪದ ಬಗ್ಗೆಯೂ ಚರ್ಚೆ ನಡೆದವು.
ಅಂತೆಯೇ, ವಿದೇಶಿ ಕಾರ್ಮಿಕರು ಬಯಸಿದಾಗ ಮರು ಪ್ರವೇಶ ವೀಸಾದಲ್ಲಿ ಹೋಗಲು ಸಾಧ್ಯವಾಗಬೇಕು. ದೇಶವನ್ನು ತೊರೆದವರು ನಿಗದಿತ ಸಮಯದೊಳಗೆ ಹಿಂತಿರುಗದಿದ್ದರೆ ಐದು ವರ್ಷಗಳ ಕಾಲ ಬೇರೆ ಉದ್ಯೋಗದಾತರ ಅಡಿಯಲ್ಲಿ ಬರಲು ಅನುಮತಿಸಬಾರದು ಎಂಬದು ನಿಬಂಧನೆ ಯಾಗಬೇಕು. ವೃತ್ತಿಪರ ಪರಿಗಣನೆಯಿಲ್ಲದೆ ಎಲ್ಲರಿಗೂ ಅವಕಾಶ ನೀಡಬೇಕೆಂದು ಸೂಚಿಸಲಾಯಿತು.
ಆದರೆ ನಿರ್ಗಮನ ವೀಸಾದಲ್ಲಿ ಹೋಗುವ ವ್ಯಕ್ತಿಯು ಉದ್ಯೋಗದಾತರ ಅನುಮತಿಯನ್ನು ಪಡೆಯಬೇಕು ಎಂಬ ಅಭಿಪ್ರಾಯ ಕೇಳಿಬಂತು. ಒಪ್ಪಂದದ ಅವಧಿ ಮುಗಿಯುವ ಮೊದಲು ಎಕ್ಸಿಟ್ ನಲ್ಲಿ ಹೋದವರಿಗೆ ಹೊಸ ಉದ್ಯೋಗದಾತರ ಅಡಿಯಲ್ಲಿ ಐದು ವರ್ಷಗಳ ಕಾಲ ಮರಳುವುದು ನಿರ್ಬಂಧಿಸಬೇಕು ಎಂದು ಮಾತುಕತೆಯಲ್ಲಿ ಭಾಗವಹಿಸಿದವರು ತಿಳಿಸಿದರು.
ದೇಶದಲ್ಲಿ ನೆಲೆಸಿರುವ ಕಾರ್ಮಿಕರನ್ನು ಸಕ್ರಿಯವಾಗಿ ಉಪಯೋಗಿಸಿಕೊಳ್ಳುವುದು, ನೇಮಕಾತಿಯನ್ನು ಕಡಿಮೆ ಮಾಡುವುದು, ವಿದೇಶದಲ್ಲಿ ಸೌದಿಯ ಖ್ಯಾತಿಯನ್ನು ಹೆಚ್ಚಿಸುವುದು ಮತ್ತು ಹಕ್ಕುಗಳ ಉಲ್ಲಂಘನೆಯನ್ನು ಕಡಿಮೆ ಮಾಡುವುದು ಹೊಸ ಮಾತುಕತೆ ಮತ್ತು ಪ್ರಸ್ತಾಪಗಳ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು