janadhvani

Kannada Online News Paper

ಆದೂರು ಮಜ್ಲಿಸ್ ಶಿಫಾಅ್ ವತಿಯಿಂದ ಜಿದ್ದಾದಲ್ಲಿ ‘ಸ್ನೇಹ ತೀರಂ’

ಜಿದ್ದಾ‌ : ಆದೂರು ಮಜ್ಲಿಸ್ ಶಿಫಾಅ್ ಅಸ್ಸಖಾಫತಿಲ್ ಇಸ್ಲಾಮಿಯ್ಯ ಜಿದ್ದಾ ಘಟಕ ವತಿಯಿಂದ ಮಜ್ಲಿಸ್ ಸ್ನೇಹ ತೀರಂ ಜಿದ್ದಾದಲ್ಲಿ ನಡೆಯಿತು. ಇಂಡಿಯನ್ ಕಲ್ಚರಲ್ ಫೌಂಡೇಷನ್(I.C.F) ದಾಯಿ ಮುಸ್ತಫಾ ಸಅದಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ ಮ್ಯಾಕ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಎಂ.ಡಿ.
ಹಾಜಿ ಅಬ್ದುಲ್ ಹಮೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಜ್ಲಿಸ್ ಎಜುಪಾರ್ಕ್ ಚೇರ್ಮನ್ ಸಯ್ಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮದನಿ ಆದೂರು ಮುಖ್ಯ ಪ್ರಭಾಷಣ ನಡೆಸಿದರು.

ಕಾರ್ಯಕ್ರಮದ ಆರಂಭದಲ್ಲಿ ಬುರ್ದಾ ಮಜ್ಲಿಸ್ ಏರ್ಪಡಿಸಲಾಗಿತ್ತು. ಈ ವೇಳೆ KMCC ಕಾಸರಗೋಡು ಜಿಲ್ಲಾ ಅಧ್ಯಕ್ಷ ಹಸನ್ ಬತ್ತೇರಿ, ಮುಸ್ಲಿಂ ವೆಲ್ಫೇರ್ ಜಿದ್ದಾ ಸಮಿತಿ ಅಧ್ಯಕ್ಷ ಮುನೀರ್ ಮೊಗರಾಲ್, ಶಿಫಾ ಮಜ್ಲಿಸ್ ಸೌದಿ ಅರೇಬಿಯಾ ಆರ್ಗನೈಸರ್ ಮುಹಮ್ಮದ್ ಕಮಾಲ್ ರಝ್ವಿ ಅಂಜದಿ ಕೆಸಿಎಫ್ ರಾಷ್ಟ್ರೀಯ ಖಜಾಂಚಿ ಮುಹಮ್ಮದ್ ಕಲ್ಲರ್ಬೆ, ಸಯ್ಯದ್ ಅಬ್ದುಲ್ ರಹ್ಮಾನ್ ಉಚ್ಚಿಲ ತಂಙಳ್, ಕೆಸಿಎಫ್ ಜಿದ್ದಾ ಝೋನ್ ಕಾರ್ಯದರ್ಶಿ ಇಬ್ರಾಹಿಂ ಕಿನ್ಯಾ ಮತ್ತಿತರರು ಉಪಸ್ಥಿತರಿದ್ದರು. ಅಶ್ರಫ್ ಎಂ.ಎಸ್ ಸ್ವಾಗತಿಸಿ ವಂದಿಸಿದರು. ಡಿ.ಕೆ.ಲತೀಫ್ ಹಾಜಿ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು.

ವರದಿ : ಹಕೀಂ ಬೋಳಾರ್