janadhvani

Kannada Online News Paper

ಮಜ್ಲಿಸ್ ಆದೂರು ವತಿಯಿಂದ ದಮಾಮ್ ನಲ್ಲಿ ಮಜ್ಲಿಸೆ ಮಹಬ್ಬಾ

ದಮಾಮ್: ಮಜ್ಲಿಸ್ ಶಿಫಾ ಅಸ್ಸಖಾಫ ಅಲ್ ಇಸ್ಲಾಮಿ ಆದೂರು ಇದರ ದಮಾಮ್ ಘಟಕದ ವತಿಯಿಂದ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮ ದಮಾಮಿನ ಹೋಲಿಡೇಸ್ ಹೋಟೆಲ್‌ ನಲ್ಲಿ ಗುರುವಾರ ನಡೆಯಿತು.

ಸಯ್ಯಿದ್ ಅಶ್ರಫ್ ಅಸ್ಸಖಾಫ್ ಆದರೂ ತಂಙಳ್ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದು, ಲೋಕದಲ್ಲಿ ಅತ್ಯುತ್ತಮ ಸ್ವಭಾವದ ವ್ಯಕ್ತಿಯೊಬ್ಬರಿದ್ದರೆ ಅದು ಮುಹಮ್ಮದ್ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಆಗಿದ್ದಾರೆ ಎಂದು ಖುರಾನಿನ ಆಯತ್ ಸಮರ್ಥಿಸಿ ಮಾತನಾಡಿದರು.

ಯೂಸುಫ್ ಸಅದಿ ಅಯ್ಯಂಗೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಅದ್ ಅಮಾನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಬಿಯವರ ಸ್ವಭಾವವನ್ನು ಅನುಸರಿಸುತ್ತಾ, ಅವರ ಆದೇಶದಂತೆ ನಡೆದ ,ನಬಿ ಯವರ ಗೆಳೆಯ ಅಬೂಬಕ್ಕರ್ ಸಿದ್ದೀಕ್ (ರ.ಅ) ಗೆಳೆತನದ ಬಗ್ಗೆ ವಿವರಿಸಿದರು. ವಿಷಪೂರಿತ ಹಾವಿನ ಕಡಿತಕ್ಕೊಳಗಾದರೂ, ಸ್ನೇಹಿತನ ನಿದ್ದೆ ಗೆ ಭಂಗವಾಗದಿರಲಿ ಎಂಬ ಕಾರಣಕ್ಕೆ ನೋವಿನಲ್ಲೂ ಕಣ್ಣೀರು ಹಾಕಲು ಹಿಂದೇಟು ಹಾಕಿದ ಆ ಗೆಳೆತನ ನಮಗೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಜಾಫರ್ ತಂಙಳ್ ಕಾಸರಗೋಡು, ಅಬ್ದುಲ್ ಖಾದರ್ ಸಅದಿ ಆದೂರು,ದಮಾಮ್ ಘಟಕದ ಅಧ್ಯಕ್ಷ ಖಾಸೀಂ ಹಾಜಿ ಅಡ್ಡೂರು, ಮುಹಮ್ಮದ್ ಸಅದಿ ಪಡಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಹಕೀಂ ಬೋಳಾರ್