ದಮಾಮ್: ಮಜ್ಲಿಸ್ ಶಿಫಾ ಅಸ್ಸಖಾಫ ಅಲ್ ಇಸ್ಲಾಮಿ ಆದೂರು ಇದರ ದಮಾಮ್ ಘಟಕದ ವತಿಯಿಂದ ಮಜ್ಲಿಸೆ ಮಹಬ್ಬಾ ಕಾರ್ಯಕ್ರಮ ದಮಾಮಿನ ಹೋಲಿಡೇಸ್ ಹೋಟೆಲ್ ನಲ್ಲಿ ಗುರುವಾರ ನಡೆಯಿತು.

ಸಯ್ಯಿದ್ ಅಶ್ರಫ್ ಅಸ್ಸಖಾಫ್ ಆದರೂ ತಂಙಳ್ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದು, ಲೋಕದಲ್ಲಿ ಅತ್ಯುತ್ತಮ ಸ್ವಭಾವದ ವ್ಯಕ್ತಿಯೊಬ್ಬರಿದ್ದರೆ ಅದು ಮುಹಮ್ಮದ್ ನೆಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಆಗಿದ್ದಾರೆ ಎಂದು ಖುರಾನಿನ ಆಯತ್ ಸಮರ್ಥಿಸಿ ಮಾತನಾಡಿದರು.
ಯೂಸುಫ್ ಸಅದಿ ಅಯ್ಯಂಗೇರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಅದ್ ಅಮಾನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಬಿಯವರ ಸ್ವಭಾವವನ್ನು ಅನುಸರಿಸುತ್ತಾ, ಅವರ ಆದೇಶದಂತೆ ನಡೆದ ,ನಬಿ ಯವರ ಗೆಳೆಯ ಅಬೂಬಕ್ಕರ್ ಸಿದ್ದೀಕ್ (ರ.ಅ) ಗೆಳೆತನದ ಬಗ್ಗೆ ವಿವರಿಸಿದರು. ವಿಷಪೂರಿತ ಹಾವಿನ ಕಡಿತಕ್ಕೊಳಗಾದರೂ, ಸ್ನೇಹಿತನ ನಿದ್ದೆ ಗೆ ಭಂಗವಾಗದಿರಲಿ ಎಂಬ ಕಾರಣಕ್ಕೆ ನೋವಿನಲ್ಲೂ ಕಣ್ಣೀರು ಹಾಕಲು ಹಿಂದೇಟು ಹಾಕಿದ ಆ ಗೆಳೆತನ ನಮಗೆ ಮಾದರಿಯಾಗಿದೆ ಎಂದರು.

ವೇದಿಕೆಯಲ್ಲಿ ಜಾಫರ್ ತಂಙಳ್ ಕಾಸರಗೋಡು, ಅಬ್ದುಲ್ ಖಾದರ್ ಸಅದಿ ಆದೂರು,ದಮಾಮ್ ಘಟಕದ ಅಧ್ಯಕ್ಷ ಖಾಸೀಂ ಹಾಜಿ ಅಡ್ಡೂರು, ಮುಹಮ್ಮದ್ ಸಅದಿ ಪಡಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಹಕೀಂ ಬೋಳಾರ್















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ