ಕುವೈತ್ ಸಿಟಿ: ಖಾಸಗಿ ವಲಯದ ಸಿಬ್ಬಂದಿ ಏಳು ದಿನಗಳು ನಿರಂತರವಾಗಿ ಕೆಲಸಕ್ಕೆ ಗೈರು ಹಾಜರಾದರೆ ಅವರು ರಾಜಿನಾಮೆ ನೀಡಿರುವುದಾಗಿ ಪರಿಗಣಿಸುವಂತೆ ಕುವೈತ್ ಸಂಸತ್ತು ನಿರ್ದೇಶನ ನೀಡಿದೆ.
ಕಾರ್ಮಿಕರ ವಿರುದ್ಧ ನೀಡಲಾಗುವ ದೂರಿನಲ್ಲಿ ಸಾಕ್ಷ್ಯಗಳ ಬೆಂಬಲವಿದ್ದರೆ ವಾಸ ಪರವಾನಗಿ ರದ್ದು ಪಡಿಸುವಂತೆ ಕಾನೂನಿನಲ್ಲಿ ಬದಲಾವಣೆ ತರಬೇಕೆಂದು ಸಂಸದರು ಬೇಡಿಕೆ ಇಟ್ಟಿದ್ದಾರೆ. ಮುಹಮ್ಮದ್ ಅಲ್ ದಲಾಲ್, ಅಹ್ಮದ್ ಅಲ್ ಫಾದಿಲ್, ಸಫ ಅಲ್ ಹಾಶಿಂ, ಖಾಲಿದ್ ಅಲ್ ಶತ್ತಿ, ಸಲಾಹ್ ಅಲ್ ಖುರ್ಷಿದ್ ಮುಂತಾದ ಸಂಸದರು ಈ ಬೇಡಿಕೆ ಮುಂದಿಟ್ಟಿದ್ದಾರೆ.
ಕಾರಣ ಇಲ್ಲದೆ ಖಾಸಗಿ ವಲಯದ ಕಾರ್ಮಿಕರು ಒಂದು ವಾರದ ವರೆಗೆ ನಿರಂತರವಾಗಿ ಅಥವಾ ವರ್ಷದಲ್ಲಿ 20 ದಿನಗಳಿಗಿಂತ ಅಧಿಕ ರಜೆ ಪಡೆದರೆ ಅಂಥವರು ಕೆಲಸಕ್ಕೆ ರಾಜಿನಾಮೆ ನೀಡಿರುವುದಾಗಿ ಪರಿಗಣಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಸಂಸ್ಥೆಯ ಕಡತದಿಂದ ಕಾರ್ಮಿಕನ ಹೆಸರನ್ನು ಕಿತ್ತು ಹಾಕಲು ಉದ್ಯೋಗದಾತನಿಗೆ ಅವಕಾಶ ನೀಡಬೇಕೆಂದು ನಿರ್ದೇಶನ ನೀಡಲಾಗಿದೆ.
ವಾರ್ಷಿಕ ರಜಾದಲ್ಲಿ ತೆರಳಿ ಆರು ತಿಂಗಳ ವರೆಗೆ ಊರಲ್ಲಿ ಉಳಿದು ಕೊಳ್ಳುವ ಕಾರ್ಮಿಕರಿದ್ದು, ಕಾರ್ಮಿಕ ಗೈರಾದ ಕಾರಣ ಇದರ ವಿರುದ್ದ ದೂರು ನೀಡಲು ಉದ್ಯೋಗದಾತನಿಗೆ ಸಾಧ್ಯವಾಗದ ಪರಿಸ್ಥಿತಿ ಇದೆ. ಕಾರ್ಮಿಕ ಹಕ್ಕಿನಂತೆ ಉದ್ಯೋಗದಾತರ ಹಕ್ಕು ಕೂಡ ಸಂರಕ್ಷಣೆ ಮಾಡಬೇಕಾಗಿದೆ ಎಂದು ಸಂಸದರು ಬೆಟ್ಟು ಮಾಡಿದ್ದಾರೆ.
ಮನ್ಪವರ್ ಅಥಾರಿಟಿಯಲ್ಲಿ ಸಮರ್ಪಿಸುವ ದೂರುಗಳಿಗೆ ಸಾಕ್ಷ್ಯದ ಹಿನ್ನೆಲೆ ಇದ್ದರೆ ಕಾರ್ಮಿಕರ ವಾಸ ಪರವಾನಗಿ ರದ್ದು ಮಾಡುವ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ನಿರ್ದೇಶನದಲ್ಲಿ ಎಂಪಿಗಳು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ