ಬ್ರಹ್ಮಾವರ ; ಬ್ರಹ್ಮಾವರ ಸೆಕ್ಟರ್ ಇದರ ವತಿಯಿಂದ ಉಲಾಝ್ ಶಿಬಿರ ದಿನಾಂಕ 28/9/19 ರಂದು ಖದೀಮ್ ಜಾಮಿಯ ಮಸ್ಜಿದ್ ಹಾಲ್ ,ಹೊನ್ನಾಳ ದಲ್ಲಿ ಸೆಕ್ಟರ್ ಅಧ್ಯಕ್ಷರಾದ ಶಂಶುದ್ದಿನ್ ರಂಗನಕೆರೆ ಇವರ ಅಧ್ಯಕ್ಷತೆಯಲ್ಲಿ ನೆಡಸಲಾಯಿತು. ಸೆಕ್ಟರ್ ಗೌರವ ಸಲಹೆಗಾರರಾದ ಸುಬುಹಾನ್ ಅಹಮದ್ ಹೊನ್ನಾಳ ಉದ್ಘಾಟಿಸಿದರು.

ಉಡುಪಿ ಡಿವಿಷನ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಸಹದಿ ದೊಡ್ಡಣಗುಡ್ಡೆ ಉಲಾಝ್ ತರಗತಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ, ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ, ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಶಿಹಾಬ್ ರಂಗನಕೆರೆ, ಸೆಕ್ಟರ್ ಪ್ರ.ಕಾರ್ಯದರ್ಶಿ ಸಿರಾಜ್ ಗಾಂಧಿನಗರ, ಉಪಾಧ್ಯಕ್ಷ ರಶೀದ್ ಸಾಸ್ತಾನ, ಕೋಶಾಧಿಕಾರಿ ರಶೀದ್ ಗಾಂಧಿನಗರ, ರಂಗನಕೆರೆ ಶಾಖಾಧ್ಯಕ್ಷ ಮುತ್ತಲಿಬ್, ಭದ್ರಗಿರಿ ಕಾರ್ಯದರ್ಶಿ ಶಾಹಿಲ್ ಕೆ.ಟಿ, ಹೊನ್ನಾಳ SYS ನಾಯಕರಾದ ಹನೀಪ್ ಬಾಯ್, ಹಾಗೂ ಇನ್ನಿತರ ನಾಯಕರು ಉಪಸ್ಥಿತಿ ಇದ್ದರು.
ಸೆಕ್ಟರ್ ಉಪಾಧ್ಯಕ್ಷ ಇಬ್ರಾಹಿಂ ರಂಗನಕೆರೆ ಸ್ವಾಗತಿಸಿದರು. ಕಾರ್ಯದರ್ಶಿ ರಾಹಿದ್ ಹೊನ್ನಾಳ ವಂದಿಸಿದರು.
ವರದಿ : ಪಿ ಎಂ ಎಸ್ ಪಡುಬಿದ್ರಿ






